7:05 AM Wednesday14 - May 2025
ಬ್ರೇಕಿಂಗ್ ನ್ಯೂಸ್
Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌…

ಇತ್ತೀಚಿನ ಸುದ್ದಿ

ತುಳು, ಕನ್ನಡ ಎರಡೂ ಭಾಷೆಯಲ್ಲಿ ರಾಮಾಯಣ ರಚಿಸಿದ ಕೀರ್ತಿ ಮಂದಾರ ಕೇಶವ ಭಟ್ಟರದ್ದು: ಮಾಜಿ ಸಚಿವ ಅಭಯಚಂದ್ರ ಜೈನ್

06/08/2022, 16:34

ಮಂಗಳೂರು(reporterkarnataka.com) : ತುಳು ಮತ್ತು ಕನ್ನಡ ಎರಡೂ ಭಾಷೆಯಲ್ಲಿ ರಾಮಾಯಣವನ್ನು ರಚಿಸಿದ ಕೀರ್ತಿ ಮಂದಾರ ಕೇಶವ ಭಟ್ಟರದ್ದು, ಜಗತ್ತಿನಲ್ಲಿ ಎಲ್ಲೂ ಎರಡು ಭಾಷೆಯಲ್ಲಿ ಒಂದೇ ಕವಿ ರಾಮಾಯಣವನ್ನು ರಚಿಸಿದ ಉಲ್ಲೇಖಗಳಿಲ್ಲ. ಮಂದಾರ ಕೇಶವ ಭಟ್ಟರಿಗೆ ಮಾತ್ರ ಇದು ಸಾಧ್ಯವಾಯಿತು ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ಶ್ಲಾಘಿಸಿದರು.

ಸಾಂಸ್ಕೃತಿಕ ನಗರಿ ಮೂಡಬಿದಿರೆಯ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮಿಗಳ ಸರ್ವಾಧ್ಯಕ್ಷತೆಯಲ್ಲಿ ನಡೆಯುತ್ತಿರುವ ಮಂದಾರ ರಾಮಾಯಣ ಸಪ್ತಾಹದ ಸಭಾ ಕಾರ್ಯಕ್ರಮದಲ್ಲಿ ಅವರು
ಮಾತನಾಡಿದರು.

ಮಂದಾರ ರಾಮಾಯಣ ಎಂಬ ಕನ್ನಡ ಮತ್ತು ತುಳು ಸರಳ ಆಡು ಭಾಷೆಯಲ್ಲಿ ರಚಿತವಾಗಿದ್ದು, ಇದು ಸಾಮಾನ್ಯ ಜನರಿಗೂ ರಾಮಾಯಣವನ್ನು ತಿಳಿಸುವ ಕವಿ ಉದ್ದೇಶವನ್ನು ತಿಳಿಸುತ್ತದೆ. ಕವಿ ಮಂದಾರರ  ರಾಮಾಯಣವನ್ನು ತಿಳಿಸುವ ಸಪ್ತಾಹಕ್ಕೆ ಯಶಸ್ಸಾಗಲಿ. ನಾವೆಲ್ಲರೂ ಕವಿ ಮಂದಾರರ ರಾಮಾಯಣದ ಆದರ್ಶಗಳನ್ನು
ಪಾಲಿಸೋಣ, ಮಂದಾರರ ಇನ್ನೂ ಹೆಚ್ಚೆಚ್ಚು ಕಾರ್ಯಕ್ರಮಗಳು ಬರಲಿ ಎಂದು ಶುಭ ಹಾರೈಸಿದರು. 

ಇದೇ ಸಂದರ್ಭದಲ್ಲಿ ಅಶೋಕ್ ಶೆಟ್ಟಿ ಸರಪಾಡಿ ಹಾಗೂ ದಾಮೋದರ ನಿಸರ್ಗ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಎಸ್. ಡಿ. ಸಂಪತ್ ಸಾಮ್ರಾಜ್ಯ, ಅಬ್ದುಲ್ಲಾ ಪುತ್ತಿಗೆ, ಮಂದಾರರ ಪುತ್ರಿ ಶಾಂಭವಿ ಬಾಲಕೃಷ್ಣ ಭಟ್, ದಿನೇಶ್ ಆನಡ್ಕ,  ಸಂಘಟಕರಾದ ಡಾ. ರಾಜೇಶ್ ಆಳ್ವ, ಧನಕೀರ್ತಿ ಬಲಿಪ, ಡಾ.ಮಂದಾರ ರಾಜೇಶ್ ಭಟ್, ಚಂದ್ರಹಾಸ ದೇವಾಡಿಗ, ಭಾಸ್ಕರ ಕಾಸರಗೋಡು, ಪ್ರಮೋದ್ ಸಪ್ಪೆ, ಮಂದಾರ ಶಾರದಾಮಣಿ ಉಪಸ್ಥಿತರಿದ್ದರು.

ದಿನಕರ ಪಚ್ಚನಾಡಿ, ಶಿವಪ್ರಸಾದ್ ಎಡಪದವು, ಶಾಲಿನಿ ಹೆಬ್ಬಾರ್ ಕಂಠಸಿರಿಯಿಂದ ಮೂಡಿಬಂದ ವಾಚನ ವ್ಯಾಖ್ಯಾನ ಕಾರ್ಯಕ್ರಮ ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು