6:44 PM Saturday13 - December 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ… ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು… ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ: ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಭರವಸೆ

ಇತ್ತೀಚಿನ ಸುದ್ದಿ

ತುಳು ನೆಲದ ಝಳಕ್ ತೋರಿಸುವ ‘ಕೊರಮ್ಮ’: ಹಳೆ ತಲೆಮಾರಿನ ಬದುಕಿನ‌ ಕಥಾ ಹಂದರ

13/08/2023, 21:38

ಮಂಗಳೂರು(reporterkarnataka.com): ‘ಕೊರಮ್ಮ …ಎ ಹ್ಯೂಮನ್’ ಎನ್ನುವ ಟೈಟಲ್‌ನೊಂದಿಗೆ ಆರಂಭವಾಗುವ ಸಿನಿಮಾ ಇದು. ತುಳುನಾಡಿನ ಸಂಸ್ಕೃತಿ, ಭಾಷೆ, ಮಾನವೀಯ ಮೌಲ್ಯವನ್ನು ಒಂದು ಫ್ರೇಮ್ ನೊಳಗೆ ಕೊರಮ್ಮದಲ್ಲಿ ಸೆರೆ ಹಿಡಿಯುವ ಪ್ರಯತ್ನ ನಡೆದಿದೆ.
ಕೊರಮ್ಮದಲ್ಲಿ ಹಳೆ ತಲೆಮಾರಿನ ಸುಂದರ ಬದುಕನ್ನು ಅತೀ ಸುಂದರವಾಗಿ ಕಟ್ಟಿಕೊಡಲಾಗಿದೆ. ಇದರಲ್ಲಿ
ಈ ನೆಲದ ಕಥೆ ನೇತ್ರಾವತಿಯಂತೆ, ಕುಮಾರಧಾರೆಯಂತೆ,‌ ಫಲ್ಗುಣಿಯಂತೆ ಸರಾಗವಾಗಿ ಹರಿದು ಬರುತ್ತದೆ. ಮಾನವೀಯ ಮೌಲ್ಯ, ಸಂಬಂಧ, ಬಂಧುತ್ವವನ್ನು ಕಲಿಸಿಕೊಡುತ್ತದೆ. ತುಳುನಾಡಿನ ಜನರ ವಾಸ್ತವ ಜೀವನಕ್ಕೂ ಸಿನಿಮಾಕ್ಕೂ ತುಂಬಾ ನೆಂಟಸ್ತಿಕೆ ಕಂಡು ಬರುತ್ತದೆ.


ಜಾತಿ -ಧರ್ಮದ ಮೇಲಾಟದಲ್ಲಿ ಯುವಜನತೆ ಸಂಬಂಧಗಳನ್ನು ಕಡಿದು ಹೋಗಬಾರದು, ಕೊಂಡಿಯಂತೆ ಬೆಸೆದುಕೊಂಡು ಮುಂದೆ ಸಾಗಬೇಕು ಎಂಬ ಸಂದೇಶವನ್ನು ನಿರ್ದೇಶಕ ಶಿವಧ್ವಜ್ ಪ್ರೇಕ್ಷಕರಿಗೆ ನೀಡುವಲ್ಲಿ ಯಶಸ್ವಿಯಾದಂತೆ ಕಾಣುತ್ತದೆ.
ಚಿತ್ರವನ್ನು ವೀಕ್ಷಿಸುವಾಗ ನಮ್ಮದೇ ಹಳ್ಳಿಯ ನಮ್ಮ ಮನೆಯಲ್ಲಿ ಕೂತಿರುವ ಭಾವನೆಯನ್ನು ಹೆಚ್ಚಿನ ಪ್ರೇಕ್ಷಕರು ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿ ಸಾಂಪ್ರದಾಯಿಕ ಪರಿಕರಗಳನ್ನು ಬಳಸಲಾಗಿದೆ.
ಶುದ್ಧ ತುಳು ಭಾಷೆಯ ಪ್ರಯೋಗವಾಗಿದೆ. ಜಂಜಾಟದ ಬದುಕಿನ ಧಾವಂತದಲ್ಲಿ ನಾವೇನೋ ಕಳೆದುಕೊಳ್ಳುತ್ತಿದ್ದೇವೆ, ಹಾಗಾಗಬಾರದು ಎನ್ನುವುದನ್ನು ಸಿನಿಮಾ ಸಾರಿ ಸಾರಿ ಹೇಳುತ್ತದೆ.
ಪಾತ್ರಗಳ ನೂಕು ನುಗ್ಗಲು ಇಲ್ಲದ ಕೂರಮ್ಮದಲ್ಲಿ
ಸುರೇಶ್ ಬೈರಸಂದ್ರ ಅವರ
ಅದ್ಭುತ ಛಾಯಾಗ್ರಹಣವಿದೆ. ಒಳೆಯ ಸಂಗೀತವಿದೆ.
……………..

ಇತ್ತೀಚಿನ ಸುದ್ದಿ

ಜಾಹೀರಾತು