7:36 PM Tuesday8 - July 2025
ಬ್ರೇಕಿಂಗ್ ನ್ಯೂಸ್
ಪುನರ್ವಸು ಮಳೆ ಅಬ್ಬರ: ಕೊಚ್ಚಿ ಹೋಗುವ ಭೀತಿಯಲ್ಲಿ ತೀರ್ಥಹಳ್ಳಿಯ ಕುನ್ನಿಕೇವಿ ಸೇತುವೆ! ತುಂಗಾ ಕಮಾನು ಸೇತುವೆ ಮೇಲೆ ಹರಿಯುತ್ತಿದೆ ನೀರು!: ಹೆದ್ದಾರಿ ಇಂಜಿನಿಯರ್ ಗಳ ಅದ್ಬುತ… ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ…

ಇತ್ತೀಚಿನ ಸುದ್ದಿ

ತೀರ್ಥಹಳ್ಳಿ: ಟಿಂಬರ್ ಲೋಡ್ ಮಾಡುವಾಗ ತಲೆ ಮೇಲೆ ಬಿದ್ದ ಮರದ ದಿಮ್ಮಿ ಬಿದ್ದು ವ್ಯಕ್ತಿ ಸಾವು

08/07/2025, 19:12

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಟಿಂಬರ್ ಲೋಡ್ ಕೆಲಸಕ್ಕೆಂದು ಹೋಗಿದ್ದ ವೇಳೆಯಲ್ಲಿ ಮರದ ದಿಮ್ಮಿಗಳನ್ನು ಮೇಲಿನಿಂದ ಕೆಳಗೆ ತಂದು ಹಾಕುತ್ತಿರುವಾಗ ಕಾಲು ಜಾರಿ ಬಿದ್ದ ಕಾರಣದಿಂದ ಮರದ ದಿಮ್ಮಿ ಮೈಮೇಲೆ ಮೇಲೆ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಸವಾನಿಯಲ್ಲಿ ನಡೆದಿದೆ.
ಯೋಗೇಂದ್ರ (52 ) ಮೃತಪಟ್ಟ ದುರ್ದೈವಿ. ದೇವಂಗಿ ಗ್ರಾಮದ ವ್ಯಕ್ತಿ ಯೊಬ್ಬರು ಟಿಂಬರ್ ಲೋಡ್ ಮಾಡಲು ಹೇಳಿದ್ದ ಕಾರಣದಿಂದ ಬಸವಾನಿ ಗ್ರಾಮದ ಜ್ಯೋತಿಸರ ಎಂಬಲ್ಲಿಗೆ ಯೋಗೇದ್ರ ಸೇರಿ ನಾಲ್ವರು ಕೆಲಸಕ್ಕಾಗಿ ಹೋಗಿದ್ದರು. ಈ ವೇಳೆ ಮರದ ದಿಮ್ಮಿಗಳನ್ನು ಮೇಲಿನಿಂದ ಕೆಳಗೆ ತಂದು ಹಾಕುತ್ತಿರುವಾಗ ಕಾಲು ಜಾರಿ ಬಿದ್ದು ಮರದ ದಿಮ್ಮಿ ಯೋಗೇಂದ್ರ ಎಂಬುವರ ತಲೆಗೆ ಹಾಗೂ ಮೂಗಿಗೆ ಬಲವಾಗಿ ಬಡಿದು ರಕ್ತ ಸ್ರಾವವಾಗಿರುತ್ತದೆ.
ತಕ್ಷಣವೇ ಅವರ ಸ್ನೇಹಿತರು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಆ ವೇಳೆಗೆ ಯೋಗೇದ್ರ ಎಂಬುವರು ಮೃತಪಟ್ಟಿರುತ್ತಾರೆ. ಕೂಲಿ ಕೆಲಸಕ್ಕೆಂದು ಪರಸ್ಥಳದಿಂದ ಕರೆಸಿ ಅತೀ ಭಾರವಾದಂತಹ ಮರದ ದಿಮ್ಮಿಗಳನ್ನು ಮೇಲಿನಿಂದ ತಂದು ಕೆಳಗೆ ಹಾಕಲು ಒತ್ತಾಯ ಪಡಿಸಿದ್ದು ಯಾವುದೇ ಮುಂಜಾಗ್ರತೆ ಕ್ರಮವನ್ನು ಕೆಲಸಗಾರರಿಗೆ ಕೆಲಸ ಮಾಡಲು ತೆಗೆದುಕೊಳ್ಳದೆ ನಿರ್ಲಕ್ಷ್ಯವಹಿಸಿ ನನ್ನ ತಮ್ಮ ಯೋಗೇಂದ್ರ ರವರ ಸಾವಿಗೆ ಕಾರಣನಾದ ಟಿಂಬರ್ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಯೋಗೇದ್ರ ಅವರ ಸಹೋದರ ದೂರು ನೀಡಿದ್ದಾರೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕಾರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು