4:29 AM Tuesday13 - May 2025
ಬ್ರೇಕಿಂಗ್ ನ್ಯೂಸ್
Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌…

ಇತ್ತೀಚಿನ ಸುದ್ದಿ

ಥೇಟ್ ಮಹಾತ್ಮ ಗಾಂಧೀಜಿಯಂತೆ ಇವರ ವೇಷ!: ರಾಷ್ಟ್ರಪಿತ ಪುತ್ಥಳಿಯಂತೆ ತಾಸುಗಟ್ಟಲೆ ಕದಲದೆ ನಿಲ್ಲುತ್ತಾರೆ!!

25/11/2023, 19:33

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಉದರ ನಿಮಿತ್ತಂ ಬಹುಕೃತ ವೇಷಂ ಎಂಬಂತೆ ಮನುಷ್ಯ ತನ್ನ ಜೀವನೋಪಾಯ ಹಾಗೂ ಹೊಟ್ಟೆಪಾಡಿಗಾಗಿ ಏನೆಲ್ಲಾ ಮಾಡುತ್ತಾನೆ ನೀವೇ ನೋಡಿ.
ಇಲ್ಲೊಬ್ಬ ವ್ಯಕ್ತಿ ತನ್ನ ಹೊಟ್ಟೆಪಾಡಿಗಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನೆ ನಾಚಿಸುವಂತಹ ವೇಷದಾರಿಯಾಗಿ ನಿಂತಿದ್ದಾನೆ.
ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಮುಂಭಾಗ ದಿಢೀರ್ ಪ್ರತ್ಯಕ್ಷವಾದ ಈ ಮಹಾತ್ಮ ನೋಡುವುದಕ್ಕೆ ಥೇಟ್ ಮಹಾತ್ಮ ಗಾಂಧಿಯಂತೆಯೇ ಕಾಣುತ್ತಿದ್ದಾನೆ. ಇವನು ನಿಂತಿರುವ ಭಂಗಿ ಯಾವುದೇ ಮಹಾತ್ಮ ಗಾಂಧೀಜಿಯವರ ಚಿತ್ರ ಹಾಗೂ ಪುತ್ತಳಿಗಿಂತ ಕಮ್ಮಿ ಇಲ್ಲ. ತಲೆಯಿಂದ ಉಂಗುಷ್ಟದವರೆಗೂ ಒಂದು ರೀತಿ ಸಿಲ್ವರ್ ಬಣ್ಣ ಹಚ್ಚಿಕೊಂಡು ಕಣ್ಣಿಗೆ ಕನ್ನಡಕ ಕೈಯಲ್ಲಿ ಕೋಲು ಹಿಡಿದು ಕೊಂಡು ನಿಂತಿರುವ ದೃಶ್ಯ ಗಾಂಧೀಜಿ ಅವರ ಪುತ್ಥಳಿ ಯಂತೆ ಭಾಸವಾಗುತ್ತಿದೆ.


ಸುಡು ಬಿಸಿಲಿನಲ್ಲಿಯೇ ಯಾವುದೇ ಚಲನವಲನವಿಲ್ಲದೆ, ಕಣ್ಣು ಸಹ ಮಿಟುಕಿಸದೆ, ಮಾತನ್ನು ಸಹ ಆಡದೇ ನಿರ್ಜೀವ ಶಿಲೆಯಂತೆಯೇ ನಿಂತಿರುವ ಈತನ ಭಂಗಿ ನಿಜಕ್ಕೂ ಮೆಚ್ಚುವಂಥದ್ದೆ ಆಗಿದೆ.
ದೇವಾಲಯಕ್ಕೆ ಬರುವ ಭಕ್ತರು ಇದನ್ನು ನೋಡಿ ಇದೊಂದು ಪುತ್ತಳಿಯೇ ಇರಬೇಕು ಎಂದು ಭಾವಿಸಿದರೆ ಮತ್ತೆ ಕೆಲವರು ಆತನ ಮೈ ಕೈ ಹಾಗೂ ಕೋಲನ್ನು ಮುಟ್ಟಿ ಇದು ಪುತ್ಥಳಿಯೋ ಅಥವಾ ಮನುಷ್ಯನೋ ಎಂದು ಖಾತರಿಪಡಿಸಿಕೊಳ್ಳುತ್ತಿದ್ದರು.
ಕೆಲವು ಭಕ್ತರು ಭಕ್ತಿಯಿಂದ ಮುಟ್ಟಿ ನಮಸ್ಕರಿಸಿದರೆ ಮತ್ತೆ ಕೆಲವರು ಸೆಲ್ಫಿ ಹಾಗೂ ಫೋಟೋ ತೆಗೆಸಿಕೊಂಡು ಖುಷಿಪಟ್ಟು ತಮ್ಮ ಕೈಲಾದ ಹಣ ಸಹಾಯ ಮಾಡುತ್ತಿದ್ದರು.
ಒಟ್ಟಾರೆ ಯಾರೇ ಮುಟ್ಟಿದರು ಏನೇ ಮಾತನಾಡಿದರು ತಾನು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಜೀವ ವಸ್ತುವಿನಂತೆ ನಿಂತುಕೊಂಡೇ ಎಲ್ಲಾ ಸಾರ್ವಜನಿಕರ ಗಮನ ಸೆಳೆದ ಮಹಾತ್ಮ ಗಾಂಧಿ ವೇಷದಾರಿ.

ಇತ್ತೀಚಿನ ಸುದ್ದಿ

ಜಾಹೀರಾತು