9:46 PM Monday22 - September 2025
ಬ್ರೇಕಿಂಗ್ ನ್ಯೂಸ್
ಜಿಎಸ್ ಟಿ ಜಾರಿ ಮಾಡಿದ್ದೂ ಮೋದಿ, ಜಿಎಸ್ ಟಿ ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ,… ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆ ಆದವರೆಲ್ಲಾ ಹಿಂದುಳಿದವರೇ ಆಗಿದ್ದಾರೆ: ಸಿಎಂ… ವಿರಾಜಪೇಟೆ ಆರೆಂಜ್ ಸ್ಪಾ -ಬ್ಯೂಟಿ ಪಾರ್ಲರ್ ದಾಳಿ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ… Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:…

ಇತ್ತೀಚಿನ ಸುದ್ದಿ

ತಾರಕ್ಕೇರಿದ ಮಂಗಳೂರು ನೀರಿನ ಸಮಸ್ಯೆ; ಕಾಲ್ ಎತ್ತದ ಎಂಜಿನಿಯರ್ ಗಳು: ಮೇಯರ್ ಗೆ ಕಾರ್ಪೋರೇಟರ್ ಗಳ ದೂರು

12/02/2024, 19:44

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.ಕಾಂ

ಮಂಗಳೂರು ನಗರದಲ್ಲಿ ನೀರಿನ ಸಮಸ್ಯೆ ತಾರಕಕ್ಕೇರಿದ್ದು, ಇದರ ಬಿಸಿ ಸ್ವತಃ ಜನಪ್ರತಿನಿಧಿಗಳಾದ ಕಾರ್ಪೋರೇಟರ್ ಗಳಿಗೆ ತಟ್ಟಲಾರಂಭಿಸಿದೆ.

ಮಂಗಳೂರು ಮಹಾನಗರಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಇಂದು ನಡೆದ ಪಾಲಿಕೆಯ ವಿಶೇಷ ಸಭೆಯಲ್ಲಿ ಇದು ವ್ಯಕ್ತವಾಯಿತು. ನೀರಿನ ಸಮಸ್ಯೆ ಹೇಳಲು ಕಾಲ್ ಮಾಡಿದರೆ, ಪಾಲಿಕೆ ಎಂಜಿನಿಯರ್ ಗಳು ಕರೆ ಸ್ವೀಕರಿಸುತ್ತಿಲ್ಲ ಎಂದು ಕಾರ್ಪೋರೇಟರ್ ಗಳು ದೂರಿದ್ದಾರೆ. ಮಾಜಿ ಉಪ ಮೇಯರ್ ಒಬ್ಬರು ನೀರು ಬಾರದಿದ್ದರೆ, ತಾನು ಒಂದು ಗುಟುಕು ನೀರು ಕುಡಿಯೋದಿಲ್ಲ ಎಂದು ಶಪಥ ಮಾಡಿದ್ದಾರೆ. ನೀರಿನ ಬರದ ಬಗ್ಗೆ ಪಾಲಿಕೆ ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ ಆಡಳಿತ ಪಕ್ಷವನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾರ್ಪೋರೇಟರ್ಗಳ ಕರೆಗಳನ್ನು ಇಂಜಿನಿಯರ್ ಸ್ವೀಕರಿಸುತ್ತಿಲ್ಲ. ಕೆಲವರಲ್ಲಿ ಮಾತನಾಡಲು ಭಯ ಆಗುತ್ತೆ. ಹಾಗಾದರೆ ಪಾಲಿಕೆ ಸದಸ್ಯರಿಗೆ ಗೌರವ ಇಲ್ಲವೇ ಎಂದು ಕಾರ್ಪೋರೇಟರ್ ಗಾಯತ್ರಿ ರಾವ್ ಅವರು ಮೇಯರ್ ಅವರಲ್ಲಿ ದೂರಿದರು. ಮಾಜಿ ಉಪ ಮೇಯರ್, ಕಾರ್ಪೋರೇಟರ್ ಪೂರ್ಣಿಮಾ ಮಾತಾನಾಡಿ, ನನ್ನ ವಾರ್ಡ್ ಗೆ ನಾಳೆ ನೀರು ಬರದಿದ್ದಲ್ಲಿ ಒಂದು ಹನಿ ನೀರು ಕುಡಿಯೋದಿಲ್ಲ. ಪಾಲಿಕೆ ಮುಂದೆ ಕುಳಿತು ಧರಣಿ ಕೂರುವೆ ಎಂದು ಎಚ್ಚರಿಸಿದರು.
ಕಾರ್ಪೋರೇಟರ್ ನವೀನ್ ಡಿಸೋಜ ಮಾತನಾಡಿ, ಖಾಸಗಿ ಕಾಲೇಜಿವೊಂದರ ನೀರಿನ ಸಪ್ಲೈ ಅನ್ನು ಲೀಗಲ್ ಮಾಡಿದೆ. ಹಾಗೇನೇ ಇಲ್ ಲೀಗಲ್ ಇದ್ದಿದ್ದನ್ನು ಲೀಗಲ್ ಮಾಡಿ ಮಾಡಿ ಎಂದು ಒತ್ತಾಯಿಸಿದರು.
ನೀರಿನ ಸಮಸ್ಯೆ ಪರಿಹಾರವಾಗುವವರೆಗೆ ಬಿಲ್ಡಿಂಗ್ ಕಾಮಗಾರಿಗಳಿಗೆ ಅನುಮತಿ ನೀಡಬಾರದು ಎಂದು ಪ್ರತಿಪಕ್ಷದ ಸದಸ್ಯರು ಮೇಯರ್ ಗೆ ಮನವಿ ಮಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು