9:59 AM Thursday15 - May 2025
ಬ್ರೇಕಿಂಗ್ ನ್ಯೂಸ್
Bangalore | ಗ್ರಾಹಕರ ದೂರು ನಿರ್ವಹಣೆಗೆ ಡಿಜಿಟಲ್ ಪೋರ್ಟಲ್: ಬೆಸ್ಕಾಂ ಎಂಡಿ ಡಾ.ಎನ್.… Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ…

ಇತ್ತೀಚಿನ ಸುದ್ದಿ

ಸುರತ್ಕಲ್ ಫಾಝಿಲ್ ಹತ್ಯೆ ಪ್ರಕರಣ: ಕಾರು ಚಾಲಕ ಪೊಲೀಸ್ ವಶಕ್ಕೆ; ತನಿಖೆ ಇನ್ನಷ್ಟು ಚುರುಕು

31/07/2022, 17:26

ಮಂಗಳೂರು(reporterkarnataka.com): ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.

ತನಿಖೆಯಲ್ಲಿ ಹಲವು ಪ್ರಗತಿ ಕಂಡಿದ್ದು ಪ್ರಮುಖ ಸಾಕ್ಷ್ಯಾಧಾರಗಳು ದೊರೆತಿದೆ. ಇದಕ್ಕೆ ಸಂಬಂಧಿಸಿದಂತೆ ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ‘ಫಾಝಿಲ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ನಡೆದ ವಿಚಾರಣೆ ಶಾಂತಿ ರೀತಿಯಲ್ಲಿ ಮುಗಿದಿದೆ. ತನಿಖೆಗೆ ಲೀಡ್ ಆಗುವಂತಹ ಸಾಕಷ್ಟು ವ್ಯಕ್ತಿಗಳನ್ನು ನಾವು ವಿಚಾರಣೆಗೆ ಒಳಪಡಿಸಿದ್ದೇವೆ.

ಪ್ರಾರಂಭದಲ್ಲಿ 14 ಜನ ನಂತರದಲ್ಲಿ 21 ಅನಂತರದಲ್ಲಿ ಸುಮಾರು 16 ಜನ, ಒಟ್ಟು 51ಕ್ಕಿಂತ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದೆವು. ಕಾರು ಮಾಲೀಕನನ್ನು ವಿಚಾರಣೆ ಮಾಡಿದ್ದೇವೆ. ಆತ ವಿಚಾರಣೆಯಲ್ಲಿ ಕೆಲವೊಂದು ಮಾಹಿತಿಯನ್ನು ಬಹಿರಂಗ ಮಾಡಿದ್ದಾನೆ. ಇವನಿಂದ ಯಾರು ಕಾರು ತೆಗೆದುಕೊಂಡು ಹೋದರು. ಎಷ್ಟು ಹಣ ಕೊಡ್ತವೆ ಅಂತ ಹೇಳಿದರು ಎನ್ನುವಂತಹ ಎಲ್ಲ ಮಾಹಿತಿಯನ್ನು ಹೇಳಿದ್ದಾನೆ. ಈಗ ನ್ಯಾಯಾಲಯಕ್ಕೆ ಹಾಜರುಪಡಿಸಿ ಅವನನ್ನು ನಂತರ ನಾವು ವಶಕ್ಕೆ ಪಡೆಯಲಿದ್ದೇವೆ. ನಂತರ ಹೆಚ್ಚಿನ ಪ್ರಶ್ನೆಗಳನ್ನು ಅವನಿಗೆ ಮತ್ತೆ ಕೂಡಾ ಕೇಳಲಾಗುತ್ತದೆ ಎಂದು ಪೊಲೀಸ್ ಕಮೀಷನರ್ ನುಡಿದರು.

ಪ್ರಕರಣದ ಆರೋಪಿಗಳ ಬಗ್ಗೆ ಒಂದು ನಿರ್ದಿಷ್ಟ ಮಾಹಿತಿ ಸಿಗುತ್ತೆ. ಈಗಾಗಲೇ ಆತನ ಕೊಟ್ಟ ಮಾಹಿತಿಯಂತೆ ತನಿಖೆ ನಡೆಸಲು ನಮ್ಮ ತನಿಖಾ ತಂಡಗಳು ಮುಂದೆ ಹೋಗಿದೆ.

ಆರೋಪಿಗಳಲ್ಲಿ ಒಬ್ಬ ಆರೋಪಿ ಈತನಿಗೆ ಆಪ್ತ ಸ್ನೇಹಿತ. ಇದಕ್ಕೂ ಮೊದಲು ಕೂಡಾ ಆತ ಈತನಿಂದ ಕಾರು ಪಡೆದುಕೊಳ್ಳುತ್ತಿದ್ದ. ಈತನಲ್ಲಿ ಲಾರಿ, ಕಾರು ಎಲ್ಲ ಇದೆ. ಬೇಕು ಅಂದಾಗ ಹೀಗೆ ಬಾಡಿಗೆ ಕೊಡುತ್ತಿದ್ದ. ಅವನ ಸಂಪೂರ್ಣ ವಿಚಾರಣೆ ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ದೃಢಪಡಿಸಿದ್ದಾರೆ.ಇನ್ನೂ ಆಗೋಕು. ನಮ್ಮ ಹಿರಿಯ ಅಧಿಕಾರಿಗಳು ಅವನನ್ನು ಪ್ರಶ್ನಿಸಿದ್ದಾರೆ. ಇನ್ನು ನಾನು ಕೂಡಾ ಆತನನ್ನು ವಿಚಾರಣೆ ಮಾಡಲಿದ್ದೇನೆ. ಕಾರು ಇನ್ನೂ ವಶಕ್ಕೆ ಸಿಕ್ಕಿಲ್ಲ. ಸಿಸಿಟಿವಿ ಫೂಟೇಜ್‌ನಲ್ಲಿ ಕಾರು ನಂಬರ್ ತುಂಬಾ ಕ್ಲಿಯರ್ ಆಗಿ ಕಾಣೋದಿಲ್ಲ.

ಹಾಗಾಗಿ ಬಣ್ಣ ಮತ್ತು ಆ ಬ್ರಾಂಡ್ ಎಷ್ಟು ವರ್ಷದಿಂದ ಚಾಲ್ತಿಯಲ್ಲಿದೆ. ಮತ್ತು ಯಾವ ಕಡೆಗಳಲ್ಲಿ ಅದು ಎಲ್ಲಿಗೆಲ್ಲ ಸೇಲ್ ಆಗಿದೆ ಅನ್ನುವ ಮಾಹಿತಿಯನ್ನು ನಾವು 2-3 ದಿನದಿಂದ ಕಲೆ ಹಾಕುತ್ತಿದ್ದೇವೆ. ಒಂದು ಮುಖ್ಯವಾದ ಕೆಲಸಕ್ಕೆ ಉಪಯೋಗಿಸುತ್ತೇವೆ ಎಂಬಂತೆ ಆರೋಪಿ ಮತ್ತೆ ಈ ಚಾಲಕನ ನಡುವೆ ಮುಖ್ಯವಾಗಿ ಒಂದು ಚರ್ಚೆ ನಡೆದಿದೆ.

ಈತ ಒಂದು ದಿನದ ಬಾಡಿಗೆಗೆ ವಾಹನ ಕೊಟ್ಟು ಹಣ ತಗೋತ್ತಿದ್ದ. ಹೆಚ್ಚಿಗೆ ಬೇಕಾದ್ರು ಕೇಳು ಕೊಡ್ತೀವಿ ಅನ್ನುವ ಹಾಗೆ ಮಾತಾಡಿದ್ರು ಎಂಬ ವಿಚಾರವನ್ನು ಆತ ಬಹಿರಂಗಪಡಿಸಿದ್ದಾನೆ.

ಇವನು ಒಬ್ಬನೇ ಇದ್ದುದರಿಂದ ಮನಸ್ಸಿಗೆ ಬಂದಂತೆ ಹೇಳ್ತಾನೆ ಅದನ್ನ ಕೊಲಾಬರೇಟ್ ಮಾಡ್ಲಿಕ್ಕೆ ಇನ್ನೊಬ್ಬ ಸಿಕ್ಕಿದ್ರೆ ನಮಗೆ ತನಿಖೆಗೆ ಅನುಕೂಲವಾಗುತ್ತದೆ. ನಿನ್ನೆ ನಡೆದ ಶಾಂತಿಸಭೆಯಲ್ಲಿ ಕೂಡಾ ಹಲವರ ಅಹವಾಲು ಸಾಮಾಜಿಕ ಜಾಲತಾಣ ನಿಯಂತ್ರಣದಲ್ಲಿ ಇರಬೇಕು ಎಂದೇ ಆಗಿತ್ತು. ನಮ್ಮ ಆದ್ಯತೆ ಪ್ರಕರಣ ಪತ್ತೆ ಮಾಡುವುದು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವುದು.

ಹಾಗಾಗಿ ನಮ್ಮ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಮಂಗಳೂರು ನಗರ ಮತ್ತು ದ.ಕ ಜಿಲ್ಲೆಯಲ್ಲಿ 5 ಪ್ರಕರಣ ದಾಖಲಿಸಿಕೊಂಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು