ಇತ್ತೀಚಿನ ಸುದ್ದಿ
ಶ್ರಮ ಜೀವಿಗಳಿಗೆ ಸೀರೆ ನೀಡಿ ಗೌರವಿಸಿದ ಸುಳ್ಯದ ಹೆಸರಾಂತ ಚಿನ್ನದ ಮಳಿಗೆ ಸ್ವರ್ಣಂ ಜ್ಯುವೆಲ್ಲರಿ
08/03/2026, 17:23
ಸುಳ್ಯ(reporterkarnataka.com): ಸುಳ್ಯದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರಿನ ಸೂಂತೋಡು ಎಂಪೋರಿಯಮ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಸರಾಂತ ಚಿನ್ನದ ಮಳಿಗೆ ಸ್ವರ್ಣಂ ಜ್ಯುವೆಲ್ಲರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಮಾ.8ರಂದು ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಯಿತು.

ಶ್ರಮಜೀವಿಗಳಾದ ಖಾಸಗಿ ಬಸ್ ನಿರ್ವಾಹಕಿ ಜಯಂತಿ, ಗೃಹರಕ್ಷಕ ದಳದ ಸಿಬ್ಬಂದಿಗಳಾದ ಪುಷ್ಪಾವತಿ ಆಲೆಟ್ಟಿ, ಗೀತಾ ಜಯನಗರ, ಅಟೋ ಚಾಲಕಿ ಗೀತಾ ಜಯನಗರ, ಪೌರ ಕಾರ್ಮಿಕೆಯವರಾದ ಮಾಲಾಬಾಯಿ, ಮಮತಾ, ಲತಾ ಅವರನ್ನು ಸುಳ್ಯ ಪಯಸ್ವಿನಿ ಜೇಸಿಐ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕರವರು ಸ್ವರ್ಣಂ ವತಿಯಿಂದ ನೀಡಿದ ಸೀರೆ, ಸ್ಮರಣಿಕೆ ನೀಡಿ ಗೌರವಿಸಿ, ಮಾತನಾಡಿ ಮಹಿಳಾ ದಿನಾಚರಣೆಯ ಮಹತ್ವವನ್ನು ತಿಳಿಸಿ ಶುಭಹಾರೈಸಿದರು. ಬಿಲ್ಡಿಂಗ್ ಮಾಲಕ ಸೂರಯ್ಯ ಸೂಂತೋಡು ಉಪಸ್ಥಿತರಿದ್ದು, ಶುಭ ಹಾರೈಸಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ನ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಯಶ್ಚಿತ್ ಕಾಳಂಮನೆ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಪಾಲುದಾರ ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲುದಾರರಾದ ಸಂಜೀವ, ಭವಿತ್ , ಪ್ರವೀಣ್ ಗೌಡ, ಸಿಬ್ಬಂದಿಗಳಾದ ಶೋಧನ್, ನಿತೇಶ್ ಉಪಸ್ಥಿತರಿದ್ದರು.












