4:58 PM Saturday19 - July 2025
ಬ್ರೇಕಿಂಗ್ ನ್ಯೂಸ್
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಜಸ್ಟಿಸ್ ವಿಭು ಬಖ್ರು ಅಧಿಕಾರ ಸ್ವೀಕಾರ: ರಾಜ್ಯಪಾಲ… Kodagu |ಪೊನ್ನಂಪೇಟೆ: ವ್ಯಾಘ್ರನ ಸೆರೆಗೆ 75 ಮಂದಿ ಅರಣ್ಯ ಸಿಬ್ಬಂದಿಗಳ ಕೂಂಬಿಂಗ್ ಕಾರ್ಯಾಚರಣೆ… ಮಂಗಳೂರು – ಬೆಂಗಳೂರು 4 ತಾಸಿನ ಆಂಬುಲೆನ್ಸ್ ಪ್ರಯಾಣ!: ಹೃದಯ ಕಾಯಿಲೆಯ 14… ವಿದ್ಯುತ್ ಶಾಕ್: ಲೈನ್ ಮ್ಯಾನ್ ದಾರುಣ ಸಾವು; ಒಂದೂವರೆ ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ… ರಾಹುಲ್ ಗಾಂಧಿಯ ಗೊತ್ತಿಲ್ಲದ ಸಾಧನೆಗೆ ಗೊತ್ತಿಲ್ಲದ ಪ್ರಶಸ್ತಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ಬಿರುಸುಗೊಂಡ ಕಾಡಾನೆಗಳ ಅರಣ್ಯಕ್ಕೆ ಅಟ್ಟುವ ಕಾರ್ಯ: ನಾಡಿನಿಂದ ಕಾಡಿನತ್ತ ಆನೆಗಳ ಮತ್ತೊಂದು ಹಿಂಡು ಭಾರೀ ಮಳೆ: ಕೊಡಗು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ: ಶಾಲೆ- ಕಾಲೇಜುಗಳಿಗೆ ನಾಳೆಯೂ… ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ… ಭಾರೀ ಮಳೆ: ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜಿಗೆ… ಕರ್ಣಾಟಕ ಬ್ಯಾಂಕ್ ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ: ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ,…

ಇತ್ತೀಚಿನ ಸುದ್ದಿ

ಶೃಂಗೇರಿ ಶಾಸಕರ ವಿರುದ್ಧ ಲೋಕಾಯುಕ್ತ ದೂರು ಐದೇ ದಿನದಲ್ಲಿ ವಾಪಸ್: ದೂರುದಾರರಿಗೆ ಆಮಿಷೆ ಆರೋಪ

22/12/2022, 18:47

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporter Karnataka@gmail.com

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರ ವಿರುದ್ಧ ಲೋಕಾಯುಕ್ತಕ್ಕೆ ನೀಡಿದ ದೂರನ್ನು ಐದೇ ದಿನದಲ್ಲಿ ದೂರುದಾರ ವಾಪಸ್ ಪಡೆದಿರುವುದು ಹಲವು ಸಂಶಯಗಳಿಗೆ ಎಡೆಮಾಡಿ ಕೊಟ್ಟಿದೆ. ದೂರುದಾರರಿಗೆ ಆಮಿಷೆಯೊಡ್ಡಿ ದೂರು ವಾಪಸ್ ಪಡೆಯಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ನವೆಂಬರ್ 18ರಂದು ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮೇಲೆ ಲೋಕಾಯುಕ್ತ ದೂರು ನೀಡಲಾಗಿತ್ತು. ಶಾಸಕರಿಗೆ
ಅಕ್ರಮ ತೋಟ ಖರೀದಿಗೆ 100 ಕೋಟಿಗೂ ಅಧಿಕ ಹಣ ಎಲ್ಲಿಂದ ಬಂತು ಅಂತ ದೂರುದಾರರು ಪ್ರಶ್ನಿಸಿದ್ದರು. ಆದರೆ ಇದೀಗ ದೂರು ನೀಡಿದ ಐದೇ ದಿನಕ್ಕೆ ಕೇಸನ್ನು ದೂರುದಾರ ವಿಜಯಾನಂದ ಅವರು ವಾಪಸ್ ಪಡೆದಿದ್ದಾರೆ. ಇದೀಗ ದೂರು ಹಿಂಪಡೆದ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದೆ.


ಶಾಸಕರ ಸಂಬಂಧಿ ಪಿಎ ಅವರು ವಿಜಯಾನಂದ ಹೆಸರಲ್ಲಿ ಛಾಪಾ ಕಾಗದ ಪಡೆದಿದ್ದಾರೆ ಎನ್ನಲಾಗಿದೆ. ಶಾಸಕರ ಸಂಬಂಧಿ ಪಿಎ ಛಾಪ ಕಾಗದ ತೆಗೆದಿರುವ ವಿಷಯ ವೈರಲ್ ಆಗುತ್ತಿದೆ.

ಛಾಪಾ ಕಾಗದದ ಪೇಪರ್ ನಲ್ಲಿ ವಿಜಯಾನಂದರ ಹೆಸರಿದ್ದರೆ,
ಫೋನ್ ನಂಬರ್ ಪಿಎ ಅವರದ್ದಾಗಿದೆ ಎಂಬ ಮಾಹಿತಿ ಇದೆ. ಬೆಂಗಳೂರು ಲೋಕಾಯುಕ್ತದಲ್ಲಿ ದಾಖಲಾಗಿದ್ದ ಕೇಸ್ ಹಿಂಪಡೆಯಲು ಅಫಿಡವಿಟ್ ಮಾಡಲಾಗಿದೆ. ಕೇಸ್ ಪಡೆಯಲು ಶಾಸಕ ಟಿ.ಡಿ. ರಾಜೇಗೌಡ ಆಪ್ತರಿಂದಲೇ ಷಡ್ಯಂತ್ರ ನಡೆದಿದೆ
ಎಂದು ಬಿಜೆಪಿ ಆರೋಪಿಸಿದೆ.

ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಪ್ರಕರಣ ರಾಜಕೀಯವಾಗಿಯೂ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ವಿಜಯಾನಂದ ಕೇಸ್ ಹಿಂಪಡೆದ ಮೇಲೆ ಚಿಕ್ಕಮಗಳೂರಲ್ಲಿ ಲೋಕಾಯುಕ್ತದಲ್ಲಿ 2ನೇ ದೂರು ದಾಖಲಾಗಿದೆ. ಕಾಫಿ ಡೇ ಸಂಸ್ಥಾಪಕ ದಿ. ಸಿದ್ದಾರ್ಥ ಹೆಗ್ಡೆ ಅವರ ಟ್ರಸ್ಟ್ ನ ತೋಟ ಖರೀದಿಯಲ್ಲಿ ಅಕ್ರಮದ ಆರೋಪ ದೂರಿನ ಪ್ರಕರಣ ಇದಾಗಿದೆ.

ಟಿ.ಡಿ.ರಾಜೇಗೌಡ ಚಿಕ್ಕಮಗಳೂರು ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ

ಇತ್ತೀಚಿನ ಸುದ್ದಿ

ಜಾಹೀರಾತು