12:35 AM Friday19 - September 2025
ಬ್ರೇಕಿಂಗ್ ನ್ಯೂಸ್
Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.…

ಇತ್ತೀಚಿನ ಸುದ್ದಿ

ಸೋವೇನ ಹಳ್ಳಿ, ಹಗರಿಬೊಮ್ಮನ ಹಳ್ಳಿಗೆ ಸಮರ್ಪಕ ಬಸ್ ವ್ಯವಸ್ಥೆ: ಗ್ರಾಮಸ್ಥರ ಹಕ್ಕೊತ್ತಾಯ

28/11/2021, 09:05

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಜಿಲ್ಲೆಯ ಕೂಡ್ಲಿಗಿ ತಾಲೂಕು ಜಂಗಮ ಸೋವೇನಹಳ್ಳಿ,ಗ್ರಾಮ ಸೇರಿದಂತೆ ಹಗರಿಬೊಮ್ಮನಹಳ್ಳಿ ಮಾರ್ಗಕ್ಕೆ ಸಮಪರ್ಕವಾಗಿ ಬಸ್  ಸಂಚಾರ ವ್ಯವಸ್ಥೆ ಮಾಡಬೇಕೆಂದು ಜಂಗಮ ಸೋವೇನಹಳ್ಳಿ ಗ್ರಾಮಸ್ಥರು ಸಾರಿಗೆ ಸಂಸ್ಥೆ ಕೂಡ್ಲಿಗಿ ಘಟಕದ ವ್ಯವಸ್ಥಾಪರಿಗೆ ಹಕ್ಕೊತ್ತಾಯ ಮಾಡಿದ್ದಾರೆ.

ಈ ಮೂಲಕ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ, ವಿವಿಧ ಗ್ರಾಮಗಳ ಮುಖಂಡರು ಹಕ್ಕೊತ್ತಾಯ ಮಾಡಿದ್ದಾರೆ. ಕೂಡ್ಲಿಗಿ-ಹಗರಿಬೊಮ್ಮನಹಳ್ಳಿ ಮಾರ್ಗದ ಹೆಸರಿನ ಬಸ್, ನಾಣ್ಯಪುರ, ಶಿವಪುರ ಗ್ರಾಮದ ಮೂಲಕ ಬಸ್ ಸಂಚಾರ ಮಾಡುತ್ತಿತ್ತು. ಆ ಬಸ್ ಕೂಡ್ಲಿಗಿ ಯಿಂದ  ಜಂಗಮ ಸೋವೇನಹಳ್ಳಿ, ನಾಣ್ಯಾಪುರ,  ಶಿವಪುರ ಮಾರ್ಗದಲ್ಲಿ ಸಂಚರಿಸುತ್ತಿತ್ತು.

ಅದನ್ನು ಕೋವಿಡ್ ಲಾಕ್ ಡೋನ್ ಸಂದರ್ಭದಲ್ಲಿ ಸ್ಥಗಿತಗೊಳಿಸಲಾಗಿತ್ತು, ಲಾಕ್ ಡೋನ್ ಅವದಿ ಮುಗಿದು ಆರೇಳು ತಿಂಗಳಾದರೂ ಕೂಡ.ಈ ವರೆಗೂ ಹಗರಿಬೊಮ್ಮನಹಳ್ಳಿ- ಕೂಡ್ಲಿಗಿ ಮಾರ್ಗದ ರೂಟ್ ನಂಬರ್ 27ರ ಬಸ್ ಪುನಃ ಸಂಚಾರಕ್ಕೆ ಕ್ರಮ ಜರುಗಿಸಿಲ್ಲ, ಸಂಸ್ಥೆಗೆ ನಷ್ಟ ಆಗುತ್ತೆ ಅನ್ನುವಂತಹ ಕುಂಟು ನೆಪ ಮಾಡಿ ಬಸ್ ಸಂಚಾರವನ್ನು ಸ್ಥಗಿತ ಮಾಡಿದ್ದು,ಹತ್ತಾರು ಹಳ್ಳಿಗಳ ನೂರಾರು ಪ್ರಯಾಣಿಕರು ಹಾಗೂ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಈ ಬಸ್ ಅನುಕೂಲವಾಗಿತ್ತು.

ಎರಡೂ ತಾಲೂಕುಗಳ ಪ್ರಯಾಣಿಕರು ಇದೇ ಬಸ್ ನ್ನು ಅವಲಂಬಿಸಿದ್ದಾರೆ. ಆರ್ಥಿಕ ಹಾಗೂ ಶೈಕ್ಷಣಿಕ ಕೃಷಿ ಆರೋಗ್ಯ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ, ಕೂಡ್ಲಿಗಿ ಹಾಗೂ ಹಗರಿಬೊಮ್ಮನಹಳ್ಳಿ ಹೆಚ್ಚಾಗಿ ವ್ಯವಹಾರ ಮಾಡುವುದರಿಂದಾಗಿ. ಅತ್ಯಾವಶ್ಯಕವಾಗಿದೆ ಬಡ ಮದ್ಯಮ ವರ್ಗದವರು ಸಾರಿಗೆ ಬಸ್ಸುಗಳನ್ನೆ ಅನಿವಾರ್ಯವಾಗಿ ಅವಲಂಬಿತರಾಗಿದ್ದು, ಅಲ್ಲದೇ ಈ ಭಾಗದ ಜನರ ಜೀವನಾಡಿ ಯಾಗಿರುವ ಸಾರಿಗೆ ಬಸ್ ಸಂಚಾರ ಅನಿವಾರ್ಯವಾಗಿದ್ದು. ಆದ ಕಾರಣ ಲಾಭ-ನಷ್ಟದ ನೆಪ ಹೇಳದೆ ಸೇವಾ ಮನೋಭಾವ ದೊಂದಿಗೆ ಹಾಗೂ ಗ್ರಾಮಸ್ಥರ ಹಿತಕ್ಕಾಗಿ, ಲಾಕ್ಡನ್ ನ ಪೂರ್ವದಲ್ಲಿ ಕಾರ್ಯ ನಿರ್ವಹಿಸುವಂತೆ ಸಾರಿಗೆ ರೂಟ್ ನಂಬರ್ 27 ಮಾರ್ಗದ ಬಸ್ಸನ್ನು ಅದೇ ಮಾರ್ಗದಲ್ಲಿ ಪುನಃ ಸಂಚಾರಕ್ಕೆ ಕ್ರಮ ಜರುಗಿಸಬೇಕೆಂದು ವಿವಿದ ಗ್ರಾಮಗಳ ಗ್ರಾಮಸ್ಥರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ವಿವಿದ ಗ್ರಾಮಗಳ ಶಾಲಾ- ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು, ಕೂಡ್ಲಿಗಿ ಸಾರಿಗೆ ಘಟಕದ ವ್ಯವಸ್ಥಾಪಕ ಮರಿಲಿಂಗಪ್ಪರವರಿಗೆ ತಮ್ಮ ಹಕ್ಕೋತ್ತಾಯ ಪತ್ರ ನೀಡಿದ್ದಾರೆ. ಜಂಗಮ ಸೋವೇನಹಳ್ಳಿ,ನಾಣ್ಯಪುರ, ಶಿವಪುರ ಗ್ರಾಮಗಳ ಮುಂಡರು ಹಾಗೂ ವಿದ್ಯಾರ್ಥಿಗಳು.ಜಂಗಮ ಸೋವೇನಹಳ್ಳಿ ಗ್ರಾಮದ ನಂದಿ ವಿರೂಪಾಕ್ಷಪ್ಪ, ಕಟ್ಟಡ ಕಾರ್ಮಿಕ ಮುಖಂಡ ಬಿ.ಹೂಲೆಪ್ಪ ನೇತೃತ್ವದಲ್ಲಿ ಹಕ್ಕೋತ್ತಾಯ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು