9:59 PM Friday11 - April 2025
ಬ್ರೇಕಿಂಗ್ ನ್ಯೂಸ್
Karnataka BJP | ದಲಿತರ ತುಳಿದವರೇ ಕಾಂಗ್ರೆಸಿಗರು: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಜನ ಬೇಸತ್ತಿರುವುದಕ್ಕೆ ಜನಾಕ್ರೋಶ ಯಾತ್ರೆಗೆ ಸಿಗುತ್ತಿರುವ ಬೆಂಬಲವೇ ಸಾಕ್ಷಿ : ಪ್ರತಿಪಕ್ಷದ ನಾಯಕ… ಅತ್ಯಾಧುನಿಕ ಮಾಲಿನ್ಯ ನಿಯಂತ್ರಣ ತಂತ್ರಜ್ಞಾನದ ಬಾಲ್ಡೋಟಾ ಇಂಟಿಗ್ರೇಟೆಡ್ ಸ್ಟೀಲ್ ಪ್ರಾಜೆಕ್ಟ್ ಎಂಬೆಸ್ಸಿ ಗಾಲ್ಫ್ ಲಿಂಕ್ ನ ಸಿಎಸ್ಆರ್ ನಿಧಿಯಿಂದ ಮರಿಯ ನಿಕೇತನ ಶಿಕ್ಷಣ ಸಂಸ್ಥೆಗೆ… Home Minister | ಡಿಸಿಆರ್ ಇ ಪೊಲೀಸ್ ಠಾಣೆಗಳಿಗೆ ನೂತನ ವಾಹನ ಹಸ್ತಾಂತರ:… ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ವಿರುದ್ಧ ಧ್ವನಿ ಎತ್ತಲಾಗದ ಪ್ರತಿಪಕ್ಷ: ಬಿಜೆಪಿ ವಿರುದ್ದ… UGCET- 25 | 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ: ಕ್ಯೂಆರ್ ಕೋಡ್,… Bangalore | ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಲು ಜನ… ಕುತ್ಲುರು ಸರಕಾರಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2 ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್… ವಿರಳಾತಿ ವಿರಳ ಕಾಯಿಲೆಗೆ ತುತ್ತಾದ ಚಿಣ್ಣರ ಚಿಕಿತ್ಸೆಗೆ ಕಾರ್ಪೊರೇಟ್‌ ಕಂಪನಿಗಳು ನೆರವು ನೀಡಲಿ:…

ಇತ್ತೀಚಿನ ಸುದ್ದಿ

ಸ್ಮಾರ್ಟ್ ಸಿಟಿಯ ಸರ್ವಿಸ್ ಬಸ್ಟ್ಯಾಂಡಲ್ಲಿ ಸಿಟಿ ಬಸ್ ಹತ್ತುವುದೇ ದೊಡ್ಡ ಸಾಹಸ.!

15/08/2021, 07:46

ಗಣೇಶ್ ಅದ್ಯಪಾಡಿ, ಮಂಗಳೂರು
info.reporterkarnataka.com

ಸ್ಮಾರ್ಟ್ ಸಿಟಿಯಾಗುವ ಕನಸು ಕಾಣುತ್ತಿರುವ ಮಂಗಳೂರು ಮಹಾನಗರದ ಹೃದಯ ಭಾಗದಲ್ಲಿರುವ ಸರ್ವೀಸ್ ಬಸ್ ಸ್ಟ್ಯಾಂಡ್‌ನ ಪರಿಸ್ಥಿತಿ ಮಾತ್ರ ಹೇಳತೀರದಷ್ಟು ಹದಗೆಟ್ಟು ಹೋಗಿದೆ.

ಸರ್ವಿಸ್ ಹಾಗೂ ಸಿಟಿ ಬಸ್‌ಗಳನ್ನು ಈಗ ಒಂದೇ ಕಡೆ ತಂಗುವಂತೆ ಮಾಡಿದ್ದು, ಇದು ಸರ್ವಿಸ್ ಹಾಗೂ ಸಿಟಿ ಬಸ್‌ಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಒಂದು ಕಡೆ ಸರಿಯಾದ ಮೂಲಭೂತ ವ್ಯವಸ್ಥೆಗಳೇ ಇರದ ಸರ್ವೀಸ್ ಬಸ್ಟ್ಯಾಂಡ್ ಅದರ ಪಕ್ಕದಲ್ಲೇ ಈಗ ಸಿಟಿ ಬಸ್‌ಗಳಿಗೆ ತಂಗುದಾಣ. ಕಿತ್ತೋದ ನೆಲದಲ್ಲಿ ಹರಡಿಕೊಂಡಿರುವ ಜಲ್ಲಿಕಲ್ಲುಗಳ ನಡುವೆ, ಸಣ್ಣ ಸಣ್ಣ ಹೊಂಡಗಳ ದಾಟಿ ರಾಶಿ ರಾಶಿ ಬಸ್‌ಗಳ ನಡುವೆ ತಮ್ಮ ಊರಿನ ಬಸ್ ಹತ್ತುವುದೇ ಪ್ರಯಣಿಕರಿಗೆ ದೊಡ್ಡ ಸಾಹಸ.

ಇನ್ನೊಂದು ಕಡೆಯಲ್ಲಿ ವಾಹನ ದಟ್ಟಣೆಗೆ ಕೂಡ ಈ ನಿರ್ಧಾರ ಕಾರಣವಾಗಿದ್ದು, ದಿನ ನಿತ್ಯ ಬಸ್‌ಗಳ ನಡುವೆ ಹಾಗೂ ಬಸ್‌ಸ್ಟ್ಯಾಂಡಿನ ಪಕ್ಕದಲ್ಲಿ ಬರುವ ವಾಹನ ಚಾಲಕರ ನಡುವಿನ ಜಗಳಕ್ಕೆ ಕಾರಣವಾಗ್ತ ಇದೆ.
ಇನ್ನು ಸಂಜೆ ಹಾಗೂ ಬೆಳಗ್ಗೆ ಒಂದೇ ವೇಳೆಯಲ್ಲಿ ಹಲವು ಬಸ್‌ಗಳು ನಿರ್ಗಮಿಸುವಾಗ ಇಕ್ಕಟ್ಟಿನ ಈ ದಾರಿಯಲ್ಲಿ ಪ್ರತಿ ದಿನವೂ ಟ್ರಾಫಿಕ್ ಜಾಮ್.

ಈ ಮೊದಲು ಸೆಬಾಸ್ಟಿಯನ್ ವೃತ್ತದಿಂದ ಪೆಟ್ರೋಲ್ ಪಂಪ್ ವರೆಗಿನ ರಸ್ತೆಯಲ್ಲಿ ಸಿಟಿ ಬಸ್‌ಗಳು ನಿಲ್ಲುತ್ತಿತ್ತು. ಆದರೆ ಈಗ ಸರ್ವಿಸ್ ಬಸ್‌ಸ್ಟ್ಯಾಂಡ್‌ಗೆ ಶಿಫ್ಟ್ ಮಾಡಿದ ಮೇಲೆ ಸಾಮಾನ್ಯ ಜನರು ಪರದಾಡುವಂತಾಗಿದೆ.

ಸರ್ವಿಸ್ ಬಸ್ಟ್ಯಾಂಡ್ ಪಕ್ಕದ ದಾರಿಯಲ್ಲೇ ಇತರ ಲಘುವಾಹನಗಳೂ ಓಡಾಡುತ್ತಿರುವುದರಿಂದ ಮತ್ತಷ್ಟು ವಾಹನ ದಟ್ಟನೆ ಇಲ್ಲಿ ಉಂಟಾಗ್ತ ಇದೆ. ಸರ್ವಿಸ್ ಬಸ್ಟ್ಯಾಂಡ್‌ನಲ್ಲಿ ಸ್ಥಳೀಯ ಪ್ರದೇಶದ ಮಾತ್ರವಲ್ಲದೆ ಉಡುಪಿ, ಕುಂದಾಪುರ ಸೇರಿದಂತೆ ಸಂಜೆ ಟ್ರಿಪ್ ಹೊರಡುವ ಬಳ್ಳಾರಿ, ಶಿವಮೊಗ್ಗ ಬಸ್‌ಗಳೂ ಅಲ್ಲದೆ ಸರಕಾರಿ ಬಸ್‌ಗಳೂ ನಿಂತಿರುತ್ತವೆ. ಇಷ್ಟೆಲ್ಲ ಬಸ್‌ಗಳಿಗೆ ಈ ಇಕ್ಕಟ್ಟಿನ ಜಾಗದಲ್ಲಿ ಅವಕಾಶ ಮಾಡಿಕೊಟ್ಟ ಪಾಲಿಕೆಗೆ ಬುದ್ಧಿ ಇದೆಯ ಎನ್ನುವ ಪ್ರಶ್ನೆಯೂ ಮೂಡುತ್ತದೆ

ಕಾರಿನಲ್ಲಿ ಓಡಾಡುವ ಅಧಿಕಾರಿಗಳಿಗೆ, ಆಡಳಿತ ವರ್ಗದವರಿಗೆ ಬಸ್‌ನಲ್ಲಿ ಓಡಾಡುವ ಜನರ ಪಾಡೇನು ತಿಳಿಯುತ್ತದೆ ಎನ್ನುವ ಮಾತು ಸ್ಥಳೀಯ ಜನರಿಂದ ಕೇಳಿ ಬರುತ್ತಿದೆ.

ಕೊರೊನಾ ಎರಡನೇ ಅಲೆಯ ಅನ್‌ಲಾಕ್ ಆದ ಬಳಿಕ ಆರಂಭದಲ್ಲಿ ಬಸ್‌ಗಳ ಸಂಖ್ಯೆ ಕಡಿಮೆ ಇತ್ತು ಆಗ ಈ ಸಮಸ್ಯೆ ಅರಿವಿಗೆ ಬರಲಿಲ್ಲ ಆದರೆ ಈಗ ಬಹುತೇಕ ಬಸ್‌ಗಳು ರಸ್ತೆಗೆ ಇಳಿದಿದ್ದು, ಈಗ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಅತಿ ಶೀಘ್ರದಲ್ಲಿ ಈ ಸಮಸ್ಯೆಗೆ ಪರಿಹಾರ ದೊರಕುವಂತಾಗಲಿ.

ಇತ್ತೀಚಿನ ಸುದ್ದಿ

ಜಾಹೀರಾತು