ಇತ್ತೀಚಿನ ಸುದ್ದಿ
ಸಿದ್ದರಾಮಯ್ಯನವರ ಸರ್ಕಾರ ಜೀರೋ ಅಭಿವೃದ್ಧಿಯ ಸರ್ಕಾರ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ
16/02/2026, 14:48
ರಶ್ಮೀ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಜೀರೋ ಸಾಧನೆ ಜೀರೋ ಅಭಿವೃದ್ಧಿಯ ಯಾವುದಾದರೂ ಸರ್ಕಾರ ಕರ್ನಾಟಕದಲ್ಲಿ ಬಂದಿದ್ದರೆ ಅದು ಸಿದ್ದರಾಮಯ್ಯನವರ ಸರ್ಕಾರ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಸೋಮವಾರ ಪಟ್ಟಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಕೆಲವರು ಫಾರಿನ್ ಗೆ ಹೋಗ್ತಾ ಇದ್ದಾರೆ. ಕೆಲವರು ದೆಹಲಿಗೆ ಹೋಗ್ತಾ ಇದ್ದಾರೆ. ಒಟ್ಟಾರೆ ಕೆಲಸ ಮಾಡುವುದು ಬಿಟ್ಟು ಬೇರೆಲ್ಲ ಮಾಡುತ್ತಿದ್ದಾರೆ. ಇವರ ರಾಜಕೀಯ ಜಂಜಾಟದಲ್ಲಿ ಜನಗಳು ಬಡವಾಗುತ್ತಿದ್ದಾರೆ.140 ಸೀಟ್ ಕೊಟ್ಟಾಗ ಗೌರವದಿಂದ ಅಭಿವೃದ್ಧಿ ಮಾಡಿ ಕರ್ನಾಟಕವನ್ನು ಮುನ್ನಡೆಸಬೇಕಿತ್ತು. ಆದರೆ ಈಗ ಯಾವುದೇ ಅಭಿವೃದ್ಧಿ ಇಲ್ಲ ಎಂದರು.
ಅವರ ಸ್ವಾರ್ಥ, ಸ್ವಂತ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿ ಏಳುತ್ತಿದ್ದಾರೆ. ಅವರಿಗೆ ಕೊನೆಯ ಅಧಿಕಾರ ಎಂದು ಅನಿಸಿಬಿಟ್ಟಿದೆ. ಎಷ್ಟು ದೋಚಲು ಸಾಧ್ಯವೋ ಅಷ್ಟು ದೋಚುತ್ತಿದ್ದಾರೆ. ಕರ್ನಾಟಕ ಅತ್ಯಂತ ಕೆಟ್ಟ ರೀತಿಯಲ್ಲಿ ನಡೆಯುತ್ತಿದೆ. ಸರ್ಕಾರ ನಡೆದಷ್ಟು ದಿವಸ ಕರ್ನಾಟಕ ಜನರಿಗೆ ಬಹಳಷ್ಟು ನಷ್ಟವಾಗುತ್ತದೆ ಎಂದರು .












