7:39 AM Saturday7 - March 2026
ಬ್ರೇಕಿಂಗ್ ನ್ಯೂಸ್
ರಾಜ್ಯದ 17ನೇ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ; ಡಾ. ಯು.… ಮತ್ತೆ ಮರಳಲಿದೆ ಕ್ಯಾಂಪಸ್ ಪಾಲಿಟಿಕ್ಸ್: ರಾಜ್ಯದ ಎಲ್ಲಾ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ… ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಸ್ಥಾಪನೆ: ರಾಜ್ಯ ಬಜೆಟ್ ನಲ್ಲಿ‌ ಘೋಷಣೆ ಎಣ್ಣೆಪ್ರಿಯರಿಗೆ ಶಾಕ್ ನೀಡಿದ ಬಜೆಟ್‌: ಮದ್ಯದ ಮೇಲೆ ಹೊಸ ರೂಪದ ತೆರಿಗೆ ಕೋರ್ಟು ಅಲೆದಾಟ ತಪ್ಪಿಸಲು 10 ಕೋಟಿ ವೆಚ್ಚದಲ್ಲಿ ಇ ಕೋರ್ಟ್‌ ಸ್ಥಾಪನೆ 1,000 ಕೋಟಿ ವೆಚ್ಚದ ‘ಕಲ್ಯಾಣ ಪಥ’ ಯೋಜನೆಡಿ ರಸ್ತೆ ಅಭಿವೃದ್ಧಿ:ಮುಖ್ಯಮಂತ್ರಿ ರಾಜ್ಯ ಬಜೆಟ್ | ಮೈಸೂರು ರಾಜ್ಯದ 2ನೇ ಐಟಿ ಸಿಟಿಯಾಗಿ ರೂಪಿಸುವ ಯೋಜನೆ ರಾಜ್ಯದಲ್ಲಿ ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’ ಆರಂಭ : ಬಜೆಟ್ ನಲ್ಲಿ ಘೋಷಣೆ ಜಿಎಸ್​ಟಿ ತರ್ಕಬದ್ಧಗೊಳಿಸಿದ್ದರಿಂದ ರಾಜ್ಯಕ್ಕೆ ರಾಜಸ್ವ ಸಂಗ್ರಹಣೆ ಕಡಿಮೆ: ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ | ದಕ್ಷಿಣ ಕನ್ನಡದ ಮಾಣಿ ಹಾಗೂ ಸಜಿಪನಡು ಸೇರಿದಂತೆ ರಾಜ್ಯದ…

ಇತ್ತೀಚಿನ ಸುದ್ದಿ

ಶಿರನಾಳದ ಹಿರಿಯಜ್ಜಿ ಇನ್ನಿಲ್ಲ: ಶತಾಯುಷಿ 108ರ ಹರೆಯದ ಭಾಗವ್ವ ಬಿ. ಪೂಜಾರ್ ದೈವಾಧೀನ

30/09/2024, 19:51

ವಿಜಯಪುರ(reporterkarnataka.com): ರಿಪೋರ್ಟರ್ ಕರ್ನಾಟಕದ ಉತ್ತರ ಕನ್ನಡ ಬ್ಯುರೋ ಸ್ಥಾನೀಯ ಸಂಪಾದಕ ಭೀಮಣ ಮಲಕಾರಿ ಪೂಜಾರ್
ಅವರ ಅಜ್ಜಿ ಶತಾಯುಷಿ ಶಿರನಾಳ ಗ್ರಾಮದ ಭಾಗವ್ವ ಬಿ. ಪೂಜಾರಿ(108) ಇಂದು ನಿಧನರಾದರು.


ಅವರು ಶಿರನಾಳ ಗ್ರಾಮದ ಹಿರಿಯಜ್ಜಿ ಎಂದೇ ಪ್ರಸಿದ್ಧರಾಗಿದ್ದರು. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಅವರು ಮತ ಚಲಾಯಿಸಿ ಗಮನ ಸೆಳೆದಿದ್ದರು. ಶತಾಯುಷಿ ಭಾಗವ್ವ ಅವರು ಕೊನೆಯುಸಿರೆಳೆಯುವವರೆಗೂ ಆರೋಗ್ಯವಾಗಿಯೇ ಇದ್ದರು. ಆಹಾರ ಸೇವನೆ ಮಾಡುತ್ತಿದ್ದರು. ಸೊಸೆ,
ಮಗಳು ಹಾಗೂ ಮೊಮ್ಮಕ್ಕಳ ಸಹಾಯದಿಂದ ನಡೆದಾಡುತ್ತಿದ್ದರು.
ಭೀಮಣ ಪೂಜಾರ್ ಅವರು ಭಾಗವ್ಚ ಅವರ ಮಗ ದಿವಂಗತ ಮಲಕಾರಿ ಭೀಮ್ ಪೂಜಾರ್ ಅವರ ಪುತ್ರ.
ಮೃತರು ಪುತ್ರಿ ಕೋಂತ್ತವ ಪೂಜಾರ್, ಸೊಸೆ ಹಿರಬಾಯಿ ಮಲಕಾರಿ ಪೂಜಾರ್, ಮೊಮ್ಮಕ್ಕಳಾದ ಭೀಮಣ ಮಲಕಾರಿ ಪೂಜಾರ್, ಶಿಲಶಿದ್ದ ಮಲಕಾರಿ ಪೂಜಾರ್,
ಸವಿತಾ ಮಲಕಾರಿ ಪೂಜಾರ್ ಹಾಗೂ ಅನಿತಾ ಮಲಕಾರಿ ಪೂಜಾರ್ ಅವರನ್ನು ಅಗಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು