10:23 AM Friday4 - July 2025
ಬ್ರೇಕಿಂಗ್ ನ್ಯೂಸ್
ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ…

ಇತ್ತೀಚಿನ ಸುದ್ದಿ

ಸಾಧಕನಿಗೆ ಹುಟ್ಟೂರ ಸನ್ಮಾನವೇ ಬಹುದೊಡ್ಡ ಬಹುಮಾನ: ಮಾಜಿ ಸಚಿವ ಅಭಯಚಂದ್ರ ಜೈನ್

17/11/2021, 21:38

ಕಾರ್ಕಳ(reporterkarnataka.com):
ಸಾಧಕನಿಗೆ ಹುಟ್ಟೂರ ಸನ್ಮಾನವೇ ಬಹುದೊಡ್ಡ ಉಡುಗೊರೆ. ಸಾಧಿಸುವ ಛಲವಿದ್ದರೆ ಉದ್ಯಮವನ್ನು ಹುಟ್ಟು ಹಾಕಬಹುದು. ಅದರಿಂದ ನೂರಾರು ಜನರಿಗೆ ಉದ್ಯೋಗವನ್ನು ನೀಡಬಹುದು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.  

ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಅಜೆಕಾರಿನ ಉದ್ಯಮಿ ಶಿವರಾಂ ಶೆಟ್ಟಿ ಅವರ 75 ವರ್ಷದ ಪಂಚ ಸಪ್ತತಿ ಜನ್ಮದಿನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಜೆಕಾರು ಪದ್ಮ ಗೋಪಾಲ್ ಟ್ರಸ್ಟ್ ಅಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿ, ಸಮಾಜದ ಎತ್ತರವನ್ನು ಹುಡುಕುತ್ತೆವೆ. ಆದರೂ ಅದರ ಹಿಂದಿನ ಶ್ರಮ ಅರ್ಥವಾದರೆ ಅದರ ಮೌಲ್ಯ,ಹಾಗೂ  ಕಷ್ಠವು ತಿಳಿಯುವುದು ಎಂದರು.

ಮಣಿಪಾಲ ಪ್ರಸನ್ನ ಗಣಪತಿ ದೇವಸ್ಥಾನದ ಧರ್ಮದರ್ಶಿ ಬೆಳ್ಳಿಪ್ಪಾಡಿ ಹರಿಪ್ರಸಾದ್ ರೈ  ಮಾತನಾಡಿ, ಕೋಟ್ಯಾಂತರ ರೂಪಾಯಿದ್ದರು ದೇವಸ್ಥಾನ ಕಟ್ಟಲು ಸಾದ್ಯವಿಲ್ಲ. ಅದಕ್ಕೆ ಯೋಗವಿದ್ದರೆ, ಸಾಮರ್ಥ್ಯ ವಿದ್ದರೆ ಮಾತ್ರ ದೇವಾಲಯದ  ಕಾರ್ಯ ಮಾಡಲು ಸಾಧ್ಯ , ಛಲ ,ಶ್ರದ್ಧೆ ನಮ್ಮಲಿರಬೇಕು ಎಂದು ಹೇಳಿದರು.

ಸಾರ್ವಜನಿಕ ಅಭಿನಂದನೆ ಸ್ವೀಕರಿಸಿ ಮಾತನಾಡಿದ  ಶಿವರಾಂ ಶೆಟ್ಟಿ, ತಂದೆ ತಾಯಿ ಸೇವೆ ಮೊದಲು ಮಾಡಿ ನಂತರ ದೇವರ ಸೇವೆ ,ದೇಶ ಸೇವೆ ಮಾಡಬೇಕು. ಅಮ್ಮನ ಪ್ರೀತಿ ಯೇ ದೇಶ ಪ್ರೀತಿಯನ್ನು ಬೆಳೆಸುವುದು. ದೇವರ ಭಯವಿರಲಿ ಅಗಲೆ ಭಕ್ತಿ ಹುಟ್ಟಲು ಸಾಧ್ಯ ಎಂದರು.

ಶಿವರಾಂ ಶೆಟ್ಟಿ ಹಾಗೂ ಪುಷ್ಪ ಶಿವರಾಂ ಶೆಟ್ಟಿ ಯವರನ್ನು ಅಭಿನಂದಿಸಲಾಯಿತು.

ದೇವಸ್ಥಾನದ ತಂತ್ರಿ ವಾದಿರಾಜ ತಂತ್ರಿ,ಉದ್ಯಮಿ ಸುಜಯ್ ಶೆಟ್ಟಿ , ವಿಜಯ್ ಶೆಟ್ಟಿ, ಶೋಭ ಶೆಟ್ಟಿ, ಮುಖ್ಯ ಅರ್ಚಕ ರಂಗನಾಥ ಭಟ್ ಉಪಸ್ಥಿತರಿದ್ದರು. 

ಅಶೋಕ ಶೆಟ್ಟಿ ಪ್ರಾರ್ಥಿಸಿದರು. ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.ಭಾಸ್ಕರ ಶೆಟ್ಟಿ ಕುಂಠಿನಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು