6:30 PM Friday2 - January 2026
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಅಹಿತಕರ ಘಟನೆಯ ನ್ಯಾಯಾಂಗ ತನಿಖೆ ನಡೆಯಲಿ: ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹ 6322 ಪರಿಶಿಷ್ಟ ಕುಟುಂಬಗಳಿಗೆ ಕೊಳವೆಬಾವಿ ಭಾಗ್ಯ: ಕಾಮಗಾರಿ ಚುರುಕುಗೊಳಿಸಲು ನೀರಾವರಿ ಸಚಿವರ ಖಡಕ್… Kodagu | ಸೋಮವಾರಪೇಟೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆ: ಕೋವಿ ಸಹಿತ ಮೂವರ… ಕೋವಿಡ್ ಸಾವು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ: ಸರಕಾರಕ್ಕೆ ಅಂತಿಮ ವರದಿ… ಅಪ್ರಾಪ್ತ ಬಾಲಕನಿಂದ ಬೈಕ್ ಚಾಲನೆ: ತಂದೆಗೆ 25 ಸಾವಿರ ರೂ. ದಂಡ ವಿಧಿಸಿದ… ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಕೆ.ಸಿ.‌ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಬಿಜೆಪಿಯ ಎನ್.ರವಿಕುಮಾರ್ ಆರೋಪ ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ಜಮೀನು ಅಕ್ರಮ ಒತ್ತುವರಿಯಾದರೆ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ… ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ…

ಇತ್ತೀಚಿನ ಸುದ್ದಿ

ಸಾಧಕನಿಗೆ ಹುಟ್ಟೂರ ಸನ್ಮಾನವೇ ಬಹುದೊಡ್ಡ ಬಹುಮಾನ: ಮಾಜಿ ಸಚಿವ ಅಭಯಚಂದ್ರ ಜೈನ್

17/11/2021, 21:38

ಕಾರ್ಕಳ(reporterkarnataka.com):
ಸಾಧಕನಿಗೆ ಹುಟ್ಟೂರ ಸನ್ಮಾನವೇ ಬಹುದೊಡ್ಡ ಉಡುಗೊರೆ. ಸಾಧಿಸುವ ಛಲವಿದ್ದರೆ ಉದ್ಯಮವನ್ನು ಹುಟ್ಟು ಹಾಕಬಹುದು. ಅದರಿಂದ ನೂರಾರು ಜನರಿಗೆ ಉದ್ಯೋಗವನ್ನು ನೀಡಬಹುದು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.  

ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಅಜೆಕಾರಿನ ಉದ್ಯಮಿ ಶಿವರಾಂ ಶೆಟ್ಟಿ ಅವರ 75 ವರ್ಷದ ಪಂಚ ಸಪ್ತತಿ ಜನ್ಮದಿನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಜೆಕಾರು ಪದ್ಮ ಗೋಪಾಲ್ ಟ್ರಸ್ಟ್ ಅಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿ, ಸಮಾಜದ ಎತ್ತರವನ್ನು ಹುಡುಕುತ್ತೆವೆ. ಆದರೂ ಅದರ ಹಿಂದಿನ ಶ್ರಮ ಅರ್ಥವಾದರೆ ಅದರ ಮೌಲ್ಯ,ಹಾಗೂ  ಕಷ್ಠವು ತಿಳಿಯುವುದು ಎಂದರು.

ಮಣಿಪಾಲ ಪ್ರಸನ್ನ ಗಣಪತಿ ದೇವಸ್ಥಾನದ ಧರ್ಮದರ್ಶಿ ಬೆಳ್ಳಿಪ್ಪಾಡಿ ಹರಿಪ್ರಸಾದ್ ರೈ  ಮಾತನಾಡಿ, ಕೋಟ್ಯಾಂತರ ರೂಪಾಯಿದ್ದರು ದೇವಸ್ಥಾನ ಕಟ್ಟಲು ಸಾದ್ಯವಿಲ್ಲ. ಅದಕ್ಕೆ ಯೋಗವಿದ್ದರೆ, ಸಾಮರ್ಥ್ಯ ವಿದ್ದರೆ ಮಾತ್ರ ದೇವಾಲಯದ  ಕಾರ್ಯ ಮಾಡಲು ಸಾಧ್ಯ , ಛಲ ,ಶ್ರದ್ಧೆ ನಮ್ಮಲಿರಬೇಕು ಎಂದು ಹೇಳಿದರು.

ಸಾರ್ವಜನಿಕ ಅಭಿನಂದನೆ ಸ್ವೀಕರಿಸಿ ಮಾತನಾಡಿದ  ಶಿವರಾಂ ಶೆಟ್ಟಿ, ತಂದೆ ತಾಯಿ ಸೇವೆ ಮೊದಲು ಮಾಡಿ ನಂತರ ದೇವರ ಸೇವೆ ,ದೇಶ ಸೇವೆ ಮಾಡಬೇಕು. ಅಮ್ಮನ ಪ್ರೀತಿ ಯೇ ದೇಶ ಪ್ರೀತಿಯನ್ನು ಬೆಳೆಸುವುದು. ದೇವರ ಭಯವಿರಲಿ ಅಗಲೆ ಭಕ್ತಿ ಹುಟ್ಟಲು ಸಾಧ್ಯ ಎಂದರು.

ಶಿವರಾಂ ಶೆಟ್ಟಿ ಹಾಗೂ ಪುಷ್ಪ ಶಿವರಾಂ ಶೆಟ್ಟಿ ಯವರನ್ನು ಅಭಿನಂದಿಸಲಾಯಿತು.

ದೇವಸ್ಥಾನದ ತಂತ್ರಿ ವಾದಿರಾಜ ತಂತ್ರಿ,ಉದ್ಯಮಿ ಸುಜಯ್ ಶೆಟ್ಟಿ , ವಿಜಯ್ ಶೆಟ್ಟಿ, ಶೋಭ ಶೆಟ್ಟಿ, ಮುಖ್ಯ ಅರ್ಚಕ ರಂಗನಾಥ ಭಟ್ ಉಪಸ್ಥಿತರಿದ್ದರು. 

ಅಶೋಕ ಶೆಟ್ಟಿ ಪ್ರಾರ್ಥಿಸಿದರು. ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.ಭಾಸ್ಕರ ಶೆಟ್ಟಿ ಕುಂಠಿನಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು