12:42 AM Tuesday16 - September 2025
ಬ್ರೇಕಿಂಗ್ ನ್ಯೂಸ್
Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಜೂನ್ ತಿಂಗಳ ಟಾಪರ್ ಆಗಿ ಶೌರ್ಯ ರಾವ್ ಮತ್ತು ಆಶ್ರಿತ ಪೂಜಾರಿ ಆಯ್ಕೆ

28/07/2024, 21:22

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜೂನ್ ತಿಂಗಳ ಟಾಪರ್ ಆಗಿ ಶೌರ್ಯ ರಾವ್ ಹಾಗೂ ಆಶ್ರಿತ ಪೂಜಾರಿ ಆಯ್ಕೆಯಾಗಿದ್ದಾರೆ.
ಮಂಗಳೂರಿನ ಬಾಲ ಪ್ರತಿಭೆ ಶೌರ್ಯ ರಾವ್, ಶ್ರೀನಿಧಿ ರಾವ್ ಹಾಗೂ ಅಶ್ವಿನಿ ರಾವ್‌ರವರ ಏಕೈಕ ಪುತ್ರ. ಈತನಿಗೆ 7 ವರ್ಷ ವಯಸ್ಸಾಗಿದ್ದು ಮಂಗಳೂರಿನ ಎಸ್.ಡಿ.ಎಂ. ಸ್ಕೂಲ್‌ನಲ್ಲಿ ಕಲಿಯುತ್ತಿದ್ದಾನೆ. ನೃತ್ಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದು ಹಲವಾರು ವೇದಿಕೆಯಲ್ಲಿ ತನ್ನ ಛಾಪನ್ನು ಮೂಡಿಸಿದ್ದಾನೆ. ನೃತ್ಯ ಮಾತ್ರವಲ್ಲದೆ ನಟನೆ, ಈಜು, ಯೋಗ, ತಾಲೀಮು, ಕೆಲಸ್ಟನಿಕ್ಸ್, ಫ್ರೀ ಸ್ಟೈಲ್ ಜಿಮ್ನಾಸ್ಟಿಕ್, ಹಾಡುಗಾರಿಕೆ, ಚಿತ್ರಕಲೆ ಹೀಗೆ ಹಲವಾರು ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದ್ದಾನೆ. ಇತ್ತೀಚಿನ ದಿನಗಳಲ್ಲಿ ಮ್ಯಾಜಿಕ್ ಹಾಗೂ ಕರಾಟೆಯನ್ನೂ ಕಲಿಯುತ್ತಿದ್ದಾನೆ. ಅಷ್ಟೇ ಅಲ್ಲದೆ ಹುಲಿ ನೃತ್ಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು ಹಲವಾರು ವೇದಿಕೆಯಲ್ಲಿ ಪ್ರದರ್ಶಿಸಿದ್ದಾನೆ. ನಮ್ಮ ಕುಡ್ಲ ವಾಹಿನಿಯಲ್ಲಿ ಪ್ರಸಾರವಾಗುವ “ಡಾನ್ಸ್ ಕುಡ್ಲ ಡಾನ್ಸ್” ರಿಯಾಲಿಟಿ ಶೋನಲ್ಲಿ ಸೆಮಿಫೈನಲ್‌ವೆರೆಗೆ ತಲುಪಿ “ಕರ್ನಾಟಕ ದಿ ಬೆಸ್ಟ್ ಡಾನ್ಸರ್” ಶೋಗೆ ನೇರವಾಗಿ ಆಯ್ಕೆಯಾಗಿಯಾಗಿದ್ದಾನೆ. ಈಗಾಗಲೇ ಹಲವು ರಿಯಾಲಿಟಿ ಶೋ, ಎರಡು ಚಲನಚಿತ್ರಗಳಲ್ಲಿ ಹಾಗೂ ಮೂರು ಆಲ್ಬಂ ಸಾಂಗ್‌ನಲ್ಲಿ ಅಭಿನಯಿಸಿ ಹೆಸರುವಾಸಿಯಾಗಿದ್ದಾನೆ. ಮಂಗಳೂರಿನಲ್ಲಿ ನಡೆದ “ಲಿಟ್ಲ್ ಕಿಂಗ್ ಆಫ್ ಮಂಗಳೂರು-2023” ಫ್ಯಾಶನ್ ಶೋನಲ್ಲಿ ಭಾಗವಹಿಸಿ ಮೊದಲನೆಯ “ಲಿಟ್ಲ್ ಕಿಂಗ್ ಆಫ್ ಮಂಗಳೂರು-2023” ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾನೆ. “ಕಿಡ್ಸ್ ಫ್ಯೂಷನ್-2024ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾನೆ. ಕನ್ನಡದ ಶ್ರೇಷ್ಠ ನಟ ಅನಂತ್ ನಾಗ್ ಅವರ 75ನೇ ವರ್ಷದ ಹುಟ್ಟುಹಬ್ಬದ ಸಮಾರಂಭದ ಸಂದರ್ಭದಲ್ಲಿ ಮಾಸ್ಟರ್ ಶೌರ್ಯರವರ ಪ್ರತಿಭೆಯನ್ನು ಪ್ರಶಂಸಿ ಆಶೀರ್ವದಿಸಿದ್ದಾರೆ. ಈಗಾಗಲೇ 100ಕ್ಕೂ ಹೆಚ್ಚು ವೇದಿಕೆಗಳಲ್ಲಿ ಭಾಗವಹಿಸಿ 60ಕ್ಕೂ ಹೆಚ್ಚು ಪ್ರಶಸ್ತಿಗೆ ಭಾಜನನಾಗಿದ್ದಾನೆ. ಕೇವಲ ಸಾಂಸ್ಕೃತಿಕ ಚಟುವಟಿಕೆ ಅಷ್ಷೆ ಅಲ್ಲದೆ ಕಲಿಕೆಯಲ್ಲೂ ಮುಂದೆ ಇದ್ದಾನೆ. ತನ್ನ ವಯಸ್ಸಿಗೂ ಮೀರಿದ ಶೌರ್ಯನ ಈ ಸಾಧನೆ ಪ್ರಶಂಸನೀಯ. ತಂದೆ ತಾಯಿಯ ಪ್ರೋತ್ಸಾಹ ಹಾಗೂ ಆತನ ಪರಿಶ್ರಮ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಗಿದೆ.


ಹರೀಶ್ ಸುವರ್ಣ ಶೃತಿ ಎಚ್. ದಂಪತಿಯ ಎರಡನೇ ಮಗಳಾದ
ಆಶ್ರಿತ ಪೂಜಾರಿ ಆಳ್ವಾಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದಾಳೆ. ಕಳೆದ ಹಲವು ವರ್ಷಗಳಿಂದ
ಮೂಡಬಿದ್ರೆಯ ಟ್ವಿಸ್ಟರ್ ಡ್ಯಾನ್ಸ್ ಅಕಾಡೆಮಿ ಗುರುಗಳಾದ ನಿತಿನ್ ಅವರಲ್ಲಿ ನೃತ್ಯ ಕಲಿಯುತ್ತಿದ್ದಾಳೆ. ಭರತ್ಯನಾಟ್ಯ ಶಿಕ್ಷಕಿಯಾದ ಶ್ರೀಲತಾ ನಾಗರಾಜ್ ಅವರ ಬಳಿ ಭರತ್ಯನಾಟ್ಯ ತರಬೇತಿಯನ್ನು ಪಡೆಯುತ್ತಿದ್ದಾಳೆ. ನೃತ್ಯ , ಛದ್ಮವೇಷ, ಅಭಿನಯ ಗೀತೆ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾಳೆ. ದಿವಾಕರ್ ಮೂಡಬಿದ್ರೆ ಅವರ ಬಳಿ ಈಜುವಿಕೆಯ ತರಬೇತಿಯನ್ನು ಪಡೆಯುತ್ತಿದ್ದಾಳೆ. ವಾಯ್ಸ್ ಆಫ್ ಆರಾಧನಾ ತಂಡದ ಮುಖಾಂತರ ಅಭಿಮತ ವಾಹಿನಿಯಲ್ಲಿ ಭಾಗವಹಿಸಿದ್ದಾಳೆ. ಶಾಲೆಯಲ್ಲಿ ಕಲಿಕೆಯಲ್ಲಿಯೂ ಮುಂದಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು