1:53 PM Tuesday17 - June 2025
ಬ್ರೇಕಿಂಗ್ ನ್ಯೂಸ್
Agriculture | ನೈಸರ್ಗಿಕ ಹಾಗೂ ಸಾವಯವ ಕೃಷಿಗೆ ಸರ್ಕಾರದ ಪ್ರೋತ್ಸಾಹ: ಸಚಿವ ಚಲುವರಾಯಸ್ವಾಮಿ Davanagere | ದಾವಣಗೆರೆ: 1350 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, ಉದ್ಘಾಟನೆ Bangalore | ಮೋದಿ ಎದುರು ನಿಲ್ಲಬಲ್ಲ ಇನ್ನೊಬ್ಬ ನಾಯಕ ಇಲ್ಲ: ಮಾಜಿ ಪ್ರಧಾನಿ… ಬಸವಸಾಗರ ಜಲಾಶಯ ಭರ್ತಿ: 8 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಿಡುಗಡೆ Kalburgi | ಮೀಸಲಾತಿ, ಜಾತಿ ಗಣತಿ ಕಾಂಗ್ರೆಸ್ಸಿನ ರಾಜಕೀಯ ಡ್ರಾಮಾ: ಕೇಂದ್ರ ಸಚಿವ… ಆರೋಗ್ಯ ಆವಿಷ್ಕಾರ’ದಂತಹ ಕಾರ್ಯಕ್ರಮ ಬಿಜೆಪಿ ಕಲ್ಪನೆಗೂ ಬರಲಿಕ್ಕೆ ಸಾಧ್ಯವಿಲ್ಲ: ಆರೋಗ್ಯ ಸಚಿವ ದಿನೇಶ್… Mangaluru | ಕೋಮು ಹಿಂಸಾಚಾರ ಹತ್ತಿಕ್ಕಲು ವಿಶೇಷ ಕಾರ್ಯಪಡೆ ರೆಡಿ: 4 ತುಕಡಿಗಳ… ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮರು ಸಮೀಕ್ಷೆಗೆ ಸಚಿವ ಸಂಪುಟ ತೀರ್ಮಾನ: ಮುಖ್ಯಮಂತ್ರಿ… ಲಕ್ಕೀ ಲೇಡಿ: ಟ್ರಾಫಿಕ್ ನಲ್ಲಿ 10 ನಿಮಿಷ ಸಿಲುಕಿದ ಮಹಿಳೆಗೆ ಫ್ಲೈಟ್ ಮಿಸ್;… ಅಹಮದಾಬಾದ್: ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಏರ್ ಇಂಡಿಯಾ ಬೋಯಿಂಗ್ ಪತನ; ಬೆಂಕಿಯುಂಡೆಯಾದ…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಮೇ ತಿಂಗಳ ಟಾಪರ್ ಆಗಿ ಮನಸ್ವಿ ವೈ.ಎಂ. ಹಾಗೂ ಐಶಾನಿ ಸುಳ್ಯ ಆಯ್ಕೆ

17/06/2025, 13:13

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಮೇ ತಿಂಗಳ ಟಾಪರ್ ಆಗಿ ಮನಸ್ವಿ ವೈ.ಎಂ. ಹಾಗೂ ಐಶಾನಿ ಸುಳ್ಯ ಆಯ್ಕೆಯಾಗಿದ್ದಾರೆ.
ಮನಸ್ವಿ ವೈ.ಎಂ., ಮನೋರಂಜನ್ ಹಾಗೂ ನಾಗರತ್ನ ಅವರ ಮುದ್ದಿನ ಮಗಳು. ಈಕೆ ಮೂಲತಃ ಕರ್ನಾಟಕದವಳಾಗಿದ್ದು ಪ್ರಸ್ತುತ ಹೈದರಾಬಾದ್ ನಲ್ಲಿ ವಾಸವಾಗಿದ್ದಾಳೆ. 6 ವರ್ಷದ ಈಕೆ ಅಕ್ಷರ ಇಂಟರ್ನ್ಯಾಷನಲ್ ಶಾಲೆಯಲ್ಲಿ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ತನ್ನ ಚಿಕ್ಕ ವಯಸ್ಸಿನಿಂದಲೂ ಕಲೆ ಮತ್ತು ನೃತ್ಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾಳೆ. 4ನೇ ವಯಸ್ಸಿನಿಂದ ಹೈದರಾಬಾದ್ ನಲ್ಲಿ ನೃತ್ಯ ವ್ಯಾಸಂಗ ಮಾಡುತ್ತಿದ್ದು ಕೆಲವು ಸ್ಪರ್ಧೆಗಳಲ್ಲಿ ಭಾಗವಹಿಸುವುದಲ್ಲದೆ ಅಲ್ಲಿನ ಸಂಸ್ಕೃತಿ ಮತ್ತು ಜನಪದ ಹಾಡುಗಳಿಗೂ ಕೂಡ ನೃತ್ಯ ಮಾಡಿ ಸೈ ಎನಿಸಿಕೊಂಡಿರುತ್ತಾಳೆ.
ಓದಿನಲ್ಲಿಯೂ ಹೆಚ್ಚಿನ ಆಸಕ್ತಿ ಹೊಂದಿದ್ದು ಉತ್ತಮ ವಿದ್ಯಾರ್ಥಿನಿ ಎನಿಸಿಕೊಂಡಿರುತ್ತಾಳೆ. ಬಿಡುವಿನ ಸಮಯದಲ್ಲಿ ಪೇಂಟಿಂಗ್ ಮತ್ತು ಇನ್ನಿತರ ಕರಕುಶಲ ಕಲೆಗಳನ್ನು ಮಾಡುತ್ತಾಳೆ. ಕರಾಟೆ ಸ್ವಿಮ್ಮಿಂಗ್ ಮತ್ತು ಸಂಗೀತ ವನ್ನು ಮುಂದಿನ ದಿನದಲ್ಲಿ ಅಭ್ಯಾಸ ಮಾಡುವ ಆಶಯ ಹೊಂದಿರುತ್ತಾಳೆ. ವಾಯ್ಸ್ ಆಫ್ ಆರಾಧನಾ ತಂಡದ ಸದಸ್ಯೆ.


ಐಶಾನಿ ಸುಳ್ಯ ಈಕೆ ರಂಜಿನಿ ಮತ್ತು ವಿಕ್ರಮ್ ದಂಪತಿಯ ಪುತ್ರಿ. ತಮ್ಮ ಏಳನೇ ವರ್ಷದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾಳೆ. ತನ್ನ ಮೂರನೇ ವಯಸ್ಸಿನಲ್ಲಿಯೇ
ದೈಜಿ ವರ್ಲ್ಡ್ ಚಾನೆಲ್ ನಲ್ಲಿ ಸಂಗೀತ ತಾರೆ ಎಂಬ ರಿಯಾಲಿಟಿ ಶೋನಲ್ಲಿ ಹಾಡಿ ಜನಮನ್ನಣೆ ಪಡೆದಿದ್ದಾಳೆ. ಉದಯವಾಣಿ ನಡೆಸುವ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಅರಣ್ಯ ಇಲಾಖೆಯವರು ನಡೆಸುವ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಸುಳ್ಯ ಸುದ್ದಿ ಚಾನೆಲ್ ನವರು ನಡೆಸುವ ಚಿತ್ರಕಲಾ ಸ್ಪರ್ಧೆಯಲ್ಲಿ ಸತತ ಎರಡು ವರ್ಷ ಪ್ರಥಮ ಬಹುಮಾನ, ದಕ್ಷಿಣ ಕನ್ನಡ ಜಿಲ್ಲಾ ಬ್ರಾಹ್ಮಣ ಸಂಘ ವತಿಯಿಂದ ನಡೆಸಲಾದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ, ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಶಾಲೆಯಲ್ಲಿ ನಡೆಸುವ ಆಟೋಟ ಸ್ಪರ್ಧೆಗಳಲ್ಲಿ ಹಲವಾರು ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾಳೆ. ಸುಳ್ಯ ಶಿವಳ್ಳಿ ಸಂಪನ್ನ ಅವರು ನಡೆಸುವ ಕ್ರೀಡಾಕೂಟದಲ್ಲಿ ಹಲವಾರು ಬಹುಮಾನಗಳನ್ನು, ಸುದ್ದಿ ಚಾನೆಲ್ ನವರು ನಡೆಸಿದ ಕೃಷ್ಣವೇಷ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಭಗವತ್ ರುದ್ರಗಿರಿ ಅವರ ಆಶ್ರಯದಲ್ಲಿ ನಡೆಸಲಾದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಮೂಡಬಿದರೆ ಜಾನಪದ ಘಟಕದವರು ನಡೆಸಿದ ರಾಜ್ಯಮಟ್ಟದ ಜನಪದ ಗೀತೆ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ, ಮಕ್ಕಳ ಜಗಲಿ ಪತ್ರಿಕೆಯವರು ನಡೆಸುವ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ, ಹೀಗೆ ಇನ್ನು ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾಳೆ. ಈಕೆ ಭರತನಾಟ್ಯವನ್ನು ವಿದುಷಿ ಇಂದುಮತಿ ಅವರ ಬಳಿ ಶಾಸ್ತ್ರೀಯ ಸಂಗೀತವನ್ನು, ರೇಖಾ ರೇವತಿ ಹೊನ್ನಾಡಿ ಮತ್ತು ಚಿತ್ರಕಲೆಯನ್ನು ಪ್ರಸನ್ನ ಕುಮಾರ್, ಐವರ್ನಾಡು ಅವರ ಬಳಿ ಕಲಿಯುತ್ತಿದ್ದಾಳೆ. ಚಿಕ್ಕ ವಯಸ್ಸಿನಲ್ಲಿಯೇ ಸುಮಾರು ನೂರಕ್ಕೂ ಹೆಚ್ಚು ವೇದಿಕೆಗಳಲ್ಲಿ ಸಂಗೀತ, ನೃತ್ಯ, ಮತ್ತು ಭಜನೆ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ತುಳುನಾಡಿನ ಪ್ರಮುಖ ಚಾನೆಲ್ ಗಳಾದ ಸುದ್ದಿ, ಕಹಳೆ, ಅಭಿಮತ ವಾಹಿನಿ, ಡೈಜಿ ವರ್ಲ್ಡ್ ನಂತಹ ಹಲವಾರು ಚಾನಲ್ ಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನವನ್ನು ನೀಡಿರುತ್ತಾರೆ. ವಾಯ್ಸ ಆಫ್ ಆರಾಧನಾ ತಂಡದ ಮುಖ್ಯಸ್ಥೆ ಪದ್ಮಶ್ರೀ ಅವರು ಈಕೆಯ ಪ್ರತಿಭೆಯನ್ನು ಗುರುತಿಸಿ ಈಕೆಗೆ ಹಲವಾರು ವೇದಿಕೆಗಳನ್ನು ಕಲ್ಪಿಸಿ ಕೊಟ್ಟಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು