5:12 PM Wednesday2 - July 2025
ಬ್ರೇಕಿಂಗ್ ನ್ಯೂಸ್
Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ… ಕವಿಕಾದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ: ಇಂಧನ… Kodagu Crime | ಸುಳ್ಳು ಕೊಲೆ ಕೇಸ್ ಮೂಲಕ ಅಮಾಯಕ ಜೈಲಿಗೆ: ಇನ್ಸ್​ಪೆಕ್ಟರ್,… ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೈ ಹಾಕೊಂಡೇ ಅಧಿಕಾರಕ್ಕೆ ಬರಬೇಕು, ಸ್ವಂತ ಶಕ್ತಿಯಿಂದ… Karnataka CM | ಸರಕಾರ 5 ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ: ಮೈಸೂರಿನಲ್ಲಿ ಸಿಎಂ… ಮಾಂಸಕ್ಕಾಗಿ ಜಿಂಕೆ ಕೊಲ್ಲುತ್ತಿದ್ದ ಪಾಪಿಯ ಬಂಧನ: 10 ಜಿಂಕೆ,1 ಕಾಡು ಹಂದಿ ಮಾಂಸ,… Shivamogga | ಯುವತಿಗೆ ಲೈಂಗಿಕ ಕಿರುಕುಳ: ಮೆಗ್ಗಾನ್ ಆಸ್ಪತ್ರೆ ವೈದ್ಯ ಡಾ.ಅಶ್ವಿನ್ ಹೆಬ್ಬಾರ್…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ‘ವಾಯ್ಸ್ ಆಫ್ ಆರಾಧನಾ’: ಜನವರಿ ತಿಂಗಳ ಟಾಪರ್ ಆಗಿ ವಾಗ್ಮಿ ಕೆ. ಪುತ್ತೂರು ಹಾಗೂ ರೊಶ್ನಿ ಶೆಟ್ಟಿ ಆಯ್ಕೆ

06/02/2024, 10:53

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜನವರಿ ತಿಂಗಳ ಟಾಪರ್ ಆಗಿ ವಾಗ್ಮಿ ಕೆ. ಪುತ್ತೂರು ಹಾಗೂ ರೊಶ್ನಿ ಶೆಟ್ಟಿ ಅವರು ಆಯ್ಕೆಗೊಂಡಿದ್ದಾರೆ.


ಪುತ್ತೂರು ತಾಲೂಕಿನ ಕೆಮ್ಮಾಯಿ ಬೀರ್ನಹಿತ್ಲ್ ಎಂಬಲ್ಲಿ ಜನಿಸಿದ ವಾಗ್ಮಿ ಕೆ. ಪುತ್ತೂರು, ಕೇಶವ ಹಾಗೂ ಮಲ್ಲಿಕಾ ಅವರ ಪುತ್ರಿ. ವಾಗ್ಮಿ 10 ತಿಂಗಳ ಮಗುವಾಗಿದ್ದಾಗ ಆನ್‌ಲೈನ್ ನಡೆಸಿದ ಕೃಷ್ಣ ವೇಷ ಫೋಟೋ ಸ್ಪರ್ಧೆಯಲ್ಲಿ 10-12 ರವರೆಗೆ ಬಹುಮಾನಗಳಿಸಿದ್ದಾಳೆ. ಡ್ಯಾನ್ಸ್ ಹಾಗೂ ಛದ್ಮವೇಷ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದಾಳೆ. ಇದುವರೆಗೆ ಭಾಗವಹಿಸಿ ಕೃಷ್ಣ ವೇಷ ಸ್ಪರ್ಧೆಯಲ್ಲಿ ಸುಮಾರು 30ಕ್ಕಿಂತ ಹೆಚ್ಚು ಬಹುಮಾನ ಪಡೆದಿದ್ದಾಳೆ. ಚಾನೆಲ್ 9 ನಡೆಸಿದ ಕೃಷ್ಣ ವೇಷ ವಿಡಿಯೋ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಹಾಗೂ ವಿಜಯ ಕರ್ನಾಟಕದವರು ನಡೆಸಿದ ಕೃಷ್ಣ ವೇಷ ಫೋಟೋ ಸ್ಪರ್ಧೆಯಲ್ಲಿ ಪ್ರೋತ್ಸಾಹಕ ಬಹುಮಾನ ಪಡೆದಿದ್ದಾಳೆ. ಇದೀಗ 4 ವರ್ಷದ ಈಕೆ ಡ್ಯಾನ್ಸ್, ಹಾಡುಗಾರಿಕೆ ಹಾಗೂ ಅಂಗನವಾಡಿ ಚಟುವಟಿಕೆಯಲ್ಲಿ ತುಂಬಾನೆ ಉತ್ತಮ ರೀತಿಯಲ್ಲಿ ಭಾಗವಹಿಸಿದ್ದಾಳೆ. ವಾಯ್ಸ್ ಆಫ್ ಆರಾಧನಾ ತಂಡದ ಬಾಲ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾಳೆ.
ಇನ್ನೋರ್ವ ಬಾಲಪ್ರತಿಭೆ ರೊಶ್ನಿ ಶೆಟ್ಟಿ. ಈಕೆ ಅಮಿತ್ ಕುಮಾರ್ ಹಾಗೂ ಪ್ರತಿಭಾ ಶೆಟ್ಟಿ ಅವರ ಪುತ್ರಿ. ರೋಶ್ನಿ ಮಂಗಳೂರಿನ ಸೈಂಟ್ ತೆರೆಸಾ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಹಲವಾರು ಸಾರ್ವ ಜನಿಕ ಕಾರ್ಯಕ್ರಮದಲ್ಲಿ ಹಾಡುವ ಮೂಲಕ ಹಲವಾರು ಬಹುಮಾನ ಪಡೆದು ಕೊಂಡಿದ್ದಾಳೆ. ಝೀ ಕನ್ನಡ ಸರಿಗಮಪದಲ್ಲಿ ಭಾಗವಹಿಸಿದ್ದಾಳೆ. ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಕೊರೊಕೆ ಹಾಡು ಕಲಿಯುತ್ತಿದ್ದಾಳೆ. ವಾಯ್ಸ್ ಆಪ್ ಆರಾಧನಾ ಪೇಜ್ ನಲ್ಲಿ ಸಕ್ರೀಯವಾಗಿದ್ದಾಳೆ. ಹಾಡು, ನೃತ್ಯ, ಡ್ರಾಯಿಂಗ್ ಈಕೆಯ ಪ್ರಮುಖ ಹವ್ಯಾಸ.

ಇತ್ತೀಚಿನ ಸುದ್ದಿ

ಜಾಹೀರಾತು