4:27 AM Thursday3 - July 2025
ಬ್ರೇಕಿಂಗ್ ನ್ಯೂಸ್
ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ…

ಇತ್ತೀಚಿನ ಸುದ್ದಿ

ಪ್ರತಿ ದಿನವೂ ಮಕ್ಕಳ ದಿನವೇ: ಚಿಣ್ಣರ ಕಲರವ ಎಲ್ಲೆಡೆ ಕೇಳುತ್ತಿರಲಿಲ್ಲ

14/11/2021, 09:38

ಮಕ್ಕಳಿರಲಿ ಮನೆ ತುಂಬಾ… ಹರಡುತ್ತಿರಲಿ ನಗು ಹೃದಯ ತುಂಬಾ.. 

ಮನೆ ತುಂಬಾ ಓಡಾಡುವ ಮಕ್ಕಳ ಕಿಲ ಕಿಲ ನಗುವಿನ ಶಬ್ದ , ಆಗಾಗ ಕಿವಿಗೆ ಅಪ್ಪಳಿಸುವಂತೆ ಕೇಳುವ ಕಿರುಚಾಟ ,ಕೂಗಾಟ, ಮುದ್ದುಮುದ್ದು ಮಾತುಗಳನ್ನು ಕೇಳುವಾಗ ಆಗುವಂತಹ ಸಂತೋಷ ಹೇಳಲು ಅಸಾಧ್ಯ.


ಮಗುವಿನ ಸುಂದರ ಮೊಗ ನೋಡುವಾಗ ಮನಸ್ಸಿಗೆ ಆಗುವಂತಹ ಆನಂದ ವರ್ಣಿಸಲಸದಳ.. 


ಇಂತಹ ಮುದ್ದು ಮನಸಿನ ಮಗು ಮನೆಬಿಟ್ಟು ಶಾಲೆಗೆ ಸೇರಿದ ನಂತರ ಶಾಲೆಯಲ್ಲಿ  ಪಡೆಯುವ ಶಿಕ್ಷಣವು ಮಗುವಿನ ಜೀವನ ಗತಿಯನ್ನೇ ಬದಲಾಯಿಸುತ್ತದೆ.

ಶಾಲೆಯಲ್ಲಿ ಗೆಳೆಯರೊಂದಿಗೆ ಸೇರಿ ಸಹಕಾರ , ಸಹನೆ , ಸಹೋದರತೆ, ಶಿಕ್ಷಕರೊಂದಿಗೆ ಗುರು ಹಿರಿಯರೊಂದಿಗೆ ಗೌರವದಿಂದ ವರ್ತಿಸುವ ವಿಧಾನ ಎಲ್ಲವನ್ನೂ ಶಿಕ್ಷಣದಿಂದ ಕಲಿಯುತ್ತಾರೆ.

ನವೆಂಬರ್ 14 ಬಂತೆಂದರೆ ಮಕ್ಕಳ ಮನದಲ್ಲಿ ಸಂಭ್ರಮ ಮನೆ ಮಾಡುತ್ತದೆ. ಶಿಕ್ಷಕರು ತರಗತಿಗೆ ಹೋಗುವಾಗ ತಮ್ಮ ಮನದಿಂಗಿತವನ್ನು , ಆಶಯವನ್ನು ವ್ಯಕ್ತಪಡಿಸುತ್ತಾರೆ. ಮಕ್ಕಳ ದಿನಾಚರಣೆ ಆಚರಿಸುವ ಬಗ್ಗೆ ಕೇಳುತ್ತಾರೆ. ಮಕ್ಕಳ ದಿನಾಚರಣೆಯಂದು ಇಡೀ ದಿನ ಸಂತೋಷದಿಂದ ಕಳೆಯುತ್ತಾರೆ. ಆ ದಿನ ಮಕ್ಕಳ ಹಬ್ಬ , ಚಿಣ್ಣರ ಚಿಲಿಪಿಲಿ ಹೊಸ ಬಟ್ಟೆ ಹಾಕಿಕೊಂಡು  ಶಾಲೆಗೆ ಬರುವ ಸಂಭ್ರಮದ ಗುಂಗಿನಲ್ಲಿರುತ್ತಾರೆ ,

ಶಾಲೆಯಲ್ಲಿ ಆಟೋಟ ಸ್ಪರ್ಧೆಗಳು ಹಾಡು , ನೃತ್ಯ ಮಾಡುವುದರಿಂದ  ಬಹುಮಾನ ಪಡೆಯುವ ಮೂಲಕ ಸಂಭ್ರಮಿಸುತ್ತಾರೆ. ಎಲ್ಲರೊಂದಿಗೆ ಖುಷಿಯಿಂದ ಬೆರೆತು ಕಲಿತು ಸಂಭ್ರಮವನ್ನು ಆಚರಿಸುತ್ತಾರೆ.. ಈ ಸಂಭ್ರಮ ಕೇವಲ ಮಕ್ಕಳ ದಿನಾಚರಣೆಯಂದು ಮಾತ್ರ ಇರದೆ ಪ್ರತಿದಿನವೂ ಪ್ರತಿಕ್ಷಣವು ಇರಲಿ ಎಂಬುದೇ ನಮ್ಮ ಆಶಯ.

✍️

ಇತ್ತೀಚಿನ ಸುದ್ದಿ

ಜಾಹೀರಾತು