ಇತ್ತೀಚಿನ ಸುದ್ದಿ
ಪ್ರಜ್ಞೆ ತಪ್ಪಿಸಿ ಯುವತಿಯ ಮೇಲೆ ಅತ್ಯಾಚಾರದ ಆರೋಪ: ಬಾಡಿ ಬಿಲ್ಡರ್ ಬಂಧನ
05/05/2022, 15:57
ಬೆಂಗಳೂರು(reporterkarnataka.com): ಅತ್ಯಾಚಾರದ ಆರೋಪದ ಮೇಲೆ ನಗರದ ಕೆ.ಜೆ. ಹಳ್ಳಿಯಲ್ಲಿ ಬಾಡಿ ಬಿಲ್ಡರ್ ವೊಬ್ಬನನ್ನು ಬಂಧಿಸಲಾಗಿದೆ.
ಮುಂಬೈ ಮೂಲದ 23 ವರ್ಷದ ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಸೈಯದ್ ಸಿದ್ದಿಕಿ ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಫೆಬ್ರವರಿ 15 ರಂದು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ವೀಡಿಯೊಗಳನ್ನು ನೋಡಿದ ನಂತರ ಸೈಯದ್ ಸಿದ್ದಿಕಿಯನ್ನು ಯುವತಿ ಸಂಪರ್ಕಿಸಿದ್ದಳು. ಆತ ತರಬೇತಿ ನೀಡಲು ಒಪ್ಪಿದ ನಂತರ, ಯುವತಿ ಬೆಂಗಳೂರಿಗೆ ಆಗಮಿಸಿದ್ದಳು. ಬೆಂಗಳೂರಿನಲ್ಲೇ ತಂಗಿದ್ದ ಯುವತಿಗೆ ಸಿದ್ಧಿಕಿ ತರಬೇತಿ ನೀಡಲು ಪ್ರಾರಂಭಿಸಿದನು. ರಾಷ್ಟ್ರೀಯ ಸ್ಪರ್ಧೆಗೆ ಸಿದ್ಧವಾಗಲು ಸ್ಟೀರಾಯ್ಡ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದನು. ಯುವತಿ ನಿರಾಕರಿಸಿದರೂ ಕೆಲವು ದಿನಗಳ ನಂತರ, ಸೈಯದ್ ಸಿದ್ದಿಕಿ ಕುಡಿಯಲು ಏನೋ ಕೊಟ್ಟು ಪ್ರಜ್ಞೆ ಕಳೆದುಕೊಂಡ ಬಳಿಕ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ.
ಸೈಯದ್ ಸಿದ್ದಿಕಿ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದನು. ಆದರೆ ಈಗ ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಾಡಿ ಬಿಲ್ಡರ್ ನನ್ನು ಬಂಧಿಸಿದ್ದಾರೆ.














