2:12 PM Saturday2 - August 2025
ಬ್ರೇಕಿಂಗ್ ನ್ಯೂಸ್
ರಾಹುಲ್ ಗಾಂಧಿ ನೀಡಿರುವ ‘ಮತ ಕಳ್ಳತನ’ ಪದವು ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಸೇರ್ಪಡೆ:… ಸ್ಪಾಟ್ 1ರಲ್ಲಿ ದೊರೆತ ಡೆಬಿಟ್, ಪಾನ್ ಕಾರ್ಡ್ ವಾರಸುದಾರರು ಪತ್ತೆ; ಧರ್ಮಸ್ಥಳ ಪ್ರಕರಣಕ್ಕೂ… ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತಗಳ್ಳತನದ ವಿರುದ್ಧ ರಾಹುಲ್ ನೇತೃತ್ವದಲ್ಲಿ ಆ.5ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ: ಡಿಸಿಎಂ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಮುಂದುವರಿಯಲಿರುವ ಉತ್ಖನನ ಪ್ರಕ್ರಿಯೆ; ತಾತ್ಕಾಲಿಕ ಶೆಡ್ ನಿರ್ಮಾಣ ಶಿರೂರು ಗುಡ್ಡ ಕುಸಿತ ದುರಂತ ಕಥನ ಬೆಳ್ಳಿತೆರೆ ಮೇಲೆ ನೋಡಿ: ಮಲಯಾಳಂನಲ್ಲಿ ಸಿನಿಮಾ… ಮೈಸೂರಿನಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್ ತಯಾರಿಕಾ ಘಟಕ ಪತ್ತೆ: ಸಂಸತ್ ನಲ್ಲಿ ಯದುವೀರ್… 3 ವರ್ಷ ಬಳಿಕ ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೋ ಗೊತ್ತಿಲ್ಲ: ಶಾಸಕಿ ನಯನಾ ಮೋಟಮ್ಮ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಏನಿಲ್ಲ ಏನಿಲ್ಲ ಎನ್ನುವುದರ ನಡುವೆ ಸಿಕ್ಕೇ ಬಿಡ್ತು…

ಇತ್ತೀಚಿನ ಸುದ್ದಿ

ಪಾಂಡೇಶ್ವರ ಕರ್ನಾಟಕ ಶಿವ ಸೇವಾ ಸಮಿತಿಯಿಂದ ಡಾ ಸುರೇಶ ನೆಗಳಗುಳಿ, ಮಣಿಕಾಂತ್ ಕದ್ರಿ ಸಹಿತ ಸಾಧಕರಿಗೆ ಸನ್ಮಾನ

21/12/2023, 13:36

ಮಂಗಳೂರು(reporterkarnataka.com): ಪಾಂಡೇಶ್ವರದಲ್ಲಿರುವ ಕರ್ನಾಟಕ ಶಿವ ಸೇವಾ ಸಮಿತಿ ವತಿಯಿಂದ ನಡೆಸಿದ 95ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಂಗಳೂರಿನ ಮೂಲವ್ಯಾಧಿ ಕ್ಷಾರ ಚಿಕಿತ್ಸಕ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಅವರಿಗೆ ಶಾಲು ಫಲಕ ಸಹಿತ ಸಾಧಕ ಸನ್ಮಾನ ಮಾಡಲಾಯಿತು.
ಸನ್ಮಾನಕ್ಕೆ ಉತ್ತರವಾಗಿ ನೆಗಳಗುಳಿಯವರು ಮಾತನಾಡುತ್ತಾ, ಸಣ್ಣ ಇರುವೆಯಂತಹ ನನಗೆ ದೈವ ಸನ್ನಿಧಿಯಲ್ಲಿ ನೀಡಿದ ಈ ಪುರಸ್ಕಾರ ಮೊದಲು ಲಭಿಸಿದ ನೂರಾರು ಪ್ರಶಸ್ತಿಗಳಿಂದ ಹೆಚ್ವಿನ ತುಲಾಭಾರ ಹೊಂದಿದೆ. ವೈದ್ಯನಾದ ನಾನು ನನ್ನ ಸೇವೆಯನ್ನು ಮಾಡಲು ಸದಾ ಸಿದ್ಧನಿದ್ದೇನೆ. ಮಂಗಳಾ ಆಸ್ಪತ್ರೆಯಲ್ಲಿ ಕರೆಮಾಡಿ ಸಂಪರ್ಕ ಮಾಡಲು ಈ ಮೂಲಕ ಕರೆ ನೀಡುತ್ತಿದ್ದು ತ್ಯಾಗೇ ನೈಕೇ ಅಮೃತತ್ವ ಮಾನುಷು; ಎಂಬ ಉಕ್ತಿ ಸದಾ ಯಶಸ್ಕರ ಎನ್ನುತ್ತಾ ಇದೇ ಕಾರ್ಯಕ್ರಮದ ವಿಷಯವಾದ ಸ್ವರಚಿತ ಮುಕ್ತಕ ಮಾಲೆಯ ವಾಚನ ಮಾಡಿದರು.
ಕಾಂತಪ್ಪ ಬಂಗೇರ ಬಿ‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್,ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಶಿತ್ ಪಿರೇರಾ, ಸಂಗೀತ ನಿರ್ದೇಶಕ ಮಣಿಕಾಂತ ಕದ್ರಿ, ನಟ ವಿಜಯ ಕುಮಾರ್ ಕೊಡಿಯಾಲ್ ಬೈಲ್, ಪಿಂಗಾರ ಮುಖ್ಯಸ್ಥ ರೇಮಂಡ್ ಡಿಕುನ್ಹ , ಚಲನ ಚಿತ್ರ ನಟ ರಾಜಗುಳಿಗ ಕ್ಷೇತ್ರ ಬಂದಲೆಯ ಧರ್ಮದರ್ಶಿ ಸತೀಶ್ ಬಂದಲೆ, ಮೂಡುಬಿದಿರೆಯ ಗಣೇಶ್ ಪ್ರಸಾದ್,ಹಿಂದುಳಿದ ವರ್ಗ ಅಧ್ಯಕ್ಷ ಸದಾಶಿವ ಕುಲಾಲ್ ,ದೈಹಿಕ ಶಿಕ್ಷಕ ಭಾಸ್ಕರ್ ಪಾಲಡ್ಕ, ಮರಿಪಿಲಿ ಪ್ರಶಸ್ತಿ ವಿಜೇತ ಮಾ. ಶಶಾಂಕ್ ಸಹಿತ ಇತರ ಹಲವು ಕಲಾವಿದರನ್ನು ಶಾಲು ಹಾರ ಸಹಿತ ಸನ್ಮಾನಿಲಾಯಿತು.
ಅಧ್ಯಕ್ಷರು ಮಾತನಾಡುತ್ತಾ ಶಿವ ಕ್ಷೇತ್ರದ ಸ್ಥಾಪನೆಯಾದ ಪರಿ ಹಾಗೂ ಶತಮಾನದತ್ತ ದಾಪು ಕಾಲು ಹಾಕುವ ವಿಚಾರ ತಿಳಿಸಿದರು.
ಅಧ್ಯಕ್ಷ ಯಾದವ ಅತ್ತಾವರ, ಅಮರನಾಥ ಪಾಂಡೇಶ್ವರ ಮತ್ತಿತರ ಪದಾಧಿಕಾರಿಗಳ ಉಸ್ತುವಾರಿಯಲ್ಲಿ ನಡೆದ ವಾರ್ಷಿಕೋತ್ಸವು ಗಣ ಹೋಮ,ಸತ್ಯನಾರಾಯಣ ಪೂಜೆ,ಕ್ಷೇತ್ರ ಪಾಲ ಗುಳಿಗ ದೈವ ಸೇವೆ,ಭಜನೆ ಸಹಿತವಾಗಿ ಮುಂಜಾನೆಯಿಂದ ರಾತ್ರಿ ಪರ್ಯಂತ ಅದ್ದೂರಿಯಿಂದ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಕೊಡಿಯಾಲ್ ಬೈಲ್ ರಚಿಸಿ ನಿರ್ದೇಶಿಸಿರುವ ಮೈತಿದಿ ತುಳು ಸಾಂಸಾರಿಕ ನಾಟಕ ನಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು