3:54 AM Sunday12 - October 2025
ಬ್ರೇಕಿಂಗ್ ನ್ಯೂಸ್
ಹಾಸನಾಂಬ ದರ್ಶನಕ್ಕೆ ಜನರಿಗೆ ತಮ್ಮ ಗುರುತಿನ ಚೀಟಿ ನೀಡಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;…

ಇತ್ತೀಚಿನ ಸುದ್ದಿ

ಪಂಡರಾಪುರದಲ್ಲಿ ಕಾಶೀ ಶ್ರೀಗಳಿಂದ ಶಾಖಾ ಮಠಕ್ಕೆ ಶಿಲಾನ್ಯಾಸ: ಚಂದ್ರಭಾಗ ನದಿ ತೀರದಲ್ಲಿ ನಿಧಿಕಲಶ ಸ್ಥಾಪನೆ

10/03/2023, 19:09

ಮಂಗಳೂರು(reporterkarnataka.com): ದೇವರ ಅನುಗ್ರಹ, ಗುರು ಪರಂಪರೆಯ ಆಶೀರ್ವಾದದಿಂದ ಭಕ್ತಜನರ ಎರಡು ದಶಕಗಳ ಆಶಯ ಈಡೇರಿದೆ ಎಂದು ಕಾಶೀ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಶ್ರೀಗಳು ಮಹಾರಾಷ್ಟ್ರದ ಪಂಡರಾಪುರದಲ್ಲಿ ಕಾಶೀಮಠದ ನೂತನ ಶಾಖಾ ಮಠಕ್ಕೆ ನಿಧಿಕಲಶ ಸ್ಥಾಪನೆ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಶಿಲಾನ್ಯಾಸದ ಬಳಿಕ ಆಶೀರ್ವಚನ ನೀಡಿದರು.
ಪ್ರಸಿದ್ಧ ಪುಣ್ಯಕ್ಷೇತ್ರ ಪಂಡರಾಪುರದಲ್ಲಿ ಶಾಖಾ ಮಠವನ್ನು ಸ್ಥಾಪಿಸಬೇಕೆನ್ನುವ ಆಶಯ ಭಕ್ತವರ್ಗ ಮಾಡುತ್ತಾ ಬಂದಿದೆ. ಚಂದ್ರಭಾಗ ನದಿ ತೀರದಲ್ಲಿಯೇ ಮಠ ನಿರ್ಮಾಣವಾಗುತ್ತಿದೆ. ಭಜನಾ ಪ್ರಿಯ ವಿಠಲ ದೇವರ ಕ್ಷೇತ್ರ ಮತ್ತು ಭಗವಂತ ಕೃಷ್ಣ ಪಾದುಕೆ ಇರುವ ವಿಷ್ಣುಪಾದದ ಬಳಿ ಮಠ ಸ್ಥಾಪನೆಯಾಗುತ್ತಿರುವುದು ಸುಯೋಗ. ಕಾಶಿಮಠದ ಹಿರಿಯ ಯತಿವರ್ಯರಾದ ಕೇಶವೇಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯತಿಥಿಯಂದು ನೂತನ ಮಠದ ಸ್ಥಾಪನೆಗೆ ಕಾಲ ಕೂಡಿ ಬಂದಿರುವುದು ದೇವರ, ಗುರುಗಳ ಅನುಗ್ರಹ ಎಂದು ಹೇಳಿದರು.
ಪುಣ್ಯ ಕ್ಷೇತ್ರದಲ್ಲಿ ಶಾಖಾ ಮಠ ನಿರ್ಮಾಣವಾಗುವುದರಿಂದ ಭಕ್ತರ ಭೇಟಿಗೆ, ವಾಸ್ತವ್ಯಕ್ಕೆ ಅನುಕೂಲವಾಗುತ್ತದೆ. ಹರಿದ್ವಾರ, ತಿರುಪತಿಯಲ್ಲಿಯೂ ಶಾಖಾಮಠದ ಸ್ಥಾಪನೆಯಲ್ಲಿಯೂ ತಮ್ಮ ಗುರುಗಳಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಚಿಂತನೆ ಇತ್ತು. ಅವರ ಆರ್ಶೀವಾದದಿಂದ ಈಗ ಪಂಡರಾಪುರದಲ್ಲಿಯೂ ಶಾಖಾ ಮಠ ನಿರ್ಮಾಣವಾಗಲಿದೆ ಎಂದು ಹೇಳಿದರು.
ವೇದಮಂತ್ರ ಘೋಷಗಳೊಂದಿಗೆ ಸ್ವಾಮೀಜಿಯವರನ್ನು ಸ್ವಾಗತಿಸಲಾಯಿತು. ನೂತನ ಶಾಖಾ ಮಠಕ್ಕಾಗಿ ಯೋಗ್ಯ ಸ್ಥಳವನ್ನು ಆಯ್ಕೆ ಮಾಡುವಾಗ ಎದುರಾದ ಸವಾಲುಗಳು ಮತ್ತು ದೇವರ, ಗುರುಗಳ ಆರ್ಶೀವಾದದಿಂದ ಎಲ್ಲಾ ಕಾರ್ಯ ಸುಲಲಿತವಾಗಿ ನಡೆದದ್ದನ್ನು ದೀಪಕ್ ಭಾಸ್ಕರ್ ಶೆಣೈ ಮುಂಬೈ ವಿವರಿಸಿದರು.


ಸಿಎ ಜಗನ್ನಾಥ ಕಾಮತ್ ಸ್ವಾಗತಿಸಿದರು. ವೇದಮೂರ್ತಿ ಯೋಗೀಶ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಘುವೀರ್ ಭಂಡಾರಕಾರ್, ಅಜಿತ್ ಕಾಮತ್, ಜಯಂತ್ ಪ್ರಭು, ದಿನೇಶ್ ಕಾಮತ್ ಕೋಟೇಶ್ವರ್, ರಾಜೇಶ್ ಪ್ರಭು ಎರ್ನಾಕುಲಂ, ರಮೇಶ್ ಭಂಡಾರಕಾರ್, ನಿತಿನ್ ಪ್ರಭು, ಗುರುಪ್ರಸಾದ ಕಾಮತ್ ಕಾನೆಗಾಡ್, ಗಣೇಶ್ ಹೆಗ್ಡೆ ಪಂಡರಾಪುರ, ಪ್ರವೀಣ್ ಪೈ ಪಂಡರಾಪುರ, ಚೇತನ್ ಕಾಮತ್, ನರೇಶ್ ಪ್ರಭು ಹಾಗೂ ಮಹಾರಾಷ್ಟ್ರ, ಕರ್ನಾಟಕ, ಕೇರಳ ಸಹಿತ ದೇಶದ ವಿವಿಧೆಡೆಯ ಭಕ್ತರು ಆಗಮಿಸಿದ್ದರು. ಶ್ರೀ ಸುಕೃತೀಂದ್ರ ಸ್ವಾಮಿ ಸೇವಾ ಪ್ರತಿಷ್ಠಾನ ಕಾರ್ಯಕ್ರಮ ಆಯೋಜಿಸಿತ್ತು. ಯೂತ್ ಆಫ್ ಜಿಎಸ್ ಬಿ ವಾಹಿನಿಯ ಮೂಲಕ ಕಾರ್ಯಕ್ರಮವನ್ನು ದೇಶ, ವಿದೇಶದ ಭಕ್ತರು ವೀಕ್ಷಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು