ಇತ್ತೀಚಿನ ಸುದ್ದಿ
ಪಾಲಿಕೆಯ ತೆರವು ಕಾರ್ಯಾಚರಣೆ: ಬೀದಿ ಬದಿ ವ್ಯಾಪಾರಿಗಳಿಂದ ಮನಪಾ ಆಯುಕ್ತರ, ಆರೋಗ್ಯ ಅಧಿಕಾರಿಗಳ ಕಚೇರಿಗೆ ಮುತ್ತಿಗೆ
23/02/2023, 21:54
ಮಂಗಳೂರು(reporterkarnataka.com): ನಗರದ ಲಾಲ್ ಭಾಗ್ ಸಮೀಪದ ಮಂಗಳಾ ಕ್ರೀಡಾಂಗಣ ಹಾಗೂ ಲೇಡಿಹಿಲ್ ಸುತ್ತಮುತ್ತಿಲಿನ ಬೀದಿಬದಿ ಆಹಾರ ಮಾರಾಟ ಮಾಡುವ ಬಡ ಬೀದಿ ವ್ಯಾಪಾರಿಗಳ ಮೇಲೆ ಕಾರ್ಯಾಚರಣೆ ನಡೆಸಿ ಅವರ ಆಹಾರದ ಸಾಮಗ್ರಿಗಳನ್ನು ವಶಪಡಿಸಿಕೊಂಡ ನಗರಪಾಲಿಕೆಯ ಆರೋಗ್ಯ ವಿಭಾಗದ ನೀತಿಯ ವಿರುದ್ಧ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ನೇತೃತ್ವದಲ್ಲಿ ಗುರುವಾರ ಪಾಲಿಕೆಯ ಆಯುಕ್ತರ ಕಚೇರಿ ಹಾಗೂ ಆರೋಗ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಪಾಲಿಕೆಯ ಕಾನೂನು ಬಾಹಿರ ಕಾರ್ಯಚರಣೆಯನ್ನು ಖಂಡಿಸಿ ವಶಪಡಿಸಲಾದ ಸೊತ್ತುಗಳನ್ನು ವಾಪಸ್ ನೀಡುವಂತೆ ಒತ್ತಾಯಿಸಿದರು.



ಹೋರಾಟದಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಝ್, ಅಧ್ಯಕ್ಷ ಮೊಹಮ್ಮದ್ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಖಜಾಂಜಿ ಆಸೀಫ್ ಬಾವ ಉರುಮನೆ, ಮುಖಂಡರಾದ ಆನಂದ ಲೇಡಿಹಿಲ್, ಖಾಜಾ ಮೋಹಿಯುದ್ದಿನ್, ಗಜಾನನ ಕಂಕನಾಡಿ, ಗೋಪಾಲ್ ವೆಲೆನ್ಸಿಯ, ಆಸೀಫ್ ಇಕ್ಬಾಲ್ ಲೇಡಿಹಿಲ್ ಉಪಸ್ಥಿತರಿದ್ದರು.














