10:00 PM Sunday21 - September 2025
ಬ್ರೇಕಿಂಗ್ ನ್ಯೂಸ್
ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆ ಆದವರೆಲ್ಲಾ ಹಿಂದುಳಿದವರೇ ಆಗಿದ್ದಾರೆ: ಸಿಎಂ… ವಿರಾಜಪೇಟೆ ಆರೆಂಜ್ ಸ್ಪಾ -ಬ್ಯೂಟಿ ಪಾರ್ಲರ್ ದಾಳಿ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ… Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ…

ಇತ್ತೀಚಿನ ಸುದ್ದಿ

ಪಾಲಿಕೆ ಆಡಳಿತ ನಿರ್ಲಕ್ಷ್ಯ; ಬಜಾಲ್ ಚರ್ಚ್ ಮುಂಭಾಗದಲ್ಲಿ ತ್ಯಾಜ್ಯ ನೀರು ಕಕ್ಕುವ ಮ್ಯಾನ್ ಹೋಲ್ !!; ದುರ್ವಾಸನೆಯೊಂದಿಗೆ ಸ್ಥಳೀಯರ ಬದುಕು!

06/05/2022, 15:20

ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com

ನೆಗಡಿಯಾದಾಗ ಮೂಗು ಸೋರುವುದು ಸಾಮಾನ್ಯ. ನಮ್ಮ ಮಹಾನಗರಪಾಲಿಕೆಗೂ ಇದೇ ಸಮಸ್ಯೆ. ಪಾಲಿಕೆಯ 60 ವಾರ್ಡ್ ಗಳ ಪೈಕಿ ಎಲ್ಲದರೂ ಒಂದು ಕಡೆ ಮ್ಯಾನ್ ಹೋಲ್ ಸೋರುತ್ತಲೇ ಇರುತ್ತದೆ. ನಗರದ ಹೃದಯಭಾಗವಾದ ಅಂಬೇಡ್ಕರ್ ಸರ್ಕಲ್ ಬಳಿಯೇ ತಿಂಗಳಿಗೆ ಎರಡು ಬಾರಿ ಮ್ಯಾನ್ ಹೋಲ್ ಸೋರುತ್ತಿರುತ್ತದೆ. ಆದರೆ ನಾವು ಈಗ ಹೇಳ ಹೊರಟಿರುವುದು ನಗರದ ಹೃದಯಭಾಗದ ಸೋರಿಕೆಯಲ್ಲ. ಬದಲಿಗೆ ನಗರದ ಒಂದು ಮೂಲೆಯಲ್ಲಿರುವ ಕಂಕನಾಡಿ ಬಿ ವಾರ್ಡ್ ಹಾಗೂ ಅಳಪೆ 50ನೇ ವಾರ್ಡ್ ಮಧ್ಯದಲ್ಲಿ ಇರುವ ಮ್ಯಾನ್ ಹೋಲ್ ಕಥೆ. 


ಎರಡು ವಾರ್ಡ್ ಗಳ ಮಧ್ಯೆ ಇದು ಇರುವುದರಿಂದ ಇದು ಯಾವ ವಾರ್ಡ್ ಗೆ ಸೇರಿದ್ದು ಎಂಬ ಜಿಜ್ಞಾಸೆ ಇದೆ. ಇಲ್ಲಿನ ಮ್ಯಾನ್ ಹೋಲ್ ಕಿವಿ ಸೋರುವ ರೀತಿಯಲ್ಲಿ ಸೋರುತ್ತಲೇ ಇರುತ್ತದೆ. ಕಿವಿ ಸೋರಿದರೆ ಹತ್ತಿ ಇಟ್ಟು ಭದ್ರ ಮಾಡಬಹುದು. ಆದರೆ ಪಾಲಿಕೆಯ ಮ್ಯಾನ್ ಹೋಲ್ ಸೋರಿದರೆ ಯಾವ ಹತ್ತಿಯ ಆಟವೂ ನಡೆಯೋದಿಲ್ಲ. ಆದ್ದರಿಂದ ದುರ್ವಾಸನೆಯುಕ್ತ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿದು ಅಂಗಡಿಯ ಎದುರುಗಡೆಯಿಂದ ಸಾಗುತ್ತದೆ.


ಬಸ್ಸು ಹೋಗುವ ಈ  ರಸ್ತೆಯಲ್ಲಿ ಸತತ ಒಂದು ತಿಂಗಳಿಂದ ಮ್ಯಾನ್ ಹೋಲ್ ತ್ಯಾಜ್ಯ ಹರಿಯುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ. ಆದರೆ ಸೂಕ್ತ ಕ್ರಮ ಕೈಗೊಂಡಿಲ್ಲ. ಮ್ಯಾನ್ ಹೋಲ್ ಕನೆಕ್ಷನ್  ಸರಿಯಾಗಿ ಆಗಿಲ್ಲ ಎಂಬ ಸಾರ್ವಜನಿಕರು ಹೇಳುತ್ತಾರೆ. ಮಳೆ ನೀರಿನೊಂದಿಗೆ ಡ್ರೈನೇಜ್ ನೀರು ಮಿಶ್ರಣವಾಗಿ ನಡೆದು ಹೋಗುವ ಪ್ರಯಾಣಿಕರು ಅದನ್ನೇ ತುಳಿದುಕೊಂಡು ಹೋಗುವ ಹೋಗುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಇಂದಿನ ಕೊರೊನಾ ಕಾಲದಲ್ಲಿ ಅನೇಕ ಬ್ಯಾಕ್ಟೀರಿಯಗಳು ಹರಡುವ ಸಾಧ್ಯತೆಯಿದ್ದು, ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಕೊಡಬೇಕಾಗಿದೆ

ಹೇಮಾವತಿ ನಗರದಲ್ಲಿ ಇತ್ತೀಚಿಗೆ ಮ್ಯಾನ್ ಹೋಲ್ ಸಂಪರ್ಕ ಮಾಡಲಾಗಿದೆ. ಆದರೆ ನನಗೆ ಬಜಾಲ್ ಮ್ಯಾನ್ ಹೋಲ್ ಸಂಪರ್ಕದ ಬಗ್ಗೆ ಗೊತ್ತಿಲ್ಲ. ಯಾವಾಗ ಕೊಟ್ಟಿದೆ ಯಾರು ಕೊಟ್ಟಿದ್ದಾರೆ ಎನ್ನುವ ಬಗ್ಗೆ ನನಗೆ ತಿಳಿದಿಲ್ಲ.ಇದು ಅಳಪೆ 50 ವಾರ್ಡಿಗೆ ಬರುವುದಿಲ್ಲ. ಆದರೆ ಎರಡು ಬಾರಿ ಲೀಕೇಜ್ ಸಮಸ್ಯೆ  ಪರಿಹರಿಸಿದ್ದೇನೆ.

– ಶೋಭಾ ಪೂಜಾರಿ, ಕಾರ್ಪೊರೇಟರ್ , ಅಳಪೆ 50 ವಾರ್ಡ್

ಇದು ನನ್ನ ವಾರ್ಡ್ ಗೆ ಬೀಳುವುದಿಲ್ಲ.ಆದರೆ ಈ ಮ್ಯಾನ್ ಹೋಲ್ ಸಮಸ್ಯೆ  ಸರಿಪಡಿಸುವುದು ಇಬ್ಬರು ಕಾರ್ಪೊರೇಟರ್ ಗಳ ಜವಾಬ್ದಾರಿಯೂ ಹೌದು. ಈ ಮ್ಯಾನ್ ಹೋಲ್ ಪ್ರದೇಶದಲ್ಲಿ   ಕಾಂಕ್ರೀಟ್  ಕಾಮಗಾರಿ  ಕಾರ್ಪೊರೇಟರ್ ಶೋಭಾ  ಅವರ ಉಸ್ತುವಾರಿಯಲ್ಲಿ ನಡೆದಿತ್ತು. ಈ ಬಗ್ಗೆ ಇಂಜಿನಿಯರ್ ಪದ್ಮಾ ಅವರಲ್ಲಿ ಮಾತಾಡಿದ್ದೇನೆ. ನಾಳೆ  ಲೀಕೇಜ್   ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಹಾಗೊಂದು ವೇಳೆ ಲಿಕೇಜ್ ಸರಿಯಾಗದಿದ್ದ ಲ್ಲಿ ಆ ಜಾಗದಲ್ಲಿನ ಕಾಂಕ್ರೆಟ್ ಒಡೆದು ನೋಡಬೇಕಷ್ಟೇ.

ಕಾಂಕ್ರೀಟ್ ಹಾಕುವಾಗಲೇ ಸರಿಯಾದ ಪ್ಲಾನಿಂಗ್ ಹಾಕಿದ್ದಲ್ಲಿ ಮತ್ತೆ ಇಂತಹ ಸಮಸ್ಯೆಗಳು ಬರುವುದಿಲ್ಲ.  

ಪ್ರವೀಣ್ ಚಂದ್ರ ಆಳ್ವ, ಕಾರ್ಪೊರೇಟರ್ ಕಂಕನಾಡಿ (49) ಬಿ ವಾರ್ಡ್

ಇತ್ತೀಚಿನ ಸುದ್ದಿ

ಜಾಹೀರಾತು