6:58 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಪದ್ಯದ ಜತೆಗೆ ಗದ್ಯ ರಚನೆ ಬಗ್ಗೆಯು ಒಲವು ಮೂಡಿಸಿಕೊಳ್ಳಬೇಕು : ಡಾ.ಬಿ.ಎ.ವಿವೇಕ ರೈ

12/01/2022, 22:39

ಮಂಗಳೂರು (ReporterKarnataka.com)

ಕರಾವಳಿ ಲೇಖಕಿಯರ ಹಾಗೂ ವಾಚಕಿಯರ ಸಂಘ ಹಾಗೂ ಪಾದುವ ಪದವಿಪೂರ್ವ ಕಾಲೇಜ್‌ನ ಸಹಯೋಗದಲ್ಲಿ ತೌಳವ ಸಿರಿ ಪ್ರಶಸ್ತಿ, ಸಾರಾ ದತ್ತಿ ಪ್ರಶಸ್ತಿ ಹಾಗೂ ಚಂದ್ರಭಾಗಿ ರೈ ದತ್ತಿ ಬಹುಮಾನ ಪ್ರದಾನ ಕಾರ್ಯಕ್ರಮ ಪಾದುವ ಪದವಿಪೂರ್ವ ಕಾಲೇಜ್ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಬಿ.ಎ.ವಿವೇಕ ರೈ ಮಾತನಾಡಿ, ಕರಾವಳಿಯ ಅನೇಕರು ಕವನವನ್ನು ಬರೆಯುತ್ತಿದ್ದಾರೆ, ಕೇವಲ ಕವನಗಳಿಗೆ ಸೀಮಿತರಾಗಬಾರದು ಪದ್ಯಗಳ ಜತೆಗೆ ಗದ್ಯ ರಚನೆಯನ್ನೂ ರೂಢಿಸಿಕೊಳ್ಳಬೇಕು, ಪದ್ಯವನ್ನು ಬರೆದಾಗ ಅದನ್ನು ಹಾಡಿದಾಗ ಅವುಗಳಿಗೆ ಲೈಕು ಬಂದಾಗ ಬರಿ ಅದಕಷ್ಟೆ ಮಾರು ಹೋಗಬೇಡಿ ಎಂದು ಕಿವಿ ಮಾತು ಹೇಳಿದರು.
ಜತೆಗೆ ಅಧ್ಯಯನ ಕೂಡ ಉತ್ತಮ ಕ್ಷೇತ್ರವಾಗಿದ್ದು ಯುವ ಜನತೆ ಇದರ ಬಗ್ಗೆ ಗಮನ ಹರಿಸಬೇಕು ಸಂಶೋಧನೆಗೆ ಯಾವುದೆ ಪದವಿ ಪಿಎಚ್‌ಡಿ ಮುಖ್ಯವಲ್ಲ ಸುತ್ತಮುತ್ತಲಿನ ಕೇಂದ್ರಗಳ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿ ಬರೆದು ಅಧ್ಯಯನ ಮಾಡಬಹುದು ಎಂದರು.

ಹಿರಿಯ ಸಂಶೋಧಕಿ ಡಾ.ಇಂದಿರಾ ಹೆಗ್ಗಡೆಯವರಿಗೆ ತೌಳವ ಸಿರಿ ಪ್ರಶಸ್ತಿ, ಸ್ನೇಹದೀಪದ ಸಂಚಾಲಕಿ ತಬಸ್ಸುಮ್ ಅವರಿಗೆ ಸಾರಾ ದತ್ತಿ ಪ್ರಶಸ್ತಿ ಹಾಗೂ ನಿರ್ಮಲಾ ಸುರತ್ಕಲ್ ಅವರಿಗೆ ಚಂದ್ರಭಾಗಿ ರೈ ದತ್ತಿ ಬಹುಮಾನವನ್ನು ಪ್ರದಾನ ಮಾಡಲಾಯಿತು.

ಪಾದುವಾ ಪದವಿಪೂರ್ವ ಕಾಲೇಜ್ ಪ್ರಾಂಶುಪಾಲರಾದ ಗ್ಲಾಡಿಸ್ ಅಲೋಸಿಯಸ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕರಾದ ಡಾ.ಸಕೀನಾ ನಾಸೆರ್ ಉಪಸ್ಥಿತರಿದ್ದರು. ಹಿರಿಯ ಲೇಖಕಿ ರೂಪಕಲಾ ಆಳ್ವ ತೀರ್ಪುಗಾರರ ಅನಿಸಿಕೆಯನ್ನು ಹಂಚಿಕೊಂಡರು.

ಡಾ.ಜ್ಯೋತಿ ಚೇಳ್ಯಾರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಸಂಘದ ಉಪಾಧ್ಯಕ್ಷರಾದ ವಿಜಯಲಕ್ಷ್ಮೀ ಬಿ.ಶೆಟ್ಟಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಡಾ.ಪ್ರವೀಣ ರೈ ಕುಕ್ಕುವಳ್ಳಿ ನಿರೂಪಿಸಿದರು. ಸಂಘದ ಕೋಶಾಧಿಕಾರಿ ಶರ್ಮಿಳಾ ಶೆಟ್ಟಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು