8:27 PM Sunday5 - April 2026
ಬ್ರೇಕಿಂಗ್ ನ್ಯೂಸ್
ಕೇರಳ ಚುನಾವಣೆಗೆ ಕರ್ನಾಟಕದ ಹಣ?: ತಿರುವನಂತಪುರದಲ್ಲಿ ಕಂತೆ ಕಂತೆ ನೋಟು ಸಮೇತ ಸಿಕ್ಕಿಬಿದ್ದ… ಚಾರಣಕ್ಕೆ ತೆರಳಿ 4 ದಿನಗಳಿಂದ ನಾಪತ್ತೆಯಾಗಿದ್ದ ಕೇರಳದ ಟೆಕ್ಕಿ ಶರಣ್ಯ ಪತ್ತೆ ಸಿದ್ದರಾಮಯ್ಯ ಬಗ್ಗೆ ಪ್ರತಾಪ್ ಸಿಂಹ ನೀಡಿರುವ ಹೀನಾಯ ಹೇಳಿಕೆ ಬಿಜೆಪಿಯ ನೀಚ ರಾಜಕಾರಣ… ಎಸ್ಸೆಸ್ಸೆಲ್ಸಿ ಗ್ರೇಡಿಂಗ್ ಪದ್ಧತಿಗೆ ರಾಜ್ಯಪಾಲರು ವಿರೋಧ: ನಾಳೆ ರಾಜಭವನಕ್ಕೆ ಕರವೇ ಮುತ್ತಿಗೆ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ’: ರಾಜ್ಯಪಾಲರಿಗೆ ಕರವೇ ನಾರಾಯಣ ಗೌಡ ಖಡಕ್… ದೇಶದಲ್ಲೇ ಅತಿ ಹೆಚ್ಚು | ಬೆಂಗಳೂರಿಂದ 272 ಅಕ್ರಮ ಬಂಗ್ಲಾ ವಲಸಿಗರು ಗಡಿಪಾರು Kodagu | ಕುಶಾಲನಗರ: ಹರದೂರು – ಕಾಜೂರು ಮಕಾಂ ಉರೂಸ್ ಗೆ ಚಾಲನೆ ತ.ನಾ. ಚುನಾವಣೆ | ಚಾಮರಾಜನಗರ ಸಮೀಪದ ಮೆಟ್ಟೂರು ಕ್ಷೇತ್ರದಿಂದ ವೀರಪ್ಪನ್‌ ಪುತ್ರಿ ವಿದ್ಯಾರಾಣಿ… ಅಡಿಕೆಯೊಳಗಿದ್ದ ಸ್ಫೋಟಕ ಸಿಡಿದು ಮಹಿಳೆಗೆ ಗಾಯ: ಅಡಿಕೆಯಲ್ಲಿ ಇದ್ದಿದ್ದಾದರೂ ಏನು..? ಪ್ರಕರಣದ ಸತ್ಯಾಂಶ… ನಂಜನಗೂಡು: ಶ್ರದ್ಧಾ ಭಕ್ತಿಯಿಂದ ನಡೆದ ಪುರಾಣ ಪ್ರಸಿದ್ಧ ಕಳಲೆ ಶ್ರೀ ಲಕ್ಷ್ಮಿಕಾಂತ ಸ್ವಾಮಿ…

ಇತ್ತೀಚಿನ ಸುದ್ದಿ

ಒಮ್ಮೆ ನೀ ಹೊಕ್ಕು ನೋಡು ಪುಸ್ತಕದೊಳು… ಹೆಚ್ಚಿಸುವುದು ನಿನ್ನ  ಜ್ಞಾನವನು ಮಸ್ತಕದೊಳು

23/04/2022, 09:40

ಒಮ್ಮೆ ನೀ ಹೊಕ್ಕು ನೋಡು ಪುಸ್ತಕದೊಳು…

ಹೆಚ್ಚಿಸುವುದು ನಿನ್ನ  ಜ್ಞಾನವನು ಮಸ್ತಕದೊಳು..

ತಲೆ ಎತ್ತಿ ನಿಲ್ಲುವಂತೆ ಮಾಲ್ಪುದು ನಾಲ್ಕು ಜನರೊಳು…

ಕರಮುಗಿದು ನಮಸ್ಕರಿಸುವರು ನಿನಗೆ ಈ ಜಗದೊಳು….

“ದೇಶ ಸುತ್ತಿ ನೋಡು ಕೋಶ ಓದಿ ನೋಡು ” ಎಂಬ ಗಾದೆ ಮಾತಿನಂತೆ ಪುಸ್ತಕಗಳು ನಮ್ಮ ಜ್ಞಾನವನ್ನು ಹೆಚ್ಚಿಸಬಲ್ಲ ಆಗರಗಳು.  ಪುಸ್ತಕಗಳು ನಮ್ಮ ಜೀವನದಲ್ಲಿ ಸಂಗಾತಿಯಾಗಿ, ಗುರುವಾಗಿ, ಗೆಳೆಯರಾಗಿ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತದೆ. ಹಲವು ವರ್ಷಗಳಿಂದ ಮಾನವನ ವಿಕಾಸ ಪ್ರಕ್ರಿಯೆಯಲ್ಲಿ ಮತ್ತು ಜ್ಞಾನ ಪರಂಪರೆಯನ್ನು ಮುಂದುವರಿಸಿಕೊಂಡು ಬರುವುದರಲ್ಲಿ ಪುಸ್ತಕಗಳ ಪಾತ್ರ ಹಿರಿದಾಗಿದೆ.

ಈ ಅಂಶವನ್ನು ಮನಗಂಡ ಯುನೆಸ್ಕೋ 1995ರಲ್ಲಿ” ಏಪ್ರಿಲ್ 23″ ನ್ನು ವಿಶ್ವ ಪುಸ್ತಕ ದಿನವನ್ನಾಗಿ ಘೋಷಿಸಿತು. ಓದುವ ಅಭಿರುಚಿಯನ್ನು ಬೆಳೆಸುವುದು, ಪುಸ್ತಕೋದ್ಯಮವನ್ನು ಬೆಂಬಲಿಸುವುದು ಮತ್ತು ಕಾಪಿರೈಟ್ ಕಾಯ್ದೆ (ಗ್ರಂಥಸಾಮ್ಯ)ಯನ್ನು ಬಲಪಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಶೇಷ್ಠ ನಾಟಕಕಾರ, ದಾರ್ಶನಿಕ ವಿಲಿಯಂ ಷೇಕ್ಸ್ಪಿಯರ್  ಹುಟ್ಟಿದ ಮತ್ತು ಮರಣದ ದಿನವೂ ಏಪ್ರಿಲ್ 23 ಆಗಿದೆ. ಆದುದರಿಂದ ವಿಶ್ವ ಪುಸ್ತಕ ದಿನಾಚರಣೆಗೆ ಹೆಚ್ಚಿನ ಮಹತ್ವವನ್ನೂ ನೀಡಲಾಗಿದೆ.

ಪುಸ್ತಕಗಳು ನಮ್ಮಿಂದ ಏನನ್ನೂ ನಿರೀಕ್ಷಿಸುವುದಿಲ್ಲ ಆದರೆ ಪುಸ್ತಕದಿಂದ ನಾವು ಬೆಟ್ಟದಷ್ಟು ಲಾಭವನ್ನು ಪಡೆಯಬಹುದು.

ಪುಸ್ತಕಗಳು ನಮಗೆ ಬದುಕುವುದನ್ನು ಕಲಿಸುವುದರ ಜೊತೆಗೆ ಅಲೋಚನಾ ಶಕ್ತಿಯನ್ನು, ಜೀವನ ಮೌಲ್ಯಗಳನ್ನು, ಆದರ್ಶಗಳನ್ನು , ಗೌರವವನ್ನು ದೊರಕಿಸುತ್ತದೆ . ಸೋಲಿನ ಹತಾಶೆ ಯಲ್ಲಿರುವ ಮನುಷ್ಯನಿಗೆ  ಸ್ಪೂರ್ತಿಯನ್ನು , ಆತ್ಮ ಧೈರ್ಯವನ್ನು  ತುಂಬಿಸುತ್ತದೆ. ಪುಸ್ತಕಗಳು ನಮ್ಮ ಬದುಕನ್ನು ಬಂಗಾರವನ್ನಾಗಿಸುತ್ತದೆ.

ತಾಳೆಗರಿಯಲ್ಲಿ ಬರೆಯಲು ಪ್ರಾರಂಭಿಸಿದ ಕಾಲದಿಂದ ಹಿಡಿದು ಈಗಿನ  ಇ ಪುಸ್ತಕಗಳ ವರೆಗೆ ಪುಸ್ತಕದ ರೂಪ ಬದಲಾಗಿರಬಹುದು ಆದರೆ ಮಹತ್ವ ಮತ್ತು ಸಾರ ಬದಲಾಗಿಲ್ಲ.. 


ಇಂದಿನ ಆಧುನಿಕ ತಂತ್ರಜ್ಞಾನ ಹೆಚ್ಚಾದಂತೆಲ್ಲ ಯುವಜನತೆ ಮೊಬೈಲ್ , ಕಂಪ್ಯೂಟರ್ ನಂತಹ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಒಗ್ಗಿಕೊಂಡ ಪರಿಣಾಮವಾಗಿ ಪುಸ್ತಕ ಓದುವ ಹವ್ಯಾಸ ಬಹಳಷ್ಟು ಮಂದಿಯಲ್ಲಿ ಕಡಿಮೆಯಾಗಿದೆ.

ಮನೆಯಲ್ಲಿ ಮತ್ತು ಶಾಲೆಗಳಲ್ಲಿ ಮಕ್ಕಳು ಎಳೆಯ ವಯಸ್ಸಿನಲ್ಲಿಯೇ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸುವ ಅಭ್ಯಾಸ ಮಾಡಬೇಕು.. “ಒಳ್ಳೆಯ ಪುಸ್ತಕಗಳು ನಮ್ಮ ಜ್ಞಾನವನ್ನು ತಣಿಸುವ ಚಿಲುಮೆಗಳು”.

“ಪುಸ್ತಕಗಳನ್ನು ತಲೆತಗ್ಗಿಸಿ ಓದಿದರೆ ಅವುಗಳು ಜೀವನದಲ್ಲಿ ನಮ್ಮನ್ನು ತಲೆಯೆತ್ತಿ ನಡೆಯುವಂತೆ ಮಾಡುತ್ತದೆ.” . ಎಂಬ  ಅರ್ಥಪೂರ್ಣವಾದ  ಮಾತನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತಾ ಪ್ರತಿಯೊಬ್ಬರು ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳೋಣ… 

ಪುಸ್ತಕಗಳು ಎಲ್ಲರ ಮನಸ್ಸನ್ನು ಬೆಳಗಲಿ.. ಪುಸ್ತಕಗಳ ಮೂಲಕ ಜ್ಞಾನವೆಂಬ ಬೆಳಕು ಜಗದೆಲ್ಲೆಡೆ ಪಸರಿಸಲಿ .

“ಎಲ್ಲರಿಗೂ ವಿಶ್ವ ಪುಸ್ತಕ ದಿನದ ಶುಭಾಶಯಗಳು” 

✍️

ಇತ್ತೀಚಿನ ಸುದ್ದಿ

ಜಾಹೀರಾತು