12:10 PM Tuesday13 - January 2026
ಬ್ರೇಕಿಂಗ್ ನ್ಯೂಸ್
ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ ನಮ್ಮ ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್: ಎಎಪಿ ಯುವ ಘಟಕದಿಂದ ಸಹಿ ಸಂಗ್ರಹಣ…

ಇತ್ತೀಚಿನ ಸುದ್ದಿ

ನಿಡುವಾಳೆ ಗ್ರಾಪಂ ಉಪ ಚುನಾವಣೆ: ಒಂದು ಸ್ಥಾನಕ್ಕೆ ಸರ್ವಪಕ್ಷದ ಸಹಕಾರದಿಂದ ಕಮಲಮ್ಮ ಆಯ್ಕೆ

16/11/2024, 18:58

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ನಿಡುವಾಳೆ ಗ್ರಾಮ ಪಂಚಾಯಿತಿಯ ಒಂದು ಸದಸ್ಯರ ಸ್ಥಾನಕ್ಕೆ ನಡೆಯಬೇಕಾಗಿದ್ದ ಉಪಚುನಾವಣೆಗೆ ಸರ್ವ ಪಕ್ಷಗಳಾದ ಸಹಕಾರದಿಂದ ಕಮಲಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ‌.

ಬಿಜೆಪಿ,ಕಾಂಗ್ರೆಸ್, ಸಿಪಿಐ ಜೆಡಿಎಸ್ ಹಾಗೂ ನಿಡುವಾಳೆ ಗ್ರಾಮಸ್ಥರ ಸಹಕಾರದೊಂದಿಗೆ ಕಮಲಮ್ಮ ಅವರ ಅವಿರೋಧವಾಗಿ ಆಯ್ಕೆ ನಡೆದಿದೆ. ಆಡಳಿತಾವಧಿ ಕೇವಲ ಇನ್ನೂ ಒಂದು ವರ್ಷ ಮಾತ್ರ ಇರುವುದರಿಂದ ಸರ್ವ ಪಕ್ಷದವರ ಸಲಹೆ ಹಾಗೂ ಮಾರ್ಗದರ್ಶನದಂತೆ ಕಮಲಮ್ಮ
ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಬಾಳೂರು ಹೋಬಳಿ ಅಧ್ಯಕ್ಷ ಬಿ.ಬಿ. ಮಂಜುನಾಥ್, ಸಿಪಿಐ ತಾಲೂಕು ಕಾರ್ಯದರ್ಶಿ ರಮೇಶ್ ಕೆಳಗೂರು, ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಶ್ರೀನಾಥ್ , ಜೆಡಿಎಸ್ ಯುವ ಮುಖಂಡ ಅಭಯ್ ಮರ್ಕಲ್ ಹಾಗೂ ಸ್ಥಳೀಯರಾದ ಸುಧಾಕರ್ ನಿಡುವಾಳೆ , ಎಂ.ಎಲ್. ವಿಜೇಂದ್ರ ಮರ್ಕಲ್, ಬ್ಯಾಂಡ್ ರವಿ ,ಚಂದ್ರಣ್ಣ ಎಚ್.ಆರ್, ಸೀನ , ಯಶ್ವಂತ್, ದಿಲೀಪ್, ಪ್ರದೀಪ್ ಕಾವಲನ್, ಚೇತನ್ ಶರ್ಮ , ವಸಂತ ಜಂಗಲ್,
ಸಂಜಯ್, ಸಂಜೀವ ಉರ್ವಿನ್ ಖಾನ್, ದಿನೇಶ್ ಉರ್ವಿನ್ ಖಾನ್ ,ತನಿಯಪ್ಪ, ಅಶೋಕ್, ಸ್ವಾಮಿ ಮರ್ಕಲ್, ಸಾಗರ್ ಚಂದ್ರು ಆಟೋ ಕೂವೆ ,ಪ್ರಮೋದ್ ,ಮಹೇಶ್ ಬಾಳೂರು, ಲಾರೆನ್ಸ್ ಬಾಳೂರು, ಸಂದೀಪ್ ಬಾಳೂರು, ಪರೀಕ್ಷಿತ್ ಜಾವಳಿ , ಚಂದ್ರಶೇಖರ್ ನಿಡುವಾಳೆ,ಸೀನ ಶಂಕರ ಹೇಮಾವತಿ, ವಿಜಯ್ ಕಲ್ಲಕ್ಕಿ, ರಾಜಕುಮಾರ್ ಕಲ್ಲಕ್ಕಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗುಲಾಬಿ ಹಾಗೂ ನವೀನ್ ಹಾವಳಿ, ಸಚಿನ್ ಮರ್ಕಲ್, ಕಮಲಮ್ಮ ಅವರ ಮಕ್ಕಳಾದ ಆನಂದ, ಉಮೇಶ್, ಅವರ ಮನೆಯವರಾದ ನಾರಾಯಣ ಅವರು ಸಹ ಜೊತೆಯಲ್ಲಿ ಇದ್ದರು. ಚುನಾವಣೆ ಅಧಿಕಾರಿಗಳಾದ ಶಿವರಾಂ, ಗ್ರಾಮ ಪಂಚಾಯತಿ ಪಿಡಿಒ ಮಹೇಶ್, ಬಾಳೂರು ಆರಕ್ಷಕ ಠಾಣ ಸಿಬ್ಬಂದಿಗಳಾದ ನಂದೀಶ್ ಹಾಗೂ ರಾಘವೇಂದ್ರ ಜನ್ನಾಪುರ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು