1:53 AM Saturday31 - January 2026
ಬ್ರೇಕಿಂಗ್ ನ್ಯೂಸ್
ಮೊದಲಿನಂತೆ ಸ್ವತಂತ್ರವಾಗಿ ಸಿನಿಮಾ ಮಾಡಲಾಗುತ್ತಿಲ್ಲ: ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಇಂದ್ರಿಯ ನಿಗ್ರಹಿಸುವುದೇ ನೈಜ ಜ್ಞಾನ; ಇದುವೇ ಜೀವನ ಮಾರ್ಗ : ಶೃಂಗೇರಿ ಶಾರದಾಪೀಠದ… ಗೃಹ ಸಚಿವರ ರಾಜೀನಾಮೆ, ಪೊಲೀಸ್ ಕಮೀಷನರ್ ಅಮಾನತಿಗೆ ಬಿಜೆಪಿ ಆಗ್ರಹ ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿ.ಜೆ. ರಾಯ್‌ ಗುಂಡಿಕ್ಕಿಕೊಂಡು ಆತ್ಮಹತ್ಯೆ: ಐಟಿ ದಾಳಿಗೆ ಹೆದರಿದರೇ… ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ತಂದೆ- ಮಗಳು ಜಸ್ಟ್ ಮಿಸ್: ಕೊಡಗಿನಲ್ಲಿ ತಪ್ಪಿದ ಭಾರಿ… ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್… 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ನೆಲ್ಯಾಡಿಯ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ಸ್ವ ಉತ್ಪನ್ನ ವ್ಯಾಪಾರ ಮೇಳ: ಪ್ರಜ್ಞಾ ಮತ್ತು ತಂಡ ಪ್ರಥಮ

10/03/2022, 08:59

ಉಪ್ಪಿನಂಗಡಿ(reporterkarnataka.com):

ನೆಲ್ಯಾಡಿಯ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಿಂದ ಸ್ವ ಉತ್ಪನ್ನ ವ್ಯಾಪಾರ ಮೇಳ ನಡೆಯಿತು. 

ಈ ವ್ಯಾಪಾರ ಮೇಳದಲ್ಲಿ ವಾಣಿಜ್ಯ ವಿಭಾಗದ ಎಲ್ಲಾ ವಿದ್ಯಾಥಿ೯ಗಳು  ಅನೇಕ ಬಗೆಯ ಕರಕುಶಲ ವಸ್ತುಗಳನ್ನು ಹಾಗೂ ವಿವಿಧ ಬಗೆಯ ಆಹಾರ ಪದಾಥ೯ಗಳ ಉತ್ಪನ್ನಗಳನ್ನು, ಸ್ಥಳೀಯ ಪರಿಸರದಲ್ಲಿ ಸಿಗುವ ಹಣ್ಣುಹಂಪಲುಗಳನ್ನು, ವಿವಿಧ ಬಗೆಯ ಹಣ್ಣುಗಳ ಪಾನೀಯಗಳನ್ನು ಸಿದ್ದಪಡಿಸಿಕೊಂಡು ಮೇಳದಲ್ಲಿ ಪಾಲ್ಗೊಂಡರು.

ಕಾಲೇಜಿನ ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾಥಿ೯ಗಳಿಗೆ ಹಾಗೂ ಎಲ್ಲಾ ಉಪನ್ಯಾಸಕ ವೃಂದದವರಿಗೂ ತಮ್ಮ ಉತ್ಪನ್ನಗಳ ಬಗ್ಗೆ ವಿವರಿಸಿ ವಿಕ್ರಯ ಮಾಡಿದರು. ಅನೇಕ ಬಗೆಯ ಸ್ವ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಬಳಕೆಯಾಗುವ ರೀತಿ ಅವುಗಳ ಗುಣಮಟ್ಟದ ಬಗ್ಗೆ ಸೃಜನಶೀಲತೆಯಿಂದ ಪ್ರಸ್ತುತಪಡಿಸಿದ ರೀತಿಯು ಆಕಷ೯ಣೀಯವಾಗಿತ್ತು. 

ಅತೀ ಹೆಚ್ಚು ವಸ್ತುಗಳನ್ನು ವ್ಯಾಪಾರ ಮಾಡುವುದರ ಮೂಲಕ ಪ್ರಜ್ಞಾ ಮತ್ತು ಅವರ ತಂಡ ಪ್ರಥಮ ಸ್ಥಾನವನ್ನು , ಅನುಷಾ ಮತ್ತು ಅವರ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ವಾಣಿಜ್ಯ ಸಂಘದ ಸಂಚಾಲಕರಾದ ದಿವ್ಯ.ಕೆ  ಅವರು ಸ್ವ ಉತ್ಪನ್ನ ವ್ಯಾಪಾರ ಮೇಳದ ಕುರಿತು ಮಾಗ೯ದಶ೯ನವನ್ನು ನೀಡಿದರು. ಉಪನ್ಯಾಸಕರಾದ ವೆರೋನಿಕ ಪ್ರಭ , ಡಾ.ನೂರೋಂದಪ್ಪ, ಶೃತಿ ಯವರು ವಿದ್ಯಾಥಿ೯ಗಳಿಗೆ ಸ್ವ ಉತ್ಪನ್ನ ವ್ಯಾಪಾರ ಸಂದಭ೯ದಲ್ಲಿ ಗ್ರಾಹಕರೊಂದಿಗಿನ ಮಾತುಕತೆ,ಭಾಷೆ,ಓಡನಾಟ ಕುರಿತು ಅರಿವು ಮೂಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು