6:08 AM Wednesday2 - July 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ… ಕವಿಕಾದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ: ಇಂಧನ… Kodagu Crime | ಸುಳ್ಳು ಕೊಲೆ ಕೇಸ್ ಮೂಲಕ ಅಮಾಯಕ ಜೈಲಿಗೆ: ಇನ್ಸ್​ಪೆಕ್ಟರ್,… ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೈ ಹಾಕೊಂಡೇ ಅಧಿಕಾರಕ್ಕೆ ಬರಬೇಕು, ಸ್ವಂತ ಶಕ್ತಿಯಿಂದ… Karnataka CM | ಸರಕಾರ 5 ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ: ಮೈಸೂರಿನಲ್ಲಿ ಸಿಎಂ… ಮಾಂಸಕ್ಕಾಗಿ ಜಿಂಕೆ ಕೊಲ್ಲುತ್ತಿದ್ದ ಪಾಪಿಯ ಬಂಧನ: 10 ಜಿಂಕೆ,1 ಕಾಡು ಹಂದಿ ಮಾಂಸ,… Shivamogga | ಯುವತಿಗೆ ಲೈಂಗಿಕ ಕಿರುಕುಳ: ಮೆಗ್ಗಾನ್ ಆಸ್ಪತ್ರೆ ವೈದ್ಯ ಡಾ.ಅಶ್ವಿನ್ ಹೆಬ್ಬಾರ್… Chikkamagaluru | 3 ದಿನಗಳು ಕಳೆದರೂ ನಾಪತ್ತೆಯಾದ ಫಾರೆಸ್ಟ್ ಗಾರ್ಡ್ ಪತ್ತೆ ಇಲ್ಲ:…

ಇತ್ತೀಚಿನ ಸುದ್ದಿ

ನಗು ಇರಲಿ…ನಿಷ್ಕಲ್ಮಶ ನಗು ಇರಲಿ: ದಿನದ ಆರಂಭವನ್ನು ನಗುವಿನಿಂದ ಆರಂಭಿಸೋಣ

06/01/2022, 21:58

ನಗು….

ನಗುವು ಸಹಜದ ಧರ್ಮ. ನಗಿಸುವುದು ಪರ ಧರ್ಮ. ನಗುವ ಕೇಳುತ ನಗಿಸುವುದು ಅತಿಶಯದ ಧರ್ಮ. ನಗುವ ನಗಿಸುವ ನಗಿಸಿ ನಗುವ ಬಾಳುವ ನೀನು ಬೇಡಿಕೊಳೊ ಮಂಕುತಿಮ್ಮ.

ನಾವು ನಗುತ್ತಾ ಪರರನ್ನು ನಗಿಸುತ್ತಾ ಬಾಳುವುದೇ ನಮ್ಮ ಶ್ರೇಷ್ಠತೆ.

ಆದರೆ ದುರದೃಷ್ಟಕರ ವಿಚಾರವೆಂದರೆ ನಾವು ನಗುವ ಬದಲು ಮತ್ತೊಬ್ಬನ ಮೇಲೆ ನಗುವುದನ್ನು ಕಲಿತುಕೊಂಡಿದ್ದೇವೆ. ಎಲ್ಲರೊಳಗೊಂದಾಗಿ ನಗುನಗುತ್ತಾ ಜೀವನ ಸಾಗಿಸುವುದೇ ಸರ್ವಶ್ರೇಷ್ಠ ವ್ಯಕ್ತಿತ್ವವಾಗಿದೆ.

ನಾವೆಲ್ಲರೂ ಸಣ್ಣವರಿದ್ದಾಗ ನಮ್ಮ ನಗು ನಿಷ್ಕಪಟ ನಗು, ಅದು ಸಹಜದ ನಗು .ಆದರೆ ದೊಡ್ಡವರಾದಂತೆ ನಮ್ಮೀ ಸಹಜ ನಗು ಕ್ರಮೇಣ ಮಾಯವಾಗಲು ಕಾರಣವಾದರೂ ಏನು ?ಎಂಬ ಬಗ್ಗೆ ಚಿಂತನೆ ಮಾಡಬೇಕು. ವ್ಯಕ್ತಿಯ ಮನಸ್ಸು ಬೆಳೆದಂತೆಲ್ಲ ಮನಸ್ಸಿನ ಹಸಿವು ಹೆಚ್ಚಾಗಿ ನಗುವುದೇ ಮರೆತು ಹೋಯಿತು. ಬೇಕು ಬೇಕುಗಳ ಬೇಡಿಕೆಗಳು ಹೆಚ್ಚಾಗುತ್ತಾ ಈ ಲೋಕದ ಸಂತೆಯಲ್ಲಿ ಅವುಗಳನ್ನು ಪೂರೈಸಿಕೊಳ್ಳುವ ಹುಚ್ಚು ಸಾಹಸ ಮಾಡುತ್ತಾ ವೃಥಾ ಕಾಲಹರಣ ದೊಂದಿಗೆ ಮನಸ್ಸಿನ ಶಾಂತಿ ಸಮಾಧಾನಗಳನ್ನು ಕಳೆದುಕೊಂಡು ನಮ್ಮಿಂದ ದೂರವಾಗುತ್ತದೆ.

ನಾವು ನಕ್ಕಾಗ 14 ಸ್ನಾಯುಗಳು ಕೆಲಸ ಮಾಡುತ್ತವೆ. ಅದೇ ನಾವು ಕೋಪಗೊಂಡಾಗ 600 ಸ್ನಾಯುಗಳು ಕೆಲಸ ಮಾಡಬೇಕಾಗಿದ್ದು ಇದರಿಂದಾಗಿ ನಮ್ಮ ದೇಹದಲ್ಲಿ ಆಗುವ ತೀವ್ರತರದ ಪ್ರಕ್ರಿಯೆಗಳಿಂದ ಆಗಿ ರಕ್ತದೊತ್ತಡ ಸಕ್ಕರೆ ಕಾಯಿಲೆ ಹೀಗೆ ಹತ್ತು ಹಲವು ಕಾಯಿಲೆಗಳಿಗೆ ಆಸ್ಪದ ಕೊಟ್ಟಂತಾಗುತ್ತದೆ.

ನಗುವಿನಲ್ಲೂ ಮುಗುಳು ನಗು, ಕಿರುನಗು, ಮಂದಹಾಸ, ಅಟ್ಟಹಾಸದ ನಗು,  ಹೀಗೆ ಪಟ್ಟಿಯನ್ನು ಬೆಳೆಸಬಹುದು . ಆದರೆ ಬೇಕಾಗಿರುವುದು ನಮ್ಮ ನಿಷ್ಕಲ್ಮಶ ನಗು. ದಿನದ ಪ್ರಾರಂಭವನ್ನು ನಮ್ಮ ಮನೆಯನ್ನು ಮಂದಿಯೊಂದಿಗೆ ನಗುನಗುತ್ತಾ ಆರಂಭಿಸಿ ಆಫೀಸು ಶಾಲಾ ಕಾಲೇಜು ಸಮಾಜದ ಯಾವುದೇ ವ್ಯವಸ್ಥೆಗಳಲ್ಲಿ ನಾವು ನಮ್ಮ ನೇರ ನಡೆ-ನುಡಿಗಳಿಂದ ವ್ಯವಹರಿಸಿ ನಮ್ಮ ಕರ್ತವ್ಯ ಮಾಡುತ್ತಾ, ಎಲ್ಲರೊಳಗೊಂದಾಗಿ ನಗುನಗುತಾ ನಗುನಗುತಾ ದಿನವಿಡಿ ಉಲ್ಲಾಸದಿಂದ ಇದ್ದಾಗ ನಮ್ಮ ಮಾನಸಿಕ ಶಾಂತಿ ಸಮಾಧಾನಗಳು ವೃದ್ಧಿಯಾಗಿ ಇತರರ ನೆಮ್ಮದಿಯನ್ನು ಉಳಿಸುವ ಕಾರ್ಯ ಮಾಡಿದಂತಾಗುತ್ತದೆ. ನಾವೆಲ್ಲರೂ ನಗುವಿನ ಕಲೆಯನ್ನು ಚೆನ್ನಾಗಿ ಅರಿತುಕೊಂಡು ಎಲ್ಲರ ಜೊತೆ ಪ್ರೀತಿಯಿಂದ ನಗುನಗುತ್ತಾ ಜೀವನ ಸಾಗಿಸುತ್ತಾ ಬದುಕಿದ್ದಾಗ ಈ ಪ್ರಪಂಚದಿಂದ ನಾವು ನಿರ್ಗಮಿಸಿದಾಗ ನಮ್ಮ ಹಿಂದೆ ಉಳಿದು ನಮ್ಮ ಜೀವನದ ನಂತರವೂ ನೆನಪಿನಲ್ಲಿ ರುತೇವೆ. ಹೌದು ತಾನೆ?

✍️

ಇತ್ತೀಚಿನ ಸುದ್ದಿ

ಜಾಹೀರಾತು