6:07 AM Monday15 - December 2025
ಬ್ರೇಕಿಂಗ್ ನ್ಯೂಸ್
ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ…

ಇತ್ತೀಚಿನ ಸುದ್ದಿ

ನಗು ಇರಲಿ…ನಿಷ್ಕಲ್ಮಶ ನಗು ಇರಲಿ: ದಿನದ ಆರಂಭವನ್ನು ನಗುವಿನಿಂದ ಆರಂಭಿಸೋಣ

06/01/2022, 21:58

ನಗು….

ನಗುವು ಸಹಜದ ಧರ್ಮ. ನಗಿಸುವುದು ಪರ ಧರ್ಮ. ನಗುವ ಕೇಳುತ ನಗಿಸುವುದು ಅತಿಶಯದ ಧರ್ಮ. ನಗುವ ನಗಿಸುವ ನಗಿಸಿ ನಗುವ ಬಾಳುವ ನೀನು ಬೇಡಿಕೊಳೊ ಮಂಕುತಿಮ್ಮ.

ನಾವು ನಗುತ್ತಾ ಪರರನ್ನು ನಗಿಸುತ್ತಾ ಬಾಳುವುದೇ ನಮ್ಮ ಶ್ರೇಷ್ಠತೆ.

ಆದರೆ ದುರದೃಷ್ಟಕರ ವಿಚಾರವೆಂದರೆ ನಾವು ನಗುವ ಬದಲು ಮತ್ತೊಬ್ಬನ ಮೇಲೆ ನಗುವುದನ್ನು ಕಲಿತುಕೊಂಡಿದ್ದೇವೆ. ಎಲ್ಲರೊಳಗೊಂದಾಗಿ ನಗುನಗುತ್ತಾ ಜೀವನ ಸಾಗಿಸುವುದೇ ಸರ್ವಶ್ರೇಷ್ಠ ವ್ಯಕ್ತಿತ್ವವಾಗಿದೆ.

ನಾವೆಲ್ಲರೂ ಸಣ್ಣವರಿದ್ದಾಗ ನಮ್ಮ ನಗು ನಿಷ್ಕಪಟ ನಗು, ಅದು ಸಹಜದ ನಗು .ಆದರೆ ದೊಡ್ಡವರಾದಂತೆ ನಮ್ಮೀ ಸಹಜ ನಗು ಕ್ರಮೇಣ ಮಾಯವಾಗಲು ಕಾರಣವಾದರೂ ಏನು ?ಎಂಬ ಬಗ್ಗೆ ಚಿಂತನೆ ಮಾಡಬೇಕು. ವ್ಯಕ್ತಿಯ ಮನಸ್ಸು ಬೆಳೆದಂತೆಲ್ಲ ಮನಸ್ಸಿನ ಹಸಿವು ಹೆಚ್ಚಾಗಿ ನಗುವುದೇ ಮರೆತು ಹೋಯಿತು. ಬೇಕು ಬೇಕುಗಳ ಬೇಡಿಕೆಗಳು ಹೆಚ್ಚಾಗುತ್ತಾ ಈ ಲೋಕದ ಸಂತೆಯಲ್ಲಿ ಅವುಗಳನ್ನು ಪೂರೈಸಿಕೊಳ್ಳುವ ಹುಚ್ಚು ಸಾಹಸ ಮಾಡುತ್ತಾ ವೃಥಾ ಕಾಲಹರಣ ದೊಂದಿಗೆ ಮನಸ್ಸಿನ ಶಾಂತಿ ಸಮಾಧಾನಗಳನ್ನು ಕಳೆದುಕೊಂಡು ನಮ್ಮಿಂದ ದೂರವಾಗುತ್ತದೆ.

ನಾವು ನಕ್ಕಾಗ 14 ಸ್ನಾಯುಗಳು ಕೆಲಸ ಮಾಡುತ್ತವೆ. ಅದೇ ನಾವು ಕೋಪಗೊಂಡಾಗ 600 ಸ್ನಾಯುಗಳು ಕೆಲಸ ಮಾಡಬೇಕಾಗಿದ್ದು ಇದರಿಂದಾಗಿ ನಮ್ಮ ದೇಹದಲ್ಲಿ ಆಗುವ ತೀವ್ರತರದ ಪ್ರಕ್ರಿಯೆಗಳಿಂದ ಆಗಿ ರಕ್ತದೊತ್ತಡ ಸಕ್ಕರೆ ಕಾಯಿಲೆ ಹೀಗೆ ಹತ್ತು ಹಲವು ಕಾಯಿಲೆಗಳಿಗೆ ಆಸ್ಪದ ಕೊಟ್ಟಂತಾಗುತ್ತದೆ.

ನಗುವಿನಲ್ಲೂ ಮುಗುಳು ನಗು, ಕಿರುನಗು, ಮಂದಹಾಸ, ಅಟ್ಟಹಾಸದ ನಗು,  ಹೀಗೆ ಪಟ್ಟಿಯನ್ನು ಬೆಳೆಸಬಹುದು . ಆದರೆ ಬೇಕಾಗಿರುವುದು ನಮ್ಮ ನಿಷ್ಕಲ್ಮಶ ನಗು. ದಿನದ ಪ್ರಾರಂಭವನ್ನು ನಮ್ಮ ಮನೆಯನ್ನು ಮಂದಿಯೊಂದಿಗೆ ನಗುನಗುತ್ತಾ ಆರಂಭಿಸಿ ಆಫೀಸು ಶಾಲಾ ಕಾಲೇಜು ಸಮಾಜದ ಯಾವುದೇ ವ್ಯವಸ್ಥೆಗಳಲ್ಲಿ ನಾವು ನಮ್ಮ ನೇರ ನಡೆ-ನುಡಿಗಳಿಂದ ವ್ಯವಹರಿಸಿ ನಮ್ಮ ಕರ್ತವ್ಯ ಮಾಡುತ್ತಾ, ಎಲ್ಲರೊಳಗೊಂದಾಗಿ ನಗುನಗುತಾ ನಗುನಗುತಾ ದಿನವಿಡಿ ಉಲ್ಲಾಸದಿಂದ ಇದ್ದಾಗ ನಮ್ಮ ಮಾನಸಿಕ ಶಾಂತಿ ಸಮಾಧಾನಗಳು ವೃದ್ಧಿಯಾಗಿ ಇತರರ ನೆಮ್ಮದಿಯನ್ನು ಉಳಿಸುವ ಕಾರ್ಯ ಮಾಡಿದಂತಾಗುತ್ತದೆ. ನಾವೆಲ್ಲರೂ ನಗುವಿನ ಕಲೆಯನ್ನು ಚೆನ್ನಾಗಿ ಅರಿತುಕೊಂಡು ಎಲ್ಲರ ಜೊತೆ ಪ್ರೀತಿಯಿಂದ ನಗುನಗುತ್ತಾ ಜೀವನ ಸಾಗಿಸುತ್ತಾ ಬದುಕಿದ್ದಾಗ ಈ ಪ್ರಪಂಚದಿಂದ ನಾವು ನಿರ್ಗಮಿಸಿದಾಗ ನಮ್ಮ ಹಿಂದೆ ಉಳಿದು ನಮ್ಮ ಜೀವನದ ನಂತರವೂ ನೆನಪಿನಲ್ಲಿ ರುತೇವೆ. ಹೌದು ತಾನೆ?

✍️

ಇತ್ತೀಚಿನ ಸುದ್ದಿ

ಜಾಹೀರಾತು