8:22 PM Monday25 - August 2025
ಬ್ರೇಕಿಂಗ್ ನ್ಯೂಸ್
Bangalore | ಪರಿಶಿಷ್ಟ ಜಾತಿ/ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಿ:… Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ ಡಿಸ್ಕಸ್ ಥ್ರೋ ವೇಳೆ ಅವಘಡ: ವಿದ್ಯಾರ್ಥಿ ಗಂಭೀರ: ಮಂಗಳೂರು ಆಸ್ಪತ್ರೆಗೆ ದಾಖಲು ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ

ಇತ್ತೀಚಿನ ಸುದ್ದಿ

ಮುಧೋಳ: ಬೇಡಜಂಗಮ ಬೃಹತ್ ಸಮಾವೇಶ ಸಂವಿಧಾನಬದ್ಧ ಹಕ್ಕಿಗೆ ಆಗ್ರಹ

19/02/2022, 22:26

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ 

info.reporter@gmail.com

ಮುಧೋಳದಲ್ಲಿ ಇಂದು ನಡೆದ ಬೇಡಜಂಗಮ ಬೃಹತ್ ಸಮಾವೇಶ ಇಂದು ಮುಧೋಳದಲ್ಲಿ ನಡೆಯಿತು. ಸುಮಾರು 20 ಸಾವಿರ ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಚಳಿಗೇರಿ ಶ್ರೀಗಳು ಮಾತನಾಡಿ, ಬೇಡ ಜಂಗಮರಿಗೆ ಸಂವಿಧಾನಬದ್ಧವಾದ ಹಕ್ಕನ್ನು ನೀಡಬೇಕೆಂದು ಒತ್ತಾಯಿಸಿದರು. 

ಒಕ್ಕೂಟದ ಅಧ್ಯಕ್ಷ ಬಿಡಿ ಹಿರೇಮಠ ಅವರು ಮಾತನಾಡಿ, ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 19ನೇ ಕಾಲದಲ್ಲಿ ಬರುವ ಬೇಡಜಂಗಮ ಜಾತಿಯು ಈಗಾಗಲೇ ಸಂವಿಧಾನಾತ್ಮಕವಾಗಿದ್ದು, ಜಾತಿ ಸರ್ಟಿಫಿಕೇಟ್ ಕೇಳಿದರೆ ವೀರಶೈವ-ಲಿಂಗಾಯತ ಎಂದು ನೀಡುತ್ತಿರುವುದು ಅವೈಜ್ಞಾನಿಕ. ವೀರಶೈವ ಲಿಂಗಾಯತ ವು ಒಂದು ಪಂಥವಾಗಿದ್ದು ಅದು ಜಾತಿ ಆಗಿರುವುದಿಲ್ಲ ಎಂದು ಹೇಳಿದ ಅವರು ಮುಂದಿನ ಹೋರಾಟ ಬೆಂಗಳೂರಿನಲ್ಲಿ ಉಗ್ರವಾಗಿ ಮಾಡಲಾಗುವುದು ಎಂದು ಹೇಳಿದರು.
ರಾಜ್ಯಾಧ್ಯಕ್ಷ ದ್ವಾರಕೀಶ್ ಮಾತನಾಡಿ, ಸಮಾಜದಲ್ಲಿ ಜಂಗಮ ಸಮಾಜಕ್ಕೆ ದೊಡ್ಡ ಗೌರವ ಇದೆ.
ದಲಿತ ಸಂಘಟನೆಯ ರಾಜಾಧ್ಯಕ್ಷ ವೆಂಕಟೇಶ್ ಅವರ  ಬೆಂಬಲವಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಆದೇಶ ಮೇರಿಗೆ ಇನ್ನು ಎರಡು ತಿಂಗಳಲ್ಲಿ ಎಲ್ಲ ಜಂಗಮರಿಗೆ ಬೇಡ ಜಂಗಮ ಪ್ರಮಾಣಪತ್ರ ಸಿಗಲಿದೆ ಎಂದು ಹೇಳಿದರು.

ಕೆಲವು ಶಾಸಕರು ಜಂಗಮರಿಗೆ ಸಿಗಬೇಕು ಪ್ರಮಾಣ ಪತ್ರಕೆ ಅಡ್ಡಿ ಮಾಡಿದರು ಎಂದರು.

ಬೃಹತ್ ಪ್ರತಿಭಟನಾ ಮೆರವಣಿಗೆ ಮುಧೋಳ ಪಟ್ಟದಿಂದ ರನ್ನ ಕ್ರೀಡಾಂಗಣಕ್ಕೆ ಬಂದು ತಲುಪಿತು. 

ರಾಜ್ಯ ದಲಿತ ಸಂಘರ್ಷ ಸಮಿತಿಯ ವೆಂಕಟೇಶ್ ಅವರು ಮಾತನಾಡಿ, ಬೇಡ ಜಂಗಮರ ಹೋರಾಟ ನ್ಯಾಯಯುತವಾಗಿದ್ದು ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಹೇಳಿದರು.

ಸಮಾವೇಶದಲ್ಲಿ ರಾಯಚೂರು ಜಿಲ್ಲಾ ಬೇಡಜಂಗಮ ಸಮಾಜದ ಮುಖಂಡರಾದ ಆದಿ ಬಸವರಾಜ್ ಸಿಂಧನೂರು, ಸಂಪಾದಕರಾದ
ವಿರುಪಾಕ್ಷಯ್ಯ ಸಾಲಿಮಠ, ರಾಯಚೂರು ಬಸವರಾಜ್ ಹಿರೇಮಠ, ಮುಸ್ಲಿಂ ಕಾರಲಕುಂಟೆ ಮಲ್ಲಿಕಾರ್ಜುನ್ ಲಿಂಗಸ್ಗೂರು ರಮೇಶ್ ಸಿಂಗ ಪತ್ರಕರ್ತ  ಬಸವರಾಜ್ ಸಿದ್ದಲಿಂಗಯ್ಯ ಸಿದ್ದಲಿಂಗಯ್ಯ ಸ್ವಾಮಿ ಮಠ ಗಣ ಮಠದಯ್ಯ ಸ್ವಾಮಿ ಶಿವಕುಮಾರ್ ಮುಂತಾದವರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು