11:30 AM Thursday26 - March 2026
ಬ್ರೇಕಿಂಗ್ ನ್ಯೂಸ್
ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕಾಂಗ್ರೆಸ್ ಮೋಸ ಮಾಡಿದೆ; ನಾಮಪತ್ರ ಹಿಂತೆಗೆಯುವ ಮಾತೇ ಇಲ್ಲ: ತೊಡೆ ತಟ್ಟಿದ ಪೈಲ್ವಾನ್‌ ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ… ಲ್ಯಾಂಬೊರ್ಗಿನಿ ಕಾರು ಗಿರಿಗಿಟ್ಲೆ ಹೊಡೆಸಿದ ಪ್ರಕರಣ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ,… ಮತ್ತೆ ಬಾಬಾ ಬುಡನ್ ಗಿರಿ ದತ್ತಪೀಠ ವಿವಾದ: ಪೂಜಾ-ವಿಧಿ ವಿಧಾನದ ವಿಚಾರದಲ್ಲಿ ಮುಸ್ಲಿಮರ… ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್‌ ರೋಡ್‌… ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮರುತನಿಖೆ ಕೋರಿ ಸಲ್ಲಿಸಿದ ಮೇಲ್ಮನವಿ ಸುಪ್ರೀಂ ಕೋರ್ಟ್… ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ; ಒಮ್ಮತದಿಂದ ಸಮರ್ಥ್‌ಗೆ ಟಿಕೆಟ್‌: ಡಿಸಿಎಂ ಡಿ.ಕೆ. ಶಿವಕುಮಾರ್

ಇತ್ತೀಚಿನ ಸುದ್ದಿ

ನಂಜನಗೂಡು: ಶಿವಶರಣ ಒಕ್ಕಲಿಗರ ಮುದ್ದಣನವರ ಪ್ರಪ್ರಥಮ ಜಯಂತಿ ಆಚರಣೆ

09/01/2025, 10:41

ಮೋಹನ್ ನಂಜನಗೂಡು

info.reporterkarnataka@gmail.com

ಇಡೀ ದೇಶದಲ್ಲೇ ಇದೇ ಪ್ರಪ್ರಥಮವಾಗಿ ನಂಜನಗೂಡಿನಲ್ಲಿ ಶಿವಶರಣ ಒಕ್ಕಲಿಗರ ಮುದ್ದಣ್ಣ ಅವರ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.


ಶರಣರ ಸಂಘಗಳ ಒಕ್ಕೂಟ ಹಾಗೂ ಒಕ್ಕಲಿಗ ಸಮಾಜದ ಮುಖಂಡರ ಸಹಯೋಗದಲ್ಲಿ ಒಕ್ಕೂಟದ ಮಾರ್ಗದರ್ಶಕರಾದ ಬಸವ ಯೋಗೇಶ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ವಚನ ಗೀತೆ ಹಾಡುವ ಮೂಲಕ ಶಿವಶರಣ ಒಕ್ಕಲಿಗರ ಮುದ್ದಣ್ಣ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿ ತಮ್ಮ ಭಕ್ತಿ ನಮನ ಸಲ್ಲಿಸಿದರು.
ನಂತರ ಶರಣರ ಸಂಘಗಳ ಒಕ್ಕೂಟದ ಮಾರ್ಗದರ್ಶಕರಾದ ಬಸವ ಯೋಗೇಶ್ ಮಾತನಾಡಿ, ವಿಶ್ವದಲ್ಲೇ ಪ್ರಪ್ರಥಮವಾಗಿ
12ನೇ ಶತಮಾನದ ಶಿವಶರಣರಾಗಿದ್ದ ಒಕ್ಕಲಿಗ ಮುದ್ದಣ್ಣ ಅವರ ಜಯಂತಿಯನ್ನು ನಂಜನಗೂಡಿನಲ್ಲಿ ಆಚರಿಸಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿ ಶಿವಶರಣ ಮುದ್ದಣ್ಣ ಅವರು ವಿಜಯಪುರ ಜಿಲ್ಲೆಯ ಜೋಳದ ಹಾಳ ಗ್ರಾಮದಲ್ಲಿ ಜನಿಸಿದವರು. ಇವರು ಕೃಷಿ ಕಾಯಕದಿಂದಲೇ ದಾಸೋಹ ಮಾಡುತ್ತಾ ಬಂದಿದ್ದ ಅನುಭವಿ ಶಿವಶರಣರಾಗಿದ್ದರು.
ರೈತರಾಗಿ ಬೇಸಾಯ ಮಾಡಿಕೊಂಡು ಬರುವ ಒಕ್ಕಲುತನ ಒಂದು ಶ್ರೇಷ್ಠ ಉದ್ಯೋಗ ಎಂದು ಜನತೆಗೆ ಸಾರಿದ ಮಹಾ ಶಿವಶರಣರಾಗಿದ್ದರು.
ಅಲ್ಲದೆ ಇವರ ಒಟ್ಟು 12 ವಚನಗಳು ದೊರಕಿದ್ದು ಎಲ್ಲವೂ ಉತ್ತಮ ವಚನಗಳಾಗಿವೆ ಎಂದು ಅವರ ವಚನಗಳನ್ನು ಹೇಳುವ ಮೂಲಕ ಅವರ ಬಗ್ಗೆ ಮೆಚ್ಚುಗೆ ಮಾತುಗಳ ನ್ನಾಡಿ ಮುಂದೆ ಅದ್ದೂರಿಯಾಗಿ ಈ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವುದರ ಮೂಲಕ ಸರ್ಕಾರದಿಂದಲೂ ಈ ಜಯಂತಿ ಆಚರಣೆ ಮಾಡುವಂತಾಗಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನವೀನ್ ಹಾಡ್ಯ, ಅಶೋಕ್, ನಂಜುಂಡಸ್ವಾಮಿ, ಗೋಪಾಲ್, ಕೆಂಪೇಗೌಡ ,
ಸತೀಶ್, ಉಮೇಶ್, ತಿರುಮಲೇಶ್ ಗೌಡ , ಕುಮಾರಸ್ವಾಮಿ, ಕಿಶೋರ್ ,ವೆಂಕಟೇಶ್, ಗಿರಿರಾಜು ಗುರುಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು