1:27 AM Sunday2 - November 2025
ಬ್ರೇಕಿಂಗ್ ನ್ಯೂಸ್
ನವಕಲಬುರಗಿ ನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ದ, ಲೀಪ್ ಯೋಜನೆಯ ಅಡಿಯಲ್ಲಿ ಅಭಿವೃದ್ದಿಗೆ ಒತ್ತು:… ಡಿಜಿಟಲ್ ಅರೆಸ್ಟ್ ಮೂಲಕ ಹಣ ವರ್ಗಾವಣೆಯಾಗದಂತೆ ತಡೆದ ಪೊಲೀಸರು: ಮಂಗಳೂರು ಪೊಲೀಸರ ಕಾರ್ಯಕ್ಕೆ… Kodagu | ಪೊನ್ನಂಪೇಟೆಯಲ್ಲಿ ಮಿತಿ ಮೀರಿದ ಬೀದಿ ನಾಯಿ ಹಾವಳಿ: ಶ್ವಾನ ದಾಳಿಗೆ… ರಾಜ್ಯ ಸರ್ಕಾರ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡದಿದ್ದರೆ ರೈತರ ಚಳವಳಿ ಎದುರಿಸಬೇಕಾಗುತ್ತದೆ:… Bangalore | ರಾಜ್ಯದಲ್ಲಿ‌ ಕುಡಿಯುವ ನೀರು, ಒಳಚರಂಡಿ ಯೋಜನೆ: ಕೇಂದ್ರಕ್ಕೆ 6,500 ಕೋಟಿ… ಸೋಮವಾರಪೇಟೆ | ಸುಮಾರು 2.4 ಲಕ್ಷ ರೂ. ಮೌಲ್ಯದ ಕಾಳು ಮೆಣಸು ಕಳ್ಳತನ:… ಸಂವಿಧಾನ ರಕ್ಷಣೆ | ರಾಹುಲ್ ಗಾಂಧಿ, ಸಿದ್ದರಾಮಯ್ಯ ಹೇಳುವುದು ಆಚಾರ, ತಿನ್ನುವುದು ಬದನೆಕಾಯಿ:… ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡದ ಕೇಂದ್ರ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು:… Kodagu | ಮಡಿಕೇರಿ: 15 ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಕೊನೆಗೂ ಕಾಡಿನಲ್ಲಿ ಪತ್ತೆ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ ಮಾಡುವುದಿಲ್ಲ: ಮಾಜಿ ಸಚಿವ ರೇಣುಕಾಚಾರ್ಯ ಭವಿಷ್ಯ

ಇತ್ತೀಚಿನ ಸುದ್ದಿ

ಮೂಡಿಗೆರೆ ತಾಪಂ ಇಓ ಕರೆದುಕೊಂಡು ಬರಲು ಕೊಟ್ಟಿಗೆಹಾರಕ್ಕೆ ಸರಕಾರಿ ಜೀಪ್ ಸವಾರಿ: ಸಾರ್ವಜನಿಕರ ಆಕ್ರೋಶ

18/09/2024, 14:21

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com

ಕೊಟ್ಟಿಗೆಹಾರ ಸರಕಾರಿ ಬಸ್ ನಿಲ್ದಾಣದಲ್ಲಿ ಬಸ್ ಕಾಯುತ್ತೆ ತಾಪಂ ಇಓ ಜೀಪ್…!
ತಾಪಂ ಇಓ ಬಂದ ಕೂಡಲೇ ಮೂಡಿಗೆರೆವರೆಗೆ ಪಿಕ್ ಅಪ್ ಮಾಡುತ್ತದೆ. ಮೂಡಿಗೆರೆ ತಾಪಂ ಇಓ ದಯಾವತಿ ವಿರುದ್ಧ ಸ್ಥಳೀಯರ ಆರೋಪ ಮಾಡಿದ್ದಾರೆ.
ವಿಶೇಷವೆಂದರೆ
ಅದೇ ಸರ್ಕಾರಿ ಬಸ್ ಮೂಡಿಗೆರೆಗೂ ಬರುತ್ತೆ… ಆದ್ರೆ, ಇಓ ಮೇಡಂ ಅದೇ ಬಸ್ಸಲ್ಲಿ ಬರಲ್ಲ…!

 


ಉಜಿರೆಯಿಂದ ಬಂದು ಕೊಟ್ಟಿಗೆಹಾರದಲ್ಲಿ ಇಳಿದ ಬಳಿಕ ದಯಾವತಿ ಅವರನ್ನು ಜೀಪ್ ಹೋಗಿ ಕರ್ಕಂಡ್ ಬರ್ಬೇಕು…!
ಸರ್ಕಾರಿ ಅಧಿಕಾರಿಯ ದರ್ಬಾರ್ ಗೆ ಸಾರ್ವಜನಿಕರ ಕಿಡಿ ಕಾರಿದ್ದಾರೆ.
ನಿತ್ಯ ಮೂಡಿಗೆರೆಯಿಂದ 60 ಕಿ.ಮೀ. ದೂರದ ಉಜಿರೆಯಿಂದ ಅಪ್ ಅಂಡ್ ಡೌನ್…! ಇಓ ಮೇಡಂ ನಿತ್ಯ ಕೊಟ್ಟಿಗೆಹಾರ ಬರ್ತಾರೆ, ಮೂಡಿಗೆರೆಯಿಂದ ಹೋಗಿ ಪಿಕ್ ಅಪ್ ಮಾಡ್ಬೇಕು…!


ಸರ್ಕಾರಿ ಅಧಿಕಾರಿಗಳು ಸ್ವಸ್ಥಾನದಲ್ಲೇ ಇರಬೇಕೆಂಬ ಸರ್ಕಾರದ ಕಾನೂನಿದೆ.
ಆದ್ರೆ, ಇಓ ಮೇಡಂ ಪಾಲಿಗೆ ಸರ್ಕಾರದ ಕಾನೂನು ಕಡತಕ್ಕಷ್ಟೆ ಸೀಮಿತ…!

ವಾರದಲ್ಲಿ ಒಂದು-ಎರಡು ದಿನ ಸರ್ಕಾರಿ ಜೀಪಲ್ಲಿ ಉಜಿರೆಗೆ ಡ್ರಾಪ್…!
ಅಧಿಕಾರಿಯ ಅಂದಾದರ್ಬಾರ್ ಗೆ ಸರ್ಕಾರದ ಗಾಡಿ-ದುಡ್ಡು ಎರಡೂ ವ್ಯಯ…!

ಇತ್ತೀಚಿನ ಸುದ್ದಿ

ಜಾಹೀರಾತು