7:04 PM Wednesday25 - March 2026
ಬ್ರೇಕಿಂಗ್ ನ್ಯೂಸ್
ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕಾಂಗ್ರೆಸ್ ಮೋಸ ಮಾಡಿದೆ; ನಾಮಪತ್ರ ಹಿಂತೆಗೆಯುವ ಮಾತೇ ಇಲ್ಲ: ತೊಡೆ ತಟ್ಟಿದ ಪೈಲ್ವಾನ್‌ ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ… ಲ್ಯಾಂಬೊರ್ಗಿನಿ ಕಾರು ಗಿರಿಗಿಟ್ಲೆ ಹೊಡೆಸಿದ ಪ್ರಕರಣ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ,… ಮತ್ತೆ ಬಾಬಾ ಬುಡನ್ ಗಿರಿ ದತ್ತಪೀಠ ವಿವಾದ: ಪೂಜಾ-ವಿಧಿ ವಿಧಾನದ ವಿಚಾರದಲ್ಲಿ ಮುಸ್ಲಿಮರ… ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್‌ ರೋಡ್‌… ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮರುತನಿಖೆ ಕೋರಿ ಸಲ್ಲಿಸಿದ ಮೇಲ್ಮನವಿ ಸುಪ್ರೀಂ ಕೋರ್ಟ್… ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ; ಒಮ್ಮತದಿಂದ ಸಮರ್ಥ್‌ಗೆ ಟಿಕೆಟ್‌: ಡಿಸಿಎಂ ಡಿ.ಕೆ. ಶಿವಕುಮಾರ್ ಬಾಗಲಕೋಟೆ: ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ, ಬಿಜೆಪಿಯಿಂದ ವೀರಣ್ಣ ಚರಂತಿಮಠ ನಾಮಪತ್ರ ಸಲ್ಲಿಕೆ

ಇತ್ತೀಚಿನ ಸುದ್ದಿ

ಶಾಸಕರು, ಸಂಸದರು ವಿಮಾನ ಏರುತ್ತಾರೆ!; ಪಾಪ, ಅವರಿಗೇನು ಗೊತ್ತು ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ದುಃಸ್ಥಿತಿ?!!

23/06/2024, 20:55

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.ಕಂ

ರಸ್ತೆಯಲ್ಲಿ ನೀರು ಇದೆಯೋ ಅಥವಾ ನೀರಿನಲ್ಲೇ ರಸ್ತೆ ಇದೆಯೋ ಎಂಬ ಗಲಿಬಿಲಿ ಈ ರಸ್ತೆಯಲ್ಲಿ ಸಂಚರಿಸುವ ಯಾವುದೇ ಪ್ರಯಾಣಿಕನಿಗೆ ಒಂದು ಕ್ಷಣ ಆದರೆ ಅತಿಶಯೋಕ್ತಿಯಾಗಲಾರದು. ಯಾಕೆಂದರೆ ಅಷ್ಟು ಕೆಟ್ಟು ಹೋಗಿದೆ ರಸ್ತೆ. ಇದು ಮಂಗಳೂರನ್ನು ರಾಜಧಾನಿ ಬೆಂಗಳೂರಿಗೆ ಜೋಡಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಲ್ಲಡ್ಕ ಎಂಬ ಪೇಟೆಯ ದುಃಸ್ಥಿತಿ. ಮಂಗಳೂರಿನಿಂದ ಹೋಗುವಾಗ ಬಿ.ಸಿ.ರೋಡ್ ನಿಂದ ಕೇವಲ 3- 4 ಕಿಮೀ. ದೂರದಲ್ಲಿ ಕಲ್ಲಡ್ಕ ಎಂಬ ಬೆಳೆಯುತ್ತಿರುವ ಪೇಟೆ ಸಿಗುತ್ತದೆ. ವಿಟ್ಲ ಮತ್ತು ಪುತ್ತೂರು ರಸ್ತೆ ಕವಲೊಡೆಯುವ ಜಾಗವೇ ಕಲ್ಲಡ್ಕ. ಇಲ್ಲಿಂದ ರಾಷ್ಟ್ರೀಯ ಹೆದ್ದಾರಿಯಲ್ಲೇ ಸಾಗಿದರೆ ಉಪ್ಪಿನಂಗಡಿಯಾಗಿ ಬೆಂಗಳೂರು ಸೇರಬಹುದು. ಉಪ್ಪಿನಂಗಡಿಗೆ ಹೋಗುವ ದಾರಿಯಲ್ಲಿ ಮಾಣಿ ಎಂಬ ಮತ್ತೊಂದು ಜಂಕ್ಷನ್ ಸಿಗುತ್ತದೆ. ಇಲ್ಲಿ ಬಲ ಬದಿಯ ರಸ್ತೆಯಲ್ಲಿ ಚಲಿಸಿದರೆ ಪುತ್ತೂರು ಸೇರಬಹುದು. ಹಾಗೆ ಕಲ್ಲಡ್ಕ ಜಂಕ್ಷನ್ ನಲ್ಲಿ ಬಲಬದಿಯ ರಸ್ತೆಯಿಂದ ಸಾಗಿದರೆ ವಿಟ್ಲ ತಲುಪಬಹುದು. ಅಲ್ಲಿಂದ ಕೇರಳ ರಾಜ್ಯ ಪ್ರವೇಶಿಸಲೂ ಆಗುತ್ತದೆ. ಈ ಎಲ್ಲ ಕಾರಣಗಳಿಂದ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಗಲು- ರಾತ್ರಿ ಎನ್ನದೆ ನಿರಂತರವಾಗಿ ವಾಹನಗಳು ಸಾಗುತ್ತಲೇ ಇರುತ್ತದೆ. ಅಂತಹ ಜಂಕ್ಷನ್ ಪ್ರದೇಶದಲ್ಲಿ ರಸ್ತೆ ದುಃಸ್ಥಿತಿ ಈ ಪಾಟಿ ಕೆಟ್ಟು ಹೋಗಿದೆ.


ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿ.ಸಿ.ರೋಡ್ ನಿಂದ ಕೆಂಪು ಹೊಳೆ ತನಕ ಚತುಷ್ಪಥ ಕಾಮಗಾರಿ ನಡೆಯುತ್ತಿರುವುದರಿಂದ ಇಲ್ಲಿ ಸುಮಾರು 2 ಕಿಮೀ. ಉದ್ದಕ್ಕೆ ಫ್ಲೈ ಓವರ್ ಕಾಮಗಾರಿ ಕಳೆದ ಒಂದು ವರ್ಷದಿಂದ ನಡೆಯುತ್ತಿದೆ. ಆದರೆ ಈ ಕಾಮಗಾರಿ ಆರಂಭಿಸುವ ಮುನ್ನ ಸಾಕಷ್ಟು ಮುಂಜಾಗ್ರತೆ ವಹಿಸಿ ಸರಿಯಾದ ಸರ್ವಿಸ್ ರಸ್ತೆ ನಿರ್ಮಿಸದೇ ಇರುವುದೇ ಈ ಎಲ್ಲ ಅವಾಂತರಕ್ಕೆ ಕಾರಣವಾಗಿದೆ. ಮಳೆ ಬಂದಾಗ ಇಲ್ಲಿ ನಿರ್ಮಾಣ ಹಂತದಲ್ಲಿರುವ ಪ್ರತಿಯೊಂದು ಫ್ಲೈ ಓವರ್ ನಿಂದ ಜಲಪಾತದಿಂದ ನೀರು ಇಳಿದಾಗೆ ಮಳೆ ನೀರು ಕೆಳಗೆ ಧುಮುಕುತ್ತದೆ. ರಸ್ತೆಯಲ್ಲಿ ಬಸ್ಸಿನ ಟಯರ್ ಮುಳುಗುವಷ್ಟು ನೀರು ತುಂಬಿರುತ್ತದೆ. ಇಲ್ಲಿನ ನಿವಾಸಿಗಳು, ಪರ ಊರಿನಿಂದ ಬಂದ ಪಾದಚಾರಿಗಳು ಇದರ ಮೇಲೆಯೇ ನಡೆದುಕೊಂಡು ಹೋಗಬೇಕು. ರಸ್ತೆ ದಾಟುವ ಕಷ್ಟ ಹೇಳಿ ತೀರದು. ನೀವು ಪ್ರಶ್ನಿಸಬಹುದು, ಇದೆಲ್ಲ ಇಲ್ಲಿನ ಸಂಸದರಿಗೆ, ಶಾಸಕರಿಗೆ ಗೊತ್ತಿಲ್ವಾ? ಎಂದು. ನಮ್ಮ ಸಂಸದರಿಗೆ, ಶಾಸಕರಿಗೆಲ್ಲ ಇಲ್ಲಿನ ಕಷ್ಟ ಗೊತ್ತಿಲ್ಲ. ಯಾಕೆಂದರೆ ಹಿಂದಿನ ಶಾಸಕರು ಬೆಂಗಳೂರಿಗೆ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ನಂತರ ಶಾಸಕರೆಲ್ಲ ಕಾರಿನಲ್ಲಿ ಪ್ರಯಾಣಿಸಲು ಆರಂಭಿಸಿದರು. ಆಗೆಲ್ಲ ಅವರಿಗೆ ರಸ್ತೆ ಕೆಟ್ಟು ಹೋಗಿದ್ದರೆ ಅರಿವಿಗೆ ಬರುತ್ತಿತ್ತು. ಆದರೆ ಈಗಿನ ನಮ್ಮ ಎಲ್ಲ ಶಾಸಕರು ವಿಮಾನದಲ್ಲೇ ಬೆಂಗಳೂರಿಗೆ ಹಾರುವುದು!. ಅವರು ರಸ್ತೆಯಲ್ಲಿ ಸಂಚರಿಸುವುದಿಲ್ಲ. ಹಾಗಾಗಿ ಮತ್ತೆ ಹೇಗೆ ಗೊತ್ತಾಗುತ್ತೆ ಅವರಿಗೆ ರಸ್ತೆ ದುಃಸ್ಥಿತಿ?

ಇತ್ತೀಚಿನ ಸುದ್ದಿ

ಜಾಹೀರಾತು