3:25 AM Saturday4 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

ಎಂ.ಕಾಂ ಪರೀಕ್ಷೆ: ಕುಡ್ಲದ ಪೊಣ್ಣು, ನಟಿ- ನಿರೂಪಕಿ ಶೀತಲ್ ಮಂಗಳೂರು ಪ್ರಥಮ Rank

18/04/2022, 21:19

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ನಗರದ ಬೆಸೆಂಟ್ ಸಂಧ್ಯಾ ಕಾಲೇಜಿನ ವಿದ್ಯಾರ್ಥಿನಿ,ನಟಿ, ನಿರೂಪಕಿ ಶೀತಲ್ ಅವರು ಎಂ.ಕಾಂ ಪರೀಕ್ಷೆಯಲ್ಲಿ ಪ್ರಥಮ rank ಪಡೆದಿದ್ದಾರೆ.


ಮಂಗಳೂರಿನ ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣದಿಂದ ಪದವಿ ವರೆಗೆ ವಿದ್ಯಾಭ್ಯಾಸವನ್ನು ಪೂರೈಸಿದ ಅವರು ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಎಂ.ಕಾಂ ಶಿಕ್ಷಣ ಪಡೆದರು.


ಅತೀ ಸಣ್ಣ ವಯಸ್ಸಿನಲ್ಲಿ ತುಳು ರಂಗಭೂಮಿ ಪ್ರವೇಶಿಸಿದರು. ನಾಯಕಿ ನಟಿಯಾಗಿ ನಟನೆಯಲ್ಲೂ ಎತ್ತಿದ ಕೈ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಖಾಸಗಿ ಟಿವಿ ವಾಹಿನಿಯಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದರು.

ಈಕೆ ಕೆ.ಪ್ರಕಾಶ್ ಹಾಗೂ ಗೀತಾ ದಂಪತಿಯ ಏಕೈಕ ಪುತ್ರಿ. ಪ್ರಸ್ತುತ ಅವರು ಎ. ಜೆ. ಸಂಸ್ಥೆಯಲ್ಲಿ  ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ನಟನೆಯಿಂದ ದೂರ ಸರಿದಿದ್ದಾರೆ.


ಬೇರೆ ಭಾಷೆಗಳಲ್ಲಿ ನಟನೆ ಮಾಡುವ ಆಸಕ್ತಿ ಸದ್ಯಕ್ಕಿಲ್ಲ. ತುಳು ಭಾಷೆಯ ಮೇಲೆ ಅಭಿಮಾನ ಮತ್ತು ಪ್ರೀತಿ ಇದೆ. ಹಾಗಾಗಿ ಅವಕಾಶ ಸಿಕ್ಕಾಗ ಬಳಸಿಕೊಂಡೆ. ನಟಿಯಾಗಬೇಕೆಂಬ ಕನಸು ಯಾವತ್ತು ಕಂಡಿಲ್ಲ. ಕಾಲೇಜು ಜೀವನದಲ್ಲಿ ನಟನೆಯಿಂದ ಬರುತ್ತಿದ್ದ ಹಣ ನನ್ನ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತಿತ್ತು. ಮೊದಲು ಓದಿಗೆ ಪ್ರಾಮುಖ್ಯತೆ, ಆಮೇಲೆ ಇತರ ವಿಷಯಕ್ಕೆ ಎಂದು ರಿಪೋರ್ಟರ್ ಕರ್ನಾಟಕ ಜತೆ ಮಾತನಾಡಿದ ಅವರು ನುಡಿದರು.

ನನ್ನ ತಂದೆ-ತಾಯಿ ಯಾವತ್ತು ಒತ್ತಡ ಮಾಡಿಲ್ಲ ಇಷ್ಟೇ ಅಂಕ ಗಳಿಸಬೇಕು ಅಥವಾ ಇದೇ ಫೀಲ್ಡಿಗೆ ಹೋಗಬೇಕು ಎಂದು ಒತ್ತಡ ಹೇರಿಲ್ಲ.


ಯಾವುದೇ ರಂಗಕ್ಕೆ ಹೋಗು ನಮ್ಮ ಸಹಾಯ ಇದೆ ಎಂದು ಇವತ್ತಿಗೂ ಬೆನ್ನು ತಟ್ಟುತ್ತಿರುವ ತಂದೆ-ತಾಯಿಯೇ ನನಗೆ ಸ್ಪೂರ್ತಿ ಎಂದು ಶೀತಲ್ ಹೇಳುತ್ತಾರೆ. ನನಗೆ ಸಹಕಾರ ನೀಡಿದ ಎಲ್ಲಾ ಶಿಕ್ಷಕರಿಗೂ ಹಾಗೂ ನನಗೆ ಹಾರೈಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ.



ದಬಕ್ ದಬ ಐಸಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಮೆಹಂದಿ ಆರ್ಟಿಸ್ಟ್, ಡ್ಯಾನ್ಸರ್ ಕೂಡ ಹೌದು.

ಇತ್ತೀಚಿನ ಸುದ್ದಿ

ಜಾಹೀರಾತು