10:45 PM Thursday19 - September 2024
ಬ್ರೇಕಿಂಗ್ ನ್ಯೂಸ್
ಮೇಯರ್ ಆಯ್ಕೆ ಸಭೆಯಲ್ಲಿ ಬಿಜೆಪಿ- ಕಾಂಗ್ರೆಸ್ ವಾಕ್ಸಮರ: ಕೊನೆಗೆ ನಿರಾಳ, ಕೂಲ್ ಕೂಲ್!! ತೀರ್ಥಹಳ್ಳಿ: ಸರ್ವಧರ್ಮ ಸಮನ್ವಯತೆಯಲ್ಲಿ ಸಂಭ್ರಮ- ಸಡಗರದ ಈದ್ ಮಿಲಾದ್ ಆಚರಣೆ ನಂಜನಗೂಡು: ಮುನಿರತ್ನ ವಿರುದ್ಧ ಜನ ಸಂಗ್ರಾಮ ಪರಿಷತ್ ಪ್ರತಿಭಟನೆ: ಶಾಸಕ ಸ್ಥಾನದಿಂದ ವಜಾಗೊಳಿಸಲು… ಜೈಪುರದಲ್ಲಿ ಇಂಡಿಯನ್ ಯೂತ್ ಪಾಲಿ೯ಮೆಂಟ್ 27ನೇ ಅಧಿವೇಶನ: ಸ್ಪೀಕರ್ ಖಾದರ್ ಉದ್ಘಾಟನೆ ನಮ್ಮ‌ ಶಾಲೆ‌ ನಮ್ಮ‌ ಜವಾಬ್ದಾರಿ ಕಾರ್ಯಕ್ರಮ ಸರಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕೆ… ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಭಾರೀ ಫೈಟ್: ಮಹಿಳಾ ಅಭ್ಯರ್ಥಿಯಿಂದ ಪ್ರಬಲ ಪೈಪೋಟಿ ಮಹಿಳಾ ಆಯೋಗದ ಅಧ್ಯಕ್ಷೆ ಬಂದ್ರೂ ಅಧಿಕಾರಿಗಳು ನಾಪತ್ತೆ: ರಾಯಲ್ಪಾಡು ಪ್ರಾಥಮಿಕ ಆರೋಗ್ಯ ಕೇಂದ್ರ,… ಅಥಣಿ: ಶೌಚಕ್ಕೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ದಾರುಣ… ನಂಜನಗೂಡು: ಭಗೀರಥ ಹಾಗೂ ಕನಕ ಸಮುದಾಯ ಭವನಕ್ಕೆ ಶಾಸಕರಿಂದ ಭೂಮಿ ಪೂಜೆ ಮಂಗಳೂರು: ಸಾಕು ನಾಯಿಯ ತ್ಯಾಜ್ಯ ಸಂಗ್ರಹಿಸುವ ವಾಹನಕ್ಕೆ ನೀಡಿದ ಪಾಪಿಗಳು; ವೀಡಿಯೊ ವೈರಲ್…

ಇತ್ತೀಚಿನ ಸುದ್ದಿ

ಮೇಯರ್ ಆಯ್ಕೆ ಸಭೆಯಲ್ಲಿ ಬಿಜೆಪಿ- ಕಾಂಗ್ರೆಸ್ ವಾಕ್ಸಮರ: ಕೊನೆಗೆ ನಿರಾಳ, ಕೂಲ್ ಕೂಲ್!!

19/09/2024, 22:03

ಮಂಗಳೂರು(reporterkarnataka.com): ನೂತನ ಮೇಯರ್ – ಉಪ ಮೇಯರ್ ಆಯ್ಕೆ ಬಳಿಕ ಅಭಿನಂದನಾ ಸಭೆ ನಡೆಯುತ್ತಿದ್ದಾಗಲೇ ಆಡಳಿತರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರಕ್ಕೆ ಇಡೀ ಸಭೆ ಸಾಕ್ಷಿಯಾಯಿತು.


ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರರಾದ ಡಿ. ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ ಅವರು ನೂತನ ಮೇಯರ್-ಉಪ ಮೇಯರ್‌ಗಳಿಗೆ ಅಭಿನಂದನೆ ಸಲ್ಲಿಸಿದ ಬಳಿಕ ನಿರ್ಗಮನ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಭಿನಂದನಾ ಭಾಷಣ ಮಾಡಿದರು.
ಈ ವೇಳೆ ಅವರು ಭಾಷಣ ಮಾಡುತ್ತಿದ್ದಾಗಲೇ ಪ್ರತಿಪಕ್ಷ ಸದಸ್ಯರು ನೂತನ ಮೇಯರ್-ಉಪ ಮೇಯರ್‌ಗಳಿಗೆ ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಲು ತೆರಳಿದರು. ಇದರಿಂದ ಸಿಡಿಮಿಡಿಗೊಂಡ ಸುಧೀರ್ ಶೆಟ್ಟಿ ಕಣ್ಣೂರು, ‘ಅರ್ಧದಲ್ಲೇ ಯಾಕೆ ಅಭಿನಂದನೆ ಸಲ್ಲಿಸುತ್ತಿದ್ದೀರಿ‌. ಎಸ್‌.ಸಿ. ಸಮುದಾಯದ ಸದಸ್ಯರೋರ್ವರು ಮೇಯರ್ ಆಗಿರುವಾಗ ನೀವು ಹೀಗೆ ಮಾಡುವುದು ಸರಿಯಲ್ಲ’ ಎಂದು ಆಕ್ಷೇಪಣೆ ಎತ್ತಿದ್ದಾರೆ.
ಆಗ ಪ್ರತಿಪಕ್ಷ ಸದಸ್ಯರು ಮಾತನಾಡಿ, ತಾವು ರಾಜ್ಯ ಸರಕಾರವನ್ನು ದೂಷಿಸುವುದು ಸರಿಯಲ್ಲ. ವಿನಾ ಕಾರಣ ಮೇಯರ್ ಅಭಿನಂದನಾ ಸಭೆಯಲ್ಲಿ ರಾಜಕೀಯ ಮಾತನಾಡುವುದು ಸರಿಯಲ್ಲ. ಈಗಾಗಲೇ ಮಾತನಾಡಿರುವ ಎಂಪಿ, ಎಂಎಲ್ಎಗಳು ರಾಜಕೀಯ ಮಾತನಾಡಿಲ್ಲ‌. ತಾವೇಕೆ ಹೀಗೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಈ ನಡುವೆ ಪಾಲಿಕೆ ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಮಾತನಾಡಿ, ಈ ಹಿಂದೆ ಮೇಯರ್ ಅಭ್ಯರ್ಥಿ ಮೀಸಲಾತಿ ನಾಲ್ಕು ಜನರಲ್ ಮೆರಿಟ್‌ಗೆ ಮಾತ್ರವಿತ್ತು. ಆದರೆ ಎಸ್ ಸಿ
ಮೀಸಲಾತಿ ಬರಬೇಕಾದರೆ ನಮ್ಮ ನಿಯೋಗ ನಗರಾಭಿವೃದ್ಧಿ ಸಚಿವರಲ್ಲಿಗೆ ಹೋಗಿ ಅವರ ಮನವೊಲಿಕೆ ಮಾಡಿದ್ದೀರಿ. ಆದ್ದರಿಂದ ಎಸ್ ಸಿ ಮೀಸಲಾತಿ ಬಂದು, ಎಸ್ಸಿ ಸಮುದಾಯದ ಸದಸ್ಯರೊಬ್ಬರು ಇದೀಗ ಮೇಯರ್ ಆಗಿದ್ದಾರೆ. ಆದ್ದರಿಂದ ಎಸ್ ಸಿ ಮೀಸಲಾತಿ ಬರಬೇಕಾದರೆ ಕಾಂಗ್ರೆಸ್ ಸರಕಾರವೇ ಕಾರಣ ಎಂದು ಹೇಳಿದರು.
ಬಳಿಕ ಈ ವಾಕ್ಸಮರ ತಣ್ಣಗಾಗಿ, ಅಭಿನಂದನಾ ಸಭೆ ಮತ್ತೆ ಮುಂದುವರಿಯಿತು.

ಇತ್ತೀಚಿನ ಸುದ್ದಿ

ಜಾಹೀರಾತು