10:30 PM Tuesday13 - May 2025
ಬ್ರೇಕಿಂಗ್ ನ್ಯೂಸ್
Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌…

ಇತ್ತೀಚಿನ ಸುದ್ದಿ

ಮಸ್ಕಿ ಭ್ರಮರಾಂಬ ದೇವಿ ಉತ್ಸವ: ಮಹಿಳೆಯರಿಂದ ಮಹಾದೇವಿಗೆ ಮಹಾ ರಥೋತ್ಸವ

20/10/2021, 22:50

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ರಾಯಚೂರು ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮಸ್ಕಿಯ. ಶ್ರೀ ಭ್ರಮರಾಂಬ ದೇವಿಯ ಸನ್ನಿದಾನದಲ್ಲಿ ಮೈಸೂರು ದಸರಾ ಉತ್ಸವ ಮಾದರಿಯಲ್ಲಿ ಆಚರಿಸಲಾಯಿತು.


ಶ್ರೀ ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಮಂಗಳವಾರ ಬೆಳಗ್ಗೆ ಭ್ರಮರಾಂಬ ದೇವಿಗೆ ಪ್ರತಿ ವರ್ಷದ ಪದ್ದತಿಯಂತೆ ಈ ವರ್ಷವೂ ಕೂಡ ಕುಂಕುಮಾರ್ಚನೆ, ಕುಂಭಾಭಿಷೇಕ, ರುದ್ರಾಭಿಷೇಕ, ವಿಶೇಷ ಹೂವಿನ ಪೂಜೆ ಅಲಂಕಾರ ನೇರವೇರಿಲಾಯಿತು. ನಂತರ ಗಣಾರಾಧನೆ ಮಹಾಪ್ರಸಾದವಾದ ಬೂಂದಿ, ಅನ್ನ ಪ್ರಸಾದ ಕಾರ್ಯಕ್ರಮ ಭಕ್ತಾದಿಗಳು ಸವಿದರು. ಮಹಾದೇವಿಯ ಪಲ್ಲಕ್ಕಿ ಸೇವೆ ಜರುಗಿತು.ಸಂಜೆ 4.15ಕ್ಕೆ ಮಹಿಳೆಯರು ಸೇರಿ ತನು-ಮನ ಕಳಸ ಕನ್ನಡಿ ಭಜನಾ ಭಕ್ತಿಯೇ ಮೂಲ ಧನದಿಂದ ಭಕ್ತಿಯ ಮೂಲಕ ದೇವಿ ಕೃಪೆಗೆ ಪಾತ್ರರಾಗಿ ದರ್ಶನ ಪಡೆದರು.ಮಹಿಳೆಯರಿಂದಲೇ ಮಹಾ ರಥೋತ್ಸವ ಜರುಗುವುದು ಇಲ್ಲಿನ ವಿಶೇಷವಾಗಿದೆ.

ಮಹಾದೇವಿಯ ರಥವನ್ನು ಎಳೆಯುವ ಮೂಲಕ ತಮ್ಮಲ್ಲಿ ಭಕ್ತಿ ಭಾವವನ್ನು ಆನಂದಿಸಿದರು. ಮಸ್ಕಿ ಬಳಗಾನೂರ, ಸುಂಕನೂರ, ಕಡಬೂರ,ಗುಡದೂರ, ತುರ್ವಿಹಾಳ, ಹಸ್ಮಕಲ್,ಮೆದಿಕಿನಾಳ, ಸಂತೆಕೆಲ್ಲೂರ, ಅಂಕುಶದೂಡ್ಡಿ, ಅಂತರಗಂಗೆ, ನಾಗರಬೆಂಚಿ, ಬೈಲಗುಡ್ಡ, ಹಾಲಾಪೂರ ಹಾಗೂ ಇನ್ನಿತರ ಗ್ರಾಮದ ಭಕ್ತಾದಿಗಳು ಆಗಮಿಸಿ ಶ್ರೀ ಭ್ರಮರಾಂಬ ದೇವಿಯ ದರ್ಶನ ಪಡೆದರು.


ಕಾರ್ಯಕ್ರಮಕ್ಕೆ ಮಸ್ಕಿ ಶಾಸಕ ಬಸನಗೌಡ ತುರುವಿಹಾಳ, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್,  ಮಹಾದೇವಪ್ಪಗೌಡ, ಪೊಲೀಸ್ ಪಾಟೀಲ್ ಮುಂತಾದವರು ಆಗಮಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು