6:31 PM Saturday11 - October 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ… ಇಂಗಾಲಮುಕ್ತ ಸರಕು ಸಾಗಣೆ ಪ್ರಧಾನಿ ಮೋದಿ ಅವರ ಕನಸು: ಕೇಂದ್ರ ಸಚಿವ ಕುಮಾರಸ್ವಾಮಿ ಮೈಸೂರು ಧರ್ಮಪ್ರಾಂತ್ಯ ಹೊಸ ಧರ್ಮಾಧ್ಯಕ್ಷರಾಗಿ ಡಾ. ಫ್ರಾನ್ಸಿಸ್ ಸೆರಾವೊ: ಧಾರ್ಮಿಕ ವಿಧಿ ವಿಧಾನ…

ಇತ್ತೀಚಿನ ಸುದ್ದಿ

Mangaluru | ರಚನಾ ಪ್ರಶಸ್ತಿ ಪುರಸ್ಕೃತ ಶೋಭಾ ಮೆಂಡೋನ್ಸಾಗೆ ವಾಮಂಜೂರು ಚರ್ಚ್ ನಿಂದ ಅಭಿನಂದನೆ

08/10/2025, 14:14

ಮಂಗಳೂರು(reporterkarnataka.com): ರಚನಾ – ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಚನಾ ಅತ್ಯುತ್ತಮ ಮಹಿಳೆ 2025 ( Rachana Outstanding Woman Award 2025) ಪ್ರಶಸ್ತಿ ಪುರಸ್ಕೃತೆ ಶೋಭಾ ಮೆಂಡೋನ್ಸಾ ಅವರನ್ನು ವಾಮಂಜೂರು ಚರ್ಚಿನ ಪ್ರಧಾನ ಧರ್ಮಗುರು ವಂದನೀಯ ಫಾ. ಜೇಮ್ಸ್ ಡಿ ಸೋಜಾ ಅವರು ಭಕ್ತಾದಿಗಳ ಸಮ್ಮುಖದಲ್ಲಿ ಹೂಗುಚ್ಛ ನೀಡಿ ಅಭಿನಂದಿಸಿದರು.

ಚರ್ಚ್ ಉಪಾಧ್ಯಕ್ಷ ಚಾರ್ಲ್ಸ್ ಪಾಯ್ಸ್ ಮಾತನಾಡಿ ಶೋಭಾ ಮೆಂಡೋನ್ಸಾ ಅವರು ವಾಮಂಜೂರು ಚರ್ಚ್ ಸಮುದಾಯಕ್ಕೆ ನೀಡಿರುವ ದೇಣಿಗೆಯನ್ನು ಹಾಗೂ ವಿದೇಶದಲ್ಲಿ ಅವರು ನಡೆಸುವ ಉದ್ಯಮದ ಮೂಲಕ ಸಮಾಜಕ್ಕೆ ನೀಡುತ್ತಿರುವ ಕೊಡುಗೆಗಳನ್ನು ಸ್ಮರಿಸಿ ಅಭಿನಂದಿಸಿದರು. ವಿಶೇಷವಾಗಿ 2007ರಲ್ಲಿ ಕುಟುಂಬದ ಸದಸ್ಯರೊಂದಿಗೆ ಸೇರಿ ‘ಮೆಂಡೋನ್ಸಾ ಎಜ್ಯುಕೇಶನಲ್ ಫಂಡ್’ ಸ್ಥಾಪಿಸಿ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಸಹಾಯ ಧನ ನೀಡಿರುವುದಕ್ಕಾಗಿ ಹಾಗೂ ಇಲ್ಲಿ ಹಮ್ಮಿಕೊಂಡಿರುವ ಹತ್ತು ಹಲವು ಅಭಿವೃದ್ಧಿ ಕಾರ್ಯಗಳಿಗೆ ಅವರು ಮತ್ತು ಮೆಂಡೋನ್ಸಾ ಕುಟುಂಬದ ಸದಸ್ಯರು ನೀಡಿರುವ ದೇಣಿಗೆಗಳಿಗಾಗಿ ಅವರ ಉಪಕಾರ ಸ್ಮರಿಸಿದರು.
ಕಾಕತಾಳೀಯ ಎಂಬಂತೆ 2009 ರಲ್ಲಿ ಅವರ ಪತಿ ಜೇಮ್ಸ್ ಮೆಂಡೋನ್ಸಾ ಅವರಿಗೆ ರಚನಾ- ಅತ್ಯುತ್ತಮ ಅನಿವಾಸಿ ಭಾರತೀಯ ಪ್ರಶಸ್ತಿ – 2009 ನೀಡಿ ಗೌರವಿಸಲಾಗಿದ್ದ ಸಂದರ್ಭವನ್ನು ನೆನಪಿಸಿ ಅವರಿಗೂ ಅಭಿನಂದನೆ ಸಲ್ಲಿಸಿ ಚರ್ಚ್ ಪ್ರಧಾನ ಧರ್ಮಗುರುಗಳು ಹೂ ಗುಚ್ಛ ನೀಡಿ ಗೌರವಿಸಿದರು. ಚರ್ಚ್ ನ ಸಹಾಯಕ ಧರ್ಮ ಗುರು ವಂದನೀಯ ಫಾ. ಜೀವನ್ ಶೈಲೇಶ್ ಲೋಬೊ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಸಿ. ಎ. ಲೋವೆಲ್ ಮೊಂತೇರೊ, 21 ಆಯೋಗಗಳ ಸಂಯೋಜಕ ಅನಿಲ್ ಪಿಂಟೊ, ಧರ್ಮ ಭಗಿನಿಯರು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು