ಇತ್ತೀಚಿನ ಸುದ್ದಿ
ಮಂಗಳೂರು ತಣ್ಣೀರು ಬಾವಿ ಬೀಚ್: ಡಾಲ್ಫಿನ್ ಮೃತದೇಹ ಪತ್ತೆ; ಸಾವಿನ ಕಾರಣ ನಿಗೂಢ
25/02/2023, 21:20
ಮಂಗಳೂರು(reporterkarnataka.com): ತಣ್ಣೀರಬಾವಿ ಬೀಚಿನ ಫಾತಿಮಾ ಚರ್ಚ್ ಪ್ರದೇಶದಲ್ಲಿ ಡಾಲ್ಫಿನ್ ಕೊಳೆತ ಮೃತದೇಹವೊಂದು ಪತ್ತೆಯಾಗಿದೆ.
ಸತ್ತು ಬಿದ್ದಿರುವ ಡಾಲ್ಫಿನನ್ನು ಬ್ಲೂ ಫ್ಲಾಗ್ ಬೀಚ್ನ ಕಾರ್ಮಿಕರು ಹಾಗೂ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಸಿಬ್ಬಂದಿ ಮತ್ತು ಲೈಫ್ ಗಾರ್ಡ್ಗಳು
ಹಗ್ಗದ ಮೂಲಕ ದಡಕ್ಕೆ ತಂದು ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿದ್ದರು. ನಂತರ ಡಾಲ್ಫಿನ್ ಮೃತದೇಹವನ್ನು ಐದೂವರೆ ಅಡಿ ಆಳದ ಹೊಂಡದಲ್ಲಿ ಸುಟ್ಟು ಹಾಕಲಾಯಿತು ಎಂದು ಯೋಜಕ ಇಂಡಿಯಾದ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ರೀಫ್ ವಾಚ್ ಮೆರೈನ್ ಕನ್ಸರ್ವೇಶನ್ ಕರ್ನಾಟಕ ಸಂಯೋಜಕಿ ತೇಜಸ್ವಿನಿ ಭೇಟಿ ನೀಡಿ, ಪಶು ವೈದ್ಯಾಧಿಕಾರಿ ಡಾ.ಸುರಂಜನಾ ನೇತೃತ್ವದಲ್ಲಿ ಡಾಲ್ಪಿನ್ ಶವ ಪರೀಕ್ಷೆ ನಡೆಸಿದರು. ಡಾಲ್ಫಿನ್ ಸಾವಿಗೆ ನಿಖರ ಕಾರಣ ಕಂಡು ಹಿಡಿಯುವುದು ಕಷ್ಟ. ಮೃತದೇಹ ಕೊಳೆತ ಸ್ಥಿತಿಯಲ್ಲಿದೆ. ಆಕಸ್ಮಿಕವಾಗಿ ಬಲೆಗೆ ಸಿಕ್ಕಿಬಿದ್ದ ನಂತರ ಅದು ಹಸಿವಿನಿಂದ ಸತ್ತಿರಬಹುದು. ಇಲ್ಲವೇ ಆಮ್ಲಜನಕದ ಕೊರತೆಯ, ಯಾವುದಾದರೂ ಸೋಂಕಿನಿಂದ ಬಳಲಿ ಸತ್ತಿರಬಹುದು ಎಂದು ತಿಳಿಸಿದರು.














