ಇತ್ತೀಚಿನ ಸುದ್ದಿ
ಮಂಗಳೂರು: ನಿರ್ಮಾಣ ಹಂತದ ಕಟ್ಟಡ ಬಳಿ ಮಣ್ಣು ಕುಸಿತ; ಇಬ್ಬರು ಮಣ್ಣಿನಡಿ ಸಿಲುಕಿರುವ ಶಂಕೆ; ರಕ್ಷಣಾ ಕಾರ್ಯ ಆರಂಭ
03/07/2024, 14:43
ಮಂಗಳೂರು(reporterkarnataka.com): ನಗರದ ಬಲ್ಮಠ ರಸ್ತೆಯ ಬಳಿ ನಿರ್ಮಾಣ ಹಂತದ ಕಟ್ಟಡವೊಂದರ ಸಮೀಪ ಮಣ್ಣು ಕುಸಿದಿದ್ದು, ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಮಣ್ಣಿನಡಿ ಸಿಲುಕಿರುವವರ ರಕ್ಷಣಾ ಕಾರ್ಯ ಭರದಿಂದ ನಡೆಯುತ್ತಿದೆ.
ಕಾರ್ಮಿಕರು ರಿಟೈನಿಂಗ್ ವಾಲ್ ಹಾಗೂ ಶೀಟ್ ಮದ್ಯೆ ಸಿಲುಕಿದ್ದಾರೆ. ಕೋರ್ ಕಟಿಂಗ್ ಮೂಲಕ ರಕ್ಷಣಾ ಕಾರ್ಯ ನಡೆಯುತ್ತಿದೆ.