1:33 AM Sunday20 - July 2025
ಬ್ರೇಕಿಂಗ್ ನ್ಯೂಸ್
ಸುಂಟಿಕೊಪ್ಪ: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಆಡಿ-ಟೆಂಪೋ ಡಿಕ್ಕಿ: ಟ್ರಾಫಿಕ್ ಜಾಮ್ Kodagu | ಕುಶಾಲನಗರ: ಆಸ್ತಿಗಾಗಿ ಸ್ನೇಹಿತರ ಜತೆ ಸೇರಿ ತಂದೆಯನ್ನೇ ಕೊಂದ ಪಾಪಿ… SIT Dharmasthala | ಧರ್ಮಸ್ಥಳ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ ರಚನೆ:… ಭಾರೀ ಮಳೆ ಮಧ್ಯೆಯೂ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು: ಕಾರು – ಜೀಪ್ ಮುಖಾಮುಖಿ… ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಜಸ್ಟಿಸ್ ವಿಭು ಬಖ್ರು ಅಧಿಕಾರ ಸ್ವೀಕಾರ: ರಾಜ್ಯಪಾಲ… Kodagu |ಪೊನ್ನಂಪೇಟೆ: ವ್ಯಾಘ್ರನ ಸೆರೆಗೆ 75 ಮಂದಿ ಅರಣ್ಯ ಸಿಬ್ಬಂದಿಗಳ ಕೂಂಬಿಂಗ್ ಕಾರ್ಯಾಚರಣೆ… ಮಂಗಳೂರು – ಬೆಂಗಳೂರು 4 ತಾಸಿನ ಆಂಬುಲೆನ್ಸ್ ಪ್ರಯಾಣ!: ಹೃದಯ ಕಾಯಿಲೆಯ 14… ವಿದ್ಯುತ್ ಶಾಕ್: ಲೈನ್ ಮ್ಯಾನ್ ದಾರುಣ ಸಾವು; ಒಂದೂವರೆ ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ… ರಾಹುಲ್ ಗಾಂಧಿಯ ಗೊತ್ತಿಲ್ಲದ ಸಾಧನೆಗೆ ಗೊತ್ತಿಲ್ಲದ ಪ್ರಶಸ್ತಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ಬಿರುಸುಗೊಂಡ ಕಾಡಾನೆಗಳ ಅರಣ್ಯಕ್ಕೆ ಅಟ್ಟುವ ಕಾರ್ಯ: ನಾಡಿನಿಂದ ಕಾಡಿನತ್ತ ಆನೆಗಳ ಮತ್ತೊಂದು ಹಿಂಡು

ಇತ್ತೀಚಿನ ಸುದ್ದಿ

ಮಂಗಳೂರಿನಲ್ಲಿ ದಸರಾ ಕವಿಗೋಷ್ಠಿ: ಒಂದೇ ವೇದಿಕೆಯಲ್ಲಿ ಮೇಳೈಸಿದ ಬಹು ಭಾಷಿಕತೆ

07/10/2022, 21:32

ಮಂಗಳೂರು(reporterkarnataka.com): ತುಳು ಪರಿಷತ್,  ಮಯೂರಿ ಫೌಂಡೇಷನ್ ಮತ್ತು ಕರ್ನಾಟಕ ಥಿಯಾಲಾಜಿಕಲ್ ಕಾಲೇಜು, ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಹಾಗೂ ಸಾಮರಸ್ಯ ಮಂಗಳೂರು ಇದರ ಸಹಭಾಗಿತ್ವದಲ್ಲಿ ದಸರಾ ಬಹು ಭಾಷಾ ಕವಿಗೋಷ್ಠಿ ಮಂಗಳೂರಿನ ಬಲ್ಮಠದ ಸಹೋದಯದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮಯೂರಿ ಫೌಂಡೇಶನ್‌ನ ಅಧ್ಯಕ್ಷರು ಹಾಗೂ ಹಿರಿಯ ಕವಿ ಜಯ ಕೆ.ಶೆಟ್ಟಿ ಅವರು ಉದ್ಘಾಟಿಸಿ ಮಾತನಾಡಿ, ದಸರಾ ಹಿನ್ನೆಲೆಯಲ್ಲಿ ತುಳುನಾಡಿನ ಎಲ್ಲಾ ಭಾಷಿಗರು ಒಂದೇ ವೇದಿಕೆಗೆ ಬರುವ ಮೂಲಕ ತುಳುನಾಡಿನ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು.


ದಸರಾ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಬಾಬು ಕೊರಗ ಪಾಂಗಾಳ ಅವರು ಕೊರಗ ಭಾಷೆಯಲ್ಲಿ ಕವಿತೆಯನ್ನು ಪ್ರಸ್ತುತಪಡಿಸಿದರು. ವಿಜಯ ಶೆಟ್ಟಿ ಸಾಲೆತ್ತೂರು ಮತ್ತು ಶಾರದ ಶೆಟ್ಟಿ ತುಳು ಭಾಷೆಯಲ್ಲಿ ಕವಿತೆಯನ್ನು ಪ್ರಸ್ತುತ ಪಡಿಸಿದರು. ರಾಧಾಕೃಷ್ಣ ಉಳಿಯತಡ್ಕ ಕಾಸರಗೋಡು ಮತ್ತು ರಾಜವರ್ಮ ವಿಟ್ಲ ಅವರು ಕನ್ನಡದಲ್ಲಿ ಕವಿತೆಯನ್ನು ಪ್ರಸ್ತುತಪಡಿಸಿದರು. ತಾರಾ ಲವಿನಾ ಗಂಜೀಮಠ ಮತ್ತು ವಿನೋದ್ ಪಿಂಟೋ ತಾಕೋಡೆ ಅವರು ಕೊಂಕಣಿ ಭಾಷೆಯ ಕವಿತೆ ವಾಚಿಸಿದರು. ವೆಂಕಟೇಶ್ ನಾಯಕ್ ಜಿಎಸ್‌ಬಿ ಕೊಂಕಣಿಯ ಕವಿತೆ ವಾಚಿಸಿದರು. ಶಾಂತಾ ಕುಂಠಿನಿ ಮತ್ತು ಗೋಪಾಲಕೃಷ್ಣ ಶಾಸ್ತ್ರಿ ಹವ್ಯಕ ಕನ್ನಡ ಭಾಷೆಯಲ್ಲಿ ಕವಿತೆಯನ್ನು ವಾಚಿಸಿದರು. ಮಿಸ್ರಿಯಾ ಐ. ಪಜೀರ್ ಅವರು ಬ್ಯಾರಿ ಭಾಷೆಯಲ್ಲಿ, ಪೂರ್ಣಿಮಾ ಕಮಲಶಿಲೆ ಅವರು ಕುಂದಾಪುರ ಕನ್ನಡದ, ಚಂದ್ರಹಾಸ್ ನಂಬಿಯಾರ್,ಎಂ.ಕೆ.ಕಾಸರಗೋಡು ಅವರು ಮಳಯಾಲಯಂ ಭಾಷೆಯಲ್ಲಿ ಕವಿತೆಯನ್ನು ವಾಚಿಸಿದರು. ಸೌಮ್ಯ ಗೋಪಾಲ್ ಅವರು ಶಿವಳ್ಳಿ ತುಳು ಭಾಷೆಯಲ್ಲಿ ಹಾಗೂ ಯೋಗಿಶ್ ಹೊಸೊಳಿಕೆ ಅವರು ಅರೆ ಭಾಷೆಯಲ್ಲಿ ಕವಿತೆಯನ್ನು ವಾಚಿಸಿದರು. 


ರತ್ನಾವತಿ ಬೈಕಾಡಿ ಮತ್ತು ಜಯಲಕ್ಷಿ ಅವರು ಭಾವಗಾನ ಪ್ರಸ್ತುತಪಡಿಸಿದರು.


ಇದೇ ವೇಳೆ ಮುಲ್ಕಿ ಕಾರ್ನಾಡ್‌ನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ಅವರು ಕವಿತೆಗಳಲ್ಲಿ ಪ್ರಕಟಗೊಂಡ ಬಹುಭಾಷಿಕತೆಯ ಬಗ್ಗೆ ಮಾತನಾಡಿ, ಒಂದೇ ಭೌಗೋಳಿಕ ಪ್ರದೇಶದಲ್ಲಿ ಹಲವಾರು ಭಾಷೆಗಳು ಬಳಕೆಯಲ್ಲಿದ್ದರೆ ಅದನ್ನು ಬಹುಭಾಷಿಕ ಪ್ರದೇಶ ಎನ್ನುತ್ತಾರೆ. ನಮ್ಮ ಈ ತುಳುನಾಡು ಮತ್ತೆಲ್ಲಿಯೂ ಕಾಣದಷ್ಟು ಭಾಷೆಗಳನ್ನು ಹೊಂದಿದೆ. ದಸರಾ, ಕೃಷಿ, ಪ್ರಕೃತಿ, ಬಡತನ, ದುಡಿಮೆ, ಅಸಮಾನತೆ  ಹೀಗೆ ವಿವಿಧ ವಿಷಯಗಳನ್ನು ಒಳಗೊಂಡಿರುವ ಕವನಗಳಲ್ಲಿ ಬಹುಭಾಷಿಕತೆಯ ಸಮೃದ್ಧಿ ಎದ್ದು ಕಂಡಿತು. ಒಂದೇ ವಿಷಯಕ್ಕೆ ಹಲವಾರು ಪದಗಳು, ಮತ್ತು ಅವುಗಳ ಸಾಮ್ಯತೆ ಹಾಗೂ ವೈವಿದ್ಯತೆ ಈ ಕವನಗಳಲ್ಲಿ ವ್ಯಕ್ತಗೊಂಡಿತು ಎಂದು ಹೇಳಿದರು.


ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ  ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಅಧ್ಯಕ್ಷೆ  ಡಾ. ಜ್ಯೋತಿ ಚೇಳ್ಯಾರು ಅವರು ಗೋಷ್ಠಿಯಲ್ಲಿ ವಾಚಿಸಲಾದ ಕವಿತೆಗಳ ಬಗ್ಗೆ ಪ್ರತಿಕ್ರಿಯೆ ನೀಡಿ, ಬಹುಭಾಷಿಕತೆ ಬಹುಭಾಷೆಗಳೊಂದಿಗೆ  ಬಹು ಸಮುದಾಯಗಳ ಕವಿಗಳು ಒಂದೇ ವೇದಿಕೆಯಲ್ಲಿ ತಮ್ಮ ಭಾವಗಳನ್ನು ಹಂಚಿಕೊಳ್ಳಲು ಸಾಧ್ಯ ಎಂಬುವುದಕ್ಕೆ ಈ ಗೋಷ್ಠಿ ಸಾಕ್ಷಿಯಾಯಿತು. ಇಲ್ಲಿ ವಾಚಿಸಲಾದ ಕವನಗಳು ದಸರಾ ನವರಾತ್ರಿ, ಮಾರ್ನೆಮಿ, ಮನ್ನಮಿಯಾಗಿ ಪ್ರಸ್ತುತಗೊಂಡಿದಲ್ಲದೆ, ಒಂದೇ ವಿಷಯ ವಸ್ತುವನ್ನು ಒಳಗೊಂಡು ಇಷ್ಟು ಜನ ಕವಿಗಳು ಕವಿತೆ ರಚಿಸಿ ಭಿನ್ನ ವಿಭಿನ್ನ ಆಶಯಗಳನ್ನು ವ್ಯಕ್ತಪಡಿಸಿರುವುದು ಕವಿತೆಯ ಶಕ್ತಿ ಮತ್ತು ಅನನ್ಯತೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು, ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್. ಎಂ ವಾಟ್ಸನ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎ ಮಹಮ್ಮದ್ ಹನೀಫ್, ದ.ಕ ಜಿಲ್ಲಾ ಕೊರಗರ ಸಂಘದ ಅಧ್ಯಕ್ಷರಾದ ಸುಂದರ ಕೊರಗ, ತುಳು ಪರಿಷತ್ ಗೌರವಾಧ್ಯಕ್ಷರಾದ ಸ್ವರ್ಣ ಸುಂದರ್, ತುಳು ಪರಿಷತ್‌ನ ಗೌರವ ಸಲಹೆಗಾರರಾದ ಡಾ.ಪ್ರಭಾಕರ್ ನೀರ್‌ಮಾರ್ಗ, ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ವೈ ನಾಯಕ್ ಅವರು ಶುಭಕೋರಿ ಮಾತನಾಡಿದರು. 


ತುಳು ಪರಿಷತ್ ಕೋಶಾಧಿಕಾರಿ ಶುಭೋದಯ ಆಳ್ವ ಸ್ವಾಗತಿಸಿದರು. ತುಳು ಪರಿಷತ್ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು