ಇತ್ತೀಚಿನ ಸುದ್ದಿ
ಮಂಗಳೂರು ಪಾಲ್ದನೆ ಚರ್ಚ್: ಪ್ರಕೃತಿಯಲ್ಲಿ ಒಂದು ದಿನ ಆಚರಣೆ
10/11/2025, 12:01
ಮಂಗಳೂರು(reporterkarnataka.com): ಮಂಗಳೂರಿನ ಪಾಲ್ದನೆ ಸಂತ ತೆರೆಜಾ ಚರ್ಚ್ ಪಾಲನಾ ಸಮಿತಿ ಮತ್ತು ಚರ್ಚ್ ನ ಕ್ರೈಸ್ತ ಶಿಕ್ಷಣ ನೀಡುವ ಶಿಕ್ಷಕ- ಶಿಕ್ಷಕಿಯರು ಜಂಟಿಯಾಗಿ ‘ಪ್ರಕೃತಿಯಲ್ಲಿ ಒಂದು ದಿನ’ ಆಚರಣೆಯ ಅಂಗವಾಗಿ ಹೊನ್ನಾವರ ಶರಾವತಿ ನದಿ ಕಿನಾರೆಯಲ್ಲಿರುವ ಹೋಲಿ ಕ್ರಾಸ್ ಬ್ರದರ್ಸ್ ಸಂಸ್ಥೆಯ ಆವರಣಕ್ಕೆ ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ಸವಿದರು.
ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಪ್ರಾರ್ಥನೆಯೊಂದಿಗೆ ಈ ಪ್ರವಾಸಕ್ಕೆ ಚಾಲನೆ ನೀಡಿದರು. ಪ್ರಕೃತಿ ಮಾನವನಿಗೆ ದೇವರು ನೀಡಿದ ಒಂದು ವರ. ದಿನವಿಡೀ ಈ ಪ್ರಕೃತಿ ಮಾನವನಿಗೆ ಜೀವನದ ಒಂದು ಅಂಗವಾಗಿರುತ್ತದೆ. ಪಾಲನಾ ಸಮಿತಿಯವರ ಈ ಪ್ರವಾಸ ಮುಂದೆ ಅವರು ಸಲ್ಲಿಸುವ ಸೇವೆಗೆ ಒಗ್ಗಟ್ಟಿನ ಮಂತ್ರವಾಗುತ್ತದೆ ಎಂದವರು ಹೇಳಿದರು.
ಈ ಸಂದಭರ್ದಲ್ಲಿ ಚರ್ಚ್ ನ ಡಿಯಕೊನ್ ರೋವಿನ್ ಲೋಪೆಜ್, ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಕ್ರೈಸ್ತ ಶಿಕ್ಷಣ ಶಿಕ್ಷಕ- ಶಿಕ್ಷಕಿಯರ ಸಂಯೋಜಕಿ ಲಿಝಿ ಫೆರ್ನಾಂಡಿಸ್, ಆಧ್ಯಾತ್ಮಿಕ ಸಮಿತಿಯ ಸಂಯೋಜಕಿ ಪ್ರೆಸಿಲ್ಲಾ (ಪ್ರೆಸ್ಸಿ) ಫೆರ್ನಾಂಡಿಸ್, ವಾರ್ಡಿನ ಮುಖ್ಯಸ್ಥರು, ವಾರ್ಡ್ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಅಧ್ಯಕ್ಷರು, ಧರ್ಮ ಭಗಿನಿಯರು ಉಪಸ್ಥಿತರಿದ್ದರು.












