6:59 AM Wednesday2 - April 2025
ಬ್ರೇಕಿಂಗ್ ನ್ಯೂಸ್
Chikkamagaluru | ಅನ್ನದಾತ ಆತ್ಮಹತ್ಯೆ: ಕಿರುಕುಳ ನೀಡಿದ ಬ್ಯಾಂಕ್ ಎದುರು ರೈತನ ಪಾರ್ಥಿವ… Mangaluru | ಜಾಮರ್ ಸಮಸ್ಯೆ ಬಗೆಹರಿಸದಿದ್ದರೆ ಜೈಲಿನೊಳಗೆ ನುಗ್ಗಿ ಕಿತ್ತು ಬಿಸಾಕ ಬೇಕಾಗುತ್ತದೆ:… Delhi | ರಾಜ್ಯದ್ದು “ಜನ-ಕರ” ವಸೂಲಿ ಸರಕಾರ: ಕಾಂಗ್ರೆಸ್‌ ವಿರುದ್ಧ ಕೇಂದ್ರ ಸಚಿವ… Chikkamagaluru | ಕೆಮ್ಮಣ್ಣುಗುಂಡಿ ಸಮೀಪ ವಿದ್ಯುತ್ ಶಾಕ್ ನಿಂದ ಕಾಡಾನೆ ದಾರುಣ ಸಾವು ಕೂಡ್ಲಿಗಿ: ರಂಜಾನ್ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಭಾಗಿ ಭಾಗಿ Kolara | ಶ್ರೀನಿವಾಸಪುರದಲ್ಲಿ ಸಂಭ್ರಮ- ಸಡಗರದಲ್ಲಿ ಈದ್-ಉಲ್-ಫಿತರ್ ಆಚರಣೆ: ಸಾಮೂಹಿಕ ಪ್ರಾರ್ಥನೆ PDO | ಮಾದರಿ ಗ್ರಾಮ ಪಂಚಾಯತಿ ನಿರ್ಮಾಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ… Bangalore | ಸಬಲೀಕರಣ ಜತೆಗೆ ಮಹಿಳಾ ಸುರಕ್ಷತೆ: ‘ಬಿ.ಸೇಫ್’ ಸಮೀಕ್ಷಾ ವರದಿ ಬಿಡುಗಡೆ Bangalore | ಬೇಡಿಕೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್ ನಿವೃತ್ತರ ಒಕ್ಕೂಟಗಳ… MSIL | ಸರಕಾರಿ, ಖಾಸಗಿ ಉತ್ಪನ್ನಗಳ ಮಾರಾಟ, ಖರೀದಿಗೆ ನೆರವಾಗಲಿದೆ ಇ ಪೋರ್ಟಲ್‌

ಇತ್ತೀಚಿನ ಸುದ್ದಿ

ಮನಸ್ಸಿನ ಭಾವನೆಗಳನ್ನು ಅಕ್ಷರಕ್ಕಿಳಿಸಲು ಕೈಬರಹವೇ ಸಾಧನ: ಮಾತಿನ ಜತೆಗೆ ಜ್ಞಾನದ ಅಭಿವೃದ್ಧಿಯೂ ಇದರಿಂದಲೇ!

25/11/2021, 07:58

ಮಾನವ ಸಂಘಜೀವಿ. ಸಮಾಜದ ಎಲ್ಲರೊಂದಿಗೆ ಬೆರೆತು ಬಾಳ ಬೇಕಾಗಿರುವುದು  ಮನುಷ್ಯ ಸಹಜ ಗುಣವಾಗಿದೆ. ಮಾನವನು ತನ್ನ ಮನಸ್ಸಿನ ಭಾವನೆಗಳನ್ನು ಮಾತಿನ ಮೂಲಕ ವ್ಯಕ್ತಪಡಿಸುತ್ತಾನೆ. ಮಾತನ್ನು ಲಿಪಿ ಸಹಿತ  ಲಿಖಿತ ರೂಪಕ್ಕೆ ತರುವುದೇ ಬರವಣಿಗೆ.. 

ಬರವಣಿಗೆಯು ಭಾಷೆಯನ್ನು ಓದುವಂತೆ ಮಾಡುವ ಸಾಧನ. ಬರವಣಿಗೆಯು ಮಕ್ಕಳ ಕಲಿಕೆಯ ಒಂದು ಭಾಗವಾಗಿದೆ. ಓದುವಿಕೆ, ಮಾತಿನ ಜೊತೆಗೆ ಜ್ಞಾನದ ಅಭಿವೃದ್ಧಿಗೆ ಬರವಣಿಗೆ ಅತಿ ಅಗತ್ಯ..

ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಕೌಶಲ್ಯವನ್ನು ಉತ್ತಮಪಡಿಸುವುದು ಶಿಕ್ಷಕರ ಮತ್ತು ಹೆತ್ತವರ ಜವಾಬ್ದಾರಿಯಾಗಿದೆ.ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆ ಮಾತಿನಂತೆ, ಎಳೆಯ ವಯಸ್ಸಿನಲ್ಲಿಯೇ ವಿದ್ಯಾರ್ಥಿಗಳ ಕೈಬರಹವನ್ನು ಉತ್ತಮಪಡಿಸುವುದು ಅತಿ ಮುಖ್ಯವಾದ ಕೆಲಸ.

ಅಕ್ಷರಗಳನ್ನು ಬರೆಯುವ ಸರಿಯಾದ ಕ್ರಮವನ್ನು ವಿದ್ಯಾರ್ಥಿಗಳಿಗೆ ಕಲಿಸುವುದು ಅತಿ ಅಗತ್ಯ . ಅಕ್ಷರಗಳ ಮೇಲೆ ಮಣಿ, ಬೀಜಗಳನ್ನು ಇಟ್ಟು ಅಭ್ಯಾಸ ಮಾಡುವ ಮೂಲಕ, ಪುನಃ ಪುನಃ

ಅಕ್ಷರದ ಮೇಲೆ ಕೈಯಾಡಿಸುವ ಮೂಲಕ ಅಕ್ಷರವನ್ನು ಬರೆಯುವ ಸರಿಯಾದ ಕ್ರಮವನ್ನು ತಿಳಿದುಕೊಳ್ಳಬಹುದು. ಮಕ್ಕಳಿಗೆ ಸರಿಯಾಗಿ ಲೇಖನಿ ಹಿಡಿಯುವ ಕ್ರಮ, ಪ್ರತಿನಿತ್ಯ ಕಾಪಿ ಬರಿಸುವುದರಿಂದ ಕೈಬರಹ ಉತ್ತಮವಾಗುತ್ತದೆ..

ವಿದ್ಯಾರ್ಥಿಗಳಲ್ಲಿ ವರ್ಣಮಾಲೆ, ಗುಣಿತಾಕ್ಷರಗಳು, ಅಲ್ಪಪ್ರಾಣ, ಮಹಾಪ್ರಾಣಗಳ ಸ್ಪಷ್ಟ ಪರಿಚಯ ಇದ್ದಲ್ಲಿ ವಾಕ್ಯಗಳನ್ನು ಬರೆಯುವಾಗ ಯಾವುದೇ ದೋಷ ಉಂಟಾಗುವುದಿಲ್ಲ.

ಸುಂದರ, ಸ್ಪಷ್ಟ  ಕೈಬರಹ ಬರೆಯಲು ಪ್ರೋತ್ಸಾಹ ನೀಡಿ ಬಹುಮಾನವನ್ನು ಕೊಡುವುದರ ಮೂಲಕ ಮಕ್ಕಳಲ್ಲಿ ಅಂದವಾದ ಕೈಬರಹದ ಕೌಶಲವನ್ನು ಹೆಚ್ಚಿಸಬಹುದು. ಬರವಣಿಗೆಯು ಮಾನವನ ಪ್ರತಿಯೊಂದು ಹಂತದಲ್ಲಿ ಅದ್ಭುತವಾದ ಪರಿಣಾಮವನ್ನು ಬೀರುತ್ತದೆ. ಉತ್ತಮ ಕೈಬರಹ ಉನ್ನತವಾದ ಅಂಕ ಗಳಿಸುವಲ್ಲಿ ಅತ್ಯಂತ ಸಹಕಾರಿಯಾಗಿದೆ. ಸುಂದರವಾಗಿ ಅಕ್ಷರಗಳನ್ನು ಪದ , ವಾಕ್ಯ ರೂಪದಲ್ಲಿ ತಪ್ಪಿಲ್ಲದೆ ಸ್ಪಷ್ಟವಾಗಿ ಬರೆದಾಗ ನೋಡುಗನಿಗೂ ಅತ್ಯಂತ ಸಂತೋಷವಾಗುತ್ತದೆ.

ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮವಾದ ಕೈಬರಹವನ್ನು ರೂಢಿಸಿಕೊಂಡು ಬರವಣಿಗೆಯ ಕೌಶಲ್ಯವನ್ನು ಅಭಿವೃದ್ಧಿಪಡಿಸಿ ಕೊಳ್ಳಬೇಕೆಂಬುದೇ ನಮ್ಮ ಆಶಯವಾಗಿದೆ.

✍️

ಇತ್ತೀಚಿನ ಸುದ್ದಿ

ಜಾಹೀರಾತು