3:30 AM Monday15 - December 2025
ಬ್ರೇಕಿಂಗ್ ನ್ಯೂಸ್
Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ…

ಇತ್ತೀಚಿನ ಸುದ್ದಿ

ಮನಸ್ಸಿನ ಭಾವನೆಗಳನ್ನು ಅಕ್ಷರಕ್ಕಿಳಿಸಲು ಕೈಬರಹವೇ ಸಾಧನ: ಮಾತಿನ ಜತೆಗೆ ಜ್ಞಾನದ ಅಭಿವೃದ್ಧಿಯೂ ಇದರಿಂದಲೇ!

25/11/2021, 07:58

ಮಾನವ ಸಂಘಜೀವಿ. ಸಮಾಜದ ಎಲ್ಲರೊಂದಿಗೆ ಬೆರೆತು ಬಾಳ ಬೇಕಾಗಿರುವುದು  ಮನುಷ್ಯ ಸಹಜ ಗುಣವಾಗಿದೆ. ಮಾನವನು ತನ್ನ ಮನಸ್ಸಿನ ಭಾವನೆಗಳನ್ನು ಮಾತಿನ ಮೂಲಕ ವ್ಯಕ್ತಪಡಿಸುತ್ತಾನೆ. ಮಾತನ್ನು ಲಿಪಿ ಸಹಿತ  ಲಿಖಿತ ರೂಪಕ್ಕೆ ತರುವುದೇ ಬರವಣಿಗೆ.. 

ಬರವಣಿಗೆಯು ಭಾಷೆಯನ್ನು ಓದುವಂತೆ ಮಾಡುವ ಸಾಧನ. ಬರವಣಿಗೆಯು ಮಕ್ಕಳ ಕಲಿಕೆಯ ಒಂದು ಭಾಗವಾಗಿದೆ. ಓದುವಿಕೆ, ಮಾತಿನ ಜೊತೆಗೆ ಜ್ಞಾನದ ಅಭಿವೃದ್ಧಿಗೆ ಬರವಣಿಗೆ ಅತಿ ಅಗತ್ಯ..

ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಕೌಶಲ್ಯವನ್ನು ಉತ್ತಮಪಡಿಸುವುದು ಶಿಕ್ಷಕರ ಮತ್ತು ಹೆತ್ತವರ ಜವಾಬ್ದಾರಿಯಾಗಿದೆ.ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆ ಮಾತಿನಂತೆ, ಎಳೆಯ ವಯಸ್ಸಿನಲ್ಲಿಯೇ ವಿದ್ಯಾರ್ಥಿಗಳ ಕೈಬರಹವನ್ನು ಉತ್ತಮಪಡಿಸುವುದು ಅತಿ ಮುಖ್ಯವಾದ ಕೆಲಸ.

ಅಕ್ಷರಗಳನ್ನು ಬರೆಯುವ ಸರಿಯಾದ ಕ್ರಮವನ್ನು ವಿದ್ಯಾರ್ಥಿಗಳಿಗೆ ಕಲಿಸುವುದು ಅತಿ ಅಗತ್ಯ . ಅಕ್ಷರಗಳ ಮೇಲೆ ಮಣಿ, ಬೀಜಗಳನ್ನು ಇಟ್ಟು ಅಭ್ಯಾಸ ಮಾಡುವ ಮೂಲಕ, ಪುನಃ ಪುನಃ

ಅಕ್ಷರದ ಮೇಲೆ ಕೈಯಾಡಿಸುವ ಮೂಲಕ ಅಕ್ಷರವನ್ನು ಬರೆಯುವ ಸರಿಯಾದ ಕ್ರಮವನ್ನು ತಿಳಿದುಕೊಳ್ಳಬಹುದು. ಮಕ್ಕಳಿಗೆ ಸರಿಯಾಗಿ ಲೇಖನಿ ಹಿಡಿಯುವ ಕ್ರಮ, ಪ್ರತಿನಿತ್ಯ ಕಾಪಿ ಬರಿಸುವುದರಿಂದ ಕೈಬರಹ ಉತ್ತಮವಾಗುತ್ತದೆ..

ವಿದ್ಯಾರ್ಥಿಗಳಲ್ಲಿ ವರ್ಣಮಾಲೆ, ಗುಣಿತಾಕ್ಷರಗಳು, ಅಲ್ಪಪ್ರಾಣ, ಮಹಾಪ್ರಾಣಗಳ ಸ್ಪಷ್ಟ ಪರಿಚಯ ಇದ್ದಲ್ಲಿ ವಾಕ್ಯಗಳನ್ನು ಬರೆಯುವಾಗ ಯಾವುದೇ ದೋಷ ಉಂಟಾಗುವುದಿಲ್ಲ.

ಸುಂದರ, ಸ್ಪಷ್ಟ  ಕೈಬರಹ ಬರೆಯಲು ಪ್ರೋತ್ಸಾಹ ನೀಡಿ ಬಹುಮಾನವನ್ನು ಕೊಡುವುದರ ಮೂಲಕ ಮಕ್ಕಳಲ್ಲಿ ಅಂದವಾದ ಕೈಬರಹದ ಕೌಶಲವನ್ನು ಹೆಚ್ಚಿಸಬಹುದು. ಬರವಣಿಗೆಯು ಮಾನವನ ಪ್ರತಿಯೊಂದು ಹಂತದಲ್ಲಿ ಅದ್ಭುತವಾದ ಪರಿಣಾಮವನ್ನು ಬೀರುತ್ತದೆ. ಉತ್ತಮ ಕೈಬರಹ ಉನ್ನತವಾದ ಅಂಕ ಗಳಿಸುವಲ್ಲಿ ಅತ್ಯಂತ ಸಹಕಾರಿಯಾಗಿದೆ. ಸುಂದರವಾಗಿ ಅಕ್ಷರಗಳನ್ನು ಪದ , ವಾಕ್ಯ ರೂಪದಲ್ಲಿ ತಪ್ಪಿಲ್ಲದೆ ಸ್ಪಷ್ಟವಾಗಿ ಬರೆದಾಗ ನೋಡುಗನಿಗೂ ಅತ್ಯಂತ ಸಂತೋಷವಾಗುತ್ತದೆ.

ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮವಾದ ಕೈಬರಹವನ್ನು ರೂಢಿಸಿಕೊಂಡು ಬರವಣಿಗೆಯ ಕೌಶಲ್ಯವನ್ನು ಅಭಿವೃದ್ಧಿಪಡಿಸಿ ಕೊಳ್ಳಬೇಕೆಂಬುದೇ ನಮ್ಮ ಆಶಯವಾಗಿದೆ.

✍️

ಇತ್ತೀಚಿನ ಸುದ್ದಿ

ಜಾಹೀರಾತು