6:15 PM Sunday6 - October 2024
ಬ್ರೇಕಿಂಗ್ ನ್ಯೂಸ್
ಮಾಜಿ ಶಾಸಕರ ಸಹೋದರ ದಿಢೀರ್ ನಾಪತ್ತೆ; ಕೂಳೂರು ಸೇತುವೆಯಲ್ಲಿ ಕಾರು ಪತ್ತೆ; ಆತ್ಮಹತ್ಯೆ… ಮಂಗಳೂರು-ಪೊಳಲಿಗೆ ಬೆಂಜನಪದವು- ಕಲ್ಪನೆ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ಆರಂಭ ಕೋಲಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಕ್ಟೋಬರ್ 7 ರಿಂದ ಇ-ಖಾತಾ ಲಭ್ಯ ಬೆಂಗಳೂರು: ಹೃದಯವಾಹಿನಿ ರಜತ ಮಹೋತ್ಸವ, ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನ ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಕೊಟ್ಟಿಗೆಹಾರ ಭೇಟಿ: ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ… ಕೊಟ್ಟಿಗೆಹಾರ: ಗಾಂಧಿ ಜಯಂತಿಯಂದು ಮಾಂಸ ಮಾರಾಟ; ನಿಯಮ ಉಲ್ಲಂಘಿಸಿದ ಮಾರಾಟಗಾರರು ಗಾಂಧೀಜಿ ಚಿಂತನೆಗಳು ಎಲ್ಲಾ ಪತ್ರಕರ್ತರಿಗೆ ಎಂದೆಂದಿಗೂ ಮಾರ್ಗದರ್ಶಿ: ಮಂಗಳೂರು ಬಿಷಪ್ ಡಾ. ಪೀಟರ್… ಸಾಲ ಕೇಳ್ತಾ ಇಲ್ಲ, ಕೆಲಸ ಮಾಡಿದ್ದಕ್ಕೆ ನ್ಯಾಯ ಕೊಡಿ: ಪ್ರತಿಭಟನಾ ಸಭೆಯಲ್ಲಿ ರಾಜ್ಯ… ಈಚರ್ ಲಾರಿ – ಬೈಕ್ ಮಧ್ಯೆ ಭೀಕರ ಅಪಘಾತ: ಮೂವರು ಮಕ್ಕಳು ಸಹಿತ… ಬೈಕ್ ಗೆ ಗುದ್ದಿದ ಕಾಡುಕೋಣ: ರಸ್ತೆಗೆ ಬಿದ್ದು ಸವಾರನಿಗೆ ಗಾಯ

ಇತ್ತೀಚಿನ ಸುದ್ದಿ

ಮಂಗಳೂರು: ಪಾಲ್ದನೆ ಚರ್ಚ್ ನಲ್ಲಿ ಸಂತ ವಿನ್ಸೆಂಟ್‌ ಪಾವ್ಲ್‌ ಸಭಾ ವಾರ್ಷಿಕ ಹಬ್ಬ

29/09/2024, 19:46

ಮಂಗಳೂರು(reporterkarnataka.com): ಪಾಲ್ದನೆ ಸಂತ ತೆರೆಸಾ ಚರ್ಚಿನ ಸಂತ ವಿನ್ಸೆಂಟ್‌ ಪಾವ್ಲ್‌ ಸಭಾ ಇದರ ವಾರ್ಷಿಕ ಹಬ್ಬವನ್ನು ಭಾನುವಾರ ಆಚರಿಸಲಾಯಿತು. ಪ್ರಾರಂಭದಲ್ಲಿ ಬಲಿಪೂಜೆಯನ್ನು ಚರ್ಚಿನ ಪ್ರಧಾನ ಧರ್ಮಗುರು ಫಾ. ಅಲ್ಬನ್‌ ಡಿ’ಸೋಜಾ ಅವರು ನೆರವೇರಿಸಿದರು. ಸಂತ ವಿನ್ಸೆಂಟ್‌ ಪಾವ್ಲ್‌ ಸಭಾ ಸಂಘಟನೆಯ ಕಾರ್ಯಕರ್ತರು ಭಕ್ತ ಜನರಿಂದ ದೇಣಿಗೆ ಸಂಗ್ರಹಿಸಿ ಚರ್ಚಿನ ಬಡ ಕುಟುಂಬಗಳಿಗೆ ಮನೆ ದುರಸ್ತಿ, ಮಕ್ಕಳ ಶಿಕ್ಷಣ, ವೈದ್ಯಕೀಯ ನೆರವು ಇತ್ಯಾದಿ ಸೇವಾ ಕಾರ್ಯಗಳನ್ನು ನಿಸ್ವಾರ್ಥ ಮನೋಭಾವದಿಂದ ಕಾಳಜಿ ವಹಿಸಿ ನಿರ್ವಹಿಸುತ್ತಾರೆ ಎಂದವರು ಅಭಿನಂದಿಸಿದರು.
ಬಲಿಪೂಜೆಯಲ್ಲಿ ಫಾ. ಅಶೋಕ್‌ ಡಿ’ಸೋಜಾ, ಸಂತ ವಿನ್ಸೆಂಟ್‌ ಪಾವ್ಲ್‌ ಸಭಾ ಅಧ್ಯಕ್ಷ ಜೊಸ್ಲಿನ್‌ ಲೋಬೊ, ಉಪಾಧ್ಯಕ್ಷೆ ಲಿಝಿ ಫೆರ್ನಾಂಡಿಸ್‌, ಕಾರ್ಯದರ್ಶಿ ಆಗ್ನೆಸ್‌ ಡಿ’ಸಿಲ್ವಾ, ಖಜಾಚಿ ಪಾಸ್ಕಲ್‌ ಮೊಂತೇರೊ, ಸದಸ್ಯರಾದ ಚಾರ್ಲ್ಸ್ ಪಿಂಟೊ, ಫೆಲಿಕ್ಸ್‌ ಕ್ಯಾಸ್ತಲಿನೊ, ವಿನ್ಸೆಂಟ್‌ ಪಿಂಟೊ, ಬೆನೆಡಿಕ್ಟಾ ಡಿ’ಕುನ್ಹಾ, ರಿಚಾರ್ಡ್ ಫೆರ್ನಾಂಡಿಸ್‌ ಹಾಗೂ ಚರ್ಚಿನ ಉಪಾಧ್ಯಕ್ಷ ಎಲಿಯಾಸ್‌ ಫೆರ್ನಾಂಡಿಸ್‌ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು