ಇತ್ತೀಚಿನ ಸುದ್ದಿ
ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ
16/02/2026, 23:16
ಬೆಳ್ತಂಗಡಿ(reporterkarnataka.com): ಕಣಿಯೂರು ಗ್ರಾಮದ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಮಾರ್ಚ್ 1ರಿಂದ 6 ರವರೆಗೆ ನಡೆಯಲಿದ್ದು, ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಗುರುವಾರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಚಿದಾನಂದ ರಾವ್ ಕೊಲ್ಲಾಜೆ (ಅನುವಂಶಿಯ ಮೊಕ್ತೇಸರರು), ಸದಾನಂದ ಮೇಲಾಂಟಾ ಮೊಗರೋಡಿ (ಅಧ್ಯಕ್ಷರು ಆಡಳಿತ ಮಂಡಳಿ),ಜಿತೇಶ್ ಜೈನ್ ಅಡೆಂಜ(ಕಾರ್ಯದರ್ಶಿ ಆಡಳಿತ ಮಂಡಳಿ),ರಘುಪತಿ ಭಟ್ ಅನಾಬೆ(ಕಾರ್ಯದರ್ಶಿ ಬ್ರಹ್ಮಕಲಶೋತ್ಸವ ಸಮಿತಿ), ಶಿವಶಂಕರ್ ನಾಯಕ್ ಮಾರುತಿಪುರ (ಅಧ್ಯಕ್ಷರು,ಜೀರ್ಣೋದ್ದಾರ ಸಮಿತಿ), ಪ್ರಫುಲ್ಲಚಂದ್ರ ಅಡ್ಯಂತಾಯ ಮೊಗರೋಡಿ (ಕಾರ್ಯದರ್ಶಿ, ಜೀರ್ಣೋದ್ದಾರ ಸಮಿತಿ), ನಾರಾಯಣ ಗೌಡ ಮುಚ್ಚೂರು (ಕಾರ್ಯಧ್ಯಕ್ಷರು, ಬ್ರಹ್ಮ ಕಲಶೋತ್ಸವ ಸಮಿತಿ), ವಿಠ್ಠಲ ಶೆಟ್ಟಿ ಕೊಲ್ಲೊಟ್ಟು (ಅಧ್ಯಕ್ಷರು, ಬ್ರಹ್ಮ ಕಲಶೋತ್ಸವ ಸಮಿತಿ), ದಿನೇಶ್ ಶೆಟ್ಟಿ ಮಲೆಂಗಲ್ಲು (ಪ್ರಧಾನ ಕಾರ್ಯದರ್ಶಿ, ಬ್ರಹ್ಮ ಕಲಶೋತ್ಸವ ಸಮಿತಿ) ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.












