ಇತ್ತೀಚಿನ ಸುದ್ದಿ
ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ
03/10/2025, 14:14

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmai.com
ಕಳೆದ ರಾತ್ರಿ ಮಂಜಿನನಗರಿ ಮಡಿಕೇರಿಯಲ್ಲಿ ದೈವ ಲೋಕ ಸೃಷ್ಟಿಮಾಡಿದ್ದ ದಶಮoಟಪಗಳು ನಗರ ಪ್ರದಕ್ಷಿಣೆ ಜೊತೆ ಪ್ರದರ್ಶನ ಮುಗಿಸಿದ್ದು ಸ್ವಸ್ಥಾನಕ್ಕೆ ಮರಳಿದೆ. ನಿಗದಿತ ಸ್ಥಳದಲ್ಲಿ ನೀಡಿದ ಪ್ರದರ್ಶನ ಅನುಗುಣವಾಗಿ ದಶಮoಟಪಗಳ ಸಮಿತಿಯ ತೀರ್ಪುಗಾರರು ಅಂತಿಮ ವಿಜೇತರ ಪಟ್ಟಿ ಬಿಡುಗಡೆ ಗೊಳಿಸಿದೆ.
ಶ್ರೀ ಕೋಟೆ ಗಣಪತಿ ದೇವಾಲಯ, ಶ್ರೀ ಕೋಟೆ ಮಾರಿಯಮ್ಮ ದೇವಾಲಯಗಳಿಗೆ ಸಮವಾಗಿ ಪ್ರಥಮ ಸ್ಥಾನ. ಶ್ರೀ ಕಂಚಿ ಕಾಮಾಕ್ಷಿ ದೇವಾಲಯಕ್ಕೆ ದ್ವಿತೀಯ ಹಾಗೂ ಶ್ರೀ ದಂಡಿನ ಮಾರಿಯಾಮ್ಮ ದೇವಾಲಯಕ್ಕೆ ತೃತೀಯ ಸ್ಥಾನ ನೀಡಲಾಗಿದೆ. ಗಾಂಧಿ ಮೈದಾನ ವೇದಿಕೆಯಲ್ಲಿ ಅಂತಿಮ ತೀರ್ಪು ಪ್ರಕಾತಿಸುತ್ತಿದ್ದಂತೆ ಆಯಾ ದೇವಾಲಯ ಸಮಿತಿಯವರು ಅಂಕ ನೀಡಿದರಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಅಸಮಾಧಾನ ಹೊರಹಾಕಿ ಪ್ರಮಾಣ ಪತ್ರಗಳ್ಳನ್ನು ಬಿಸಾಕಿ ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ಮಾಡುವ ಅನಿವಾರ್ಯ ಎದುರಾಗಿತ್ತು.