ಇತ್ತೀಚಿನ ಸುದ್ದಿ
ಮಾತಾ ಅಮೃತಾನಂದಮಯಿ ಮಠಕ್ಕೆ ಮಿಜೋರಂ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್ ಭೇಟಿ
13/12/2022, 16:15

ಮಂಗಳೂರು(reporter Karnataka.com): ಮಾತಾ ಅಮೃತಾನಂದಮಯಿ ಮಠಕ್ಕೆ ಮಿಜೋರಂ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್ ಭೇಟಿ ನೀಡಿದರು.
ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷರಾದ ಡಾ.ವಸಂತ ಕುಮಾರ್ ಪೆರ್ಲ ಸ್ವಾಗತಿಸಿದರು. ಮಠದಲ್ಲಿ ಪ್ರತಿ ಭಾನುವಾರ ಸಂಜೆ ನಡೆಯುವ ಶ್ರೀ ಗುರು ಪಾದುಕಾಪೂಜೆ, ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮಠಾಧಿಪತಿಗಳಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣರವರು ಮಠದ ವತಿಯಿಂದ ಸನ್ಮಾನಿಸಿದರು. ಅವರು ಮಾತನಾಡಿ ತಮ್ಮ ಜೀವನದಲ್ಲಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಅನುಗ್ರಹದಿಂದ ಉಂಟಾದ ಸಕಾರಾತ್ಮಕ ಪರಿವರ್ತನೆ ಹಾಗೂ ಅಮ್ಮನವರ ವಿಶ್ವ ವ್ಯಾಪಕವಾದ ಸೇವಾ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅದು ನಮ್ಮ ಅಭಿವೃದ್ಧಿಯಲ್ಲಿ ಮಹತ್ತರವಾದ ಪ್ರೇರಣೆಯಾಗಿದೆ ಎಂದರು.
ಮಂಗಳೂರಿನ ಶ್ರೀ ಬ್ರಹ್ಮಸ್ಥಾನ ಕ್ಷೇತ್ರಕ್ಕೂ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಅಮೃತ ವಿದ್ಯಾಲಯದ ಕ್ಯಾಂಪಸ್ ಡೈರೆಕ್ಟರ್ ಯತೀಶ್ ಬೈಕಂಪಾಡಿ, ಕರ್ನಾಟಕ ಸೆಕ್ಯೂರಿಟೀಸ್ ನ ಅಶೋಕನ್, ರಾಜನ್, ಸುಗುಣನ್, ಡಾ.ದೇವದಾಸ್, ಪ್ರಕಾಶ್ ಠಕ್ಕರ್,ಪ್ರವೀಣ್ ಶಬರೀಶ್ ಮೊದಲಾದವರು ಉಪಸ್ಥಿತರಿದ್ದರು.