9:34 AM Wednesday5 - November 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ Chikkamagaluru | ಶೃಂಗೇರಿ: ನರಹಂತಕ ಕಾಡಾನೆ ಕೊನೆಗೂ ಸೆರೆ; ಸಾಕಾನೆಯ ಮೂಲಕ ಕಾರ್ಯಾಚರಣೆ Mysore | ಅಸಮಾನತೆ ನಿವಾರಣೆ ಪ್ರತಿಯೊಬ್ಬ ರಾಜಕಾರಣಿಯ ಜವಾಬ್ದಾರಿ: ಸಿಎಂ ಸಿದ್ದರಾಮಯ್ಯ ನವಕಲಬುರಗಿ ನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ದ, ಲೀಪ್ ಯೋಜನೆಯ ಅಡಿಯಲ್ಲಿ ಅಭಿವೃದ್ದಿಗೆ ಒತ್ತು:… ಡಿಜಿಟಲ್ ಅರೆಸ್ಟ್ ಮೂಲಕ ಹಣ ವರ್ಗಾವಣೆಯಾಗದಂತೆ ತಡೆದ ಪೊಲೀಸರು: ಮಂಗಳೂರು ಪೊಲೀಸರ ಕಾರ್ಯಕ್ಕೆ…

ಇತ್ತೀಚಿನ ಸುದ್ದಿ

ಲಾಕ್ ಡೌನ್ ನಿಯಮ ಪಾಲಿಸಿ ಊರಿನವರಿಂದಲೇ ಶಾಲೆ ಕಟ್ಟಡ ದುರಸ್ತಿ; ದ.ಕ. ಜಿಲ್ಲೆಯಲ್ಲೇ ಅಪರೂಪದ ಘಟನೆ !!

23/05/2021, 11:52

ಅನುಷ್ ಪಂಡಿತ್ ಮಂಗಳೂರು

Info.reporterkarnataka@gmail.com

ದೇಶದಾದ್ಯಂತ ಕೊರೊನಾ ತಂದ ಸಂಕಷ್ಟ ಅಷ್ಟಿಷ್ಟಲ್ಲ… ಜನರು  ಕೊರೊನಾ ಅಲೆಗೆ ತತ್ತರಿಸಿ ಹೋಗಿದ್ದಾರೆ. ಉದ್ಯೋಗಸ್ಥ ಲಾಕ್ ಡೌನ್ ನಿಂದ ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಶಾಲಾ ಕಾಲೇಜು ಮಕ್ಕಳು ಆನ್ಲೈನ್ ಶಿಕ್ಷಣದ ಮೊರೆ ಹೋಗಿರುವುದು ಅನಿವಾರ್ಯ. ಅದರಂತೆ ಎಲ್ಲವೂ ಯಥಾಸ್ಥಿತಿ ತಲುಪಿದ ಮೇಲೆ ಶಾಲೆ ತೆರೆಯಬೇಕು. ಮಕ್ಕಳು ಕಲಿತು ದೇಶದ ಉಜ್ವಲ ಭವಿಷ್ಯ ರೂಪಿಸಬೇಕು. 


ಇದಕ್ಕೆ ಪುಷ್ಟಿ ಕೊಡುವಂತೆ ದ. ಕ ಜಿಲ್ಲೆ ಯ ಪುತ್ತೂರು ತಾಲೂಕಿನ ಕುಂಜೂರು ಪಂಜ ಶಾಲೆ ಮಾದರಿಯಾಗಿದೆ.


ಊರಿನ ಕೆಲ ನಾಗರಿಕರು ಹಾಗೂ ಶಾಲೆಯ ಹಳೆಯ ವಿದ್ಯಾಥಿಗಳು ಇಂತಹದೊಂದು ಕಾರ್ಯಕ್ಕೆ ಮುಂದಾಗಿದ್ದಾರೆ ಎಂದರೆ ತಪ್ಪಾಗಲಾರದು. ಅದೇನೆಂದರೆ ಲಾಕ್ಡೌನ್ ನಲ್ಲಿ ಮನೆಯಲ್ಲಿ ಕುಳಿತು ಕಾಲ ಹರಣ ಮಾಡುವ ಬದಲು ಕೋವಿಡ್ ನಿಯಮ ಪಾಲಿಸಿ ಮಾಸ್ಕ್ ಧರಿಸಿ ಫೀಲ್ಡಿಗಿಳಿದಿದ್ದಾರೆ.


ಇಲ್ಲಿನ 70 ವರ್ಷ ಹಳೆಯದಾದ ಸರಕಾರಿ ಶಾಲೆಯು  ಗಾಳಿ ಮಳೆಗೆ ಸೋರುತ್ತದೆ. ಶಾಲಾ ಕೊಠಡಿಯಲೊಳಗೆ ನೀರು ಸೋರುತ್ತದೆ. ಇದನ್ನು ಮನಗಂಡ ಶಿಕ್ಷಣ ಪ್ರೇಮಿಗಳು ಮಕ್ಕಳ ಮುಂದಿನ ಕಲಿಕೆ ಅವಧಿಗೆ ಯಥಾಸ್ಥಿತಿಗೆ ತರಲು ಆಡಳಿತ ಮಂಡಳಿ ಹಾಗೂ ಹಳೆಯ ವಿದ್ಯಾಥಿಗಳು, ಊರಿನ ನಾಗರಿಕರೊಂದಿಗೆ ಸೇರಿಕೊಂಡು, ಊರ ನಾಗರೀಕರ, ಹಳೆ ವಿದ್ಯಾರ್ಥಿಗಳ ದೇಣಿಗೆ ಹಣದಲ್ಲಿ ದುರಸ್ತಿ ಕಾರ್ಯಾದಲ್ಲಿ ತೊಡಗಿದ್ದಾರೆ. ನಾವು ಕಲಿತ ಶಾಲೆ ಅಭಿಮಾನ ಮರೆಯದೆ ಮುಂದಿನ ಪೀಳಿಗೆ ಒಳ್ಳೆಯ ಶಿಕ್ಷಣ ಪಡೆಯಬೇಕೆಂಬ ದೃಷ್ಟಿಯಿಂದ ಇಂತಹ ಮಹತ್ವದ ಕಾರ್ಯದಲ್ಲಿ ತೊಡಗಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯಾಗಿದೆ.
ಇಂತಹ ಕಾರ್ಯಕ್ಕೆ ಜನಪ್ರತಿನಿಧಿಗಳು, ಸಹಾಯ ಹಸ್ತ ನೀಡಲಿ ಎನ್ನುವುದು ಆಶಯ.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಅನುದಾನ ನೀಡುವ ಭರವಸೆ ನೀಡಿದೆ. ಹಾಗೂ ಕರ್ನಾಟಕ ಬ್ಯಾಂಕ್ ತನ್ನ ಸಿ ಎಸ್ ಆರ್ ಯೋಜನೆಯಡಿ ಅನುದಾನ ಕೊಡುತ್ತೇವೆ ಎಂದು ಹೇಳಿದ್ದಾರೆ. ಶಾಸಕರು ಕೂಡ ಭರವಸೆ ನೀಡಿದ್ದಾರೆ ಆದರೆ ಯಾವುದೇ ಅನುದಾನ ಸರಕಾರ ದಿಂದ ಈವರೆಗೆ ಬಂದಿಲ್ಲ.

ಲೋಕೇಶ್ ಬಲ್ಯಾಯ,ಹಳೆ ವಿದ್ಯಾರ್ಥಿ ದೊಡ್ಡಡ್ಕ

ಇತ್ತೀಚಿನ ಸುದ್ದಿ

ಜಾಹೀರಾತು