1:41 AM Thursday20 - November 2025
ಬ್ರೇಕಿಂಗ್ ನ್ಯೂಸ್
ಡಿ. 6ರಂದು ಹಾಸನಕ್ಕೆ ಸಿಎಂ ಭೇಟಿ: ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ… Bangalore | ನಾಯಿ ದಾಳಿಯಿಂದ ಸಾವನ್ನಪ್ಪಿದವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ.… ಕಲಾ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಜತೆಗೆ ಸಾಹಿತಿ ಯು.ಆರ್. ಅನಂತಮೂರ್ತಿ, ಕವಿ ಡಾ.… ಬಿಜೆಪಿಯಿಂದ ಭೀಮ ಸ್ಮರಣೆ ಕಾರ್ಯಕ್ರಮ; ಕಾಂಗ್ರೆಸ್‌ ಮಾಡಿದ ಅನ್ಯಾಯದ ಕುರಿತು ಜಾಗೃತಿ: ಪ್ರತಿಪಕ್ಷ… ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ತಾಣ ಕರ್ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಚಾಲಕನ ಅಜಾಗರೂಕತೆ: ವಿದ್ಯಾರ್ಥಿಗಳಿಂದ ತುಂಬಿದ್ದ ಕೇರಳ ಮೂಲದ ಪ್ರವಾಸಿ ಬಸ್ ಪಲ್ಟಿ ಕೊಡಗಿನ ಪ್ರಮುಖ ಹಬ್ಬ ಪುತ್ತರಿಗೆ ದಿನಾಂಕ ನಿಗದಿ: ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ… ಕೊಡಗಿನಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿ ಹಾವಳಿ ತಡೆಗೆ ಜಿಲ್ಲಾಡಳಿತ ಕ್ರಮ: ಶ್ವಾನಗಳ ಸ್ಥಳಾಂತರಕ್ಕಾಗಿ… Mandya | ಶಿವನಸಮುದ್ರ: 4 ದಿನಗಳಿಂದ ನಾಲೆಯಲ್ಲಿ ಸಿಲುಕಿದ್ದ ಮರಿಯಾನೆಯ ರಕ್ಷಣೆ

ಇತ್ತೀಚಿನ ಸುದ್ದಿ

ಲೇಡಿಗೋಶನ್ ಆಸ್ಪತ್ರೆಯಲ್ಲಿ ಗುಟುಕು ನೀರಿಲ್ಲ!: ಬಾಣಂತಿ-ಮಕ್ಕಳ ಪರದಾಟ; ಅಚಾನಕ್ ಸಮಸ್ಯೆ ಎನ್ನುತ್ತಾರೆ ಶಾಸಕರು

08/08/2021, 20:14

ಮಂಗಳೂರು(reporterkarnataka.com): ಶತಮಾನದ ಇತಿಹಾಸವಿರುವ ಜೆಲ್ಲೆಯ ಹೆರಿಗೆ ಆಸ್ಪತ್ರೆಯಾದ ಮಂಗಳೂರು ಲೇಡಿಗೋಶನ್ ಆಸ್ಪತ್ರೆ ನೀರಿನ ಸಮಸ್ಯೆಯಿಂದ ತತ್ತರಿಸಿ ಹೋಗಿದೆ. ನೀರಿಲ್ಲದೆ 100ಕ್ಕೂ ಹೆಚ್ಚು ಬಾಣಂತಿಯರು ಹಾಗೂ ನವಜಾತ ಶಿಶುಗಳು ತೊಂದರೆಗೀಡಾಗಿದ್ದಾರೆ.

ಲೇಡಿಗೋಶನ್ ಆಸ್ಪತ್ರೆಗೆ ಜಿಲ್ಲೆಯ ವಿವಿಧ ಕಡೆಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ಹೆರಿಗೆಗಾಗಿ ಆಗಮಿಸುತ್ತಾರೆ. ಇತರ ಕಾಯಿಲೆಗಳ ಚಿಕಿತ್ಸೆಗೂ ಮಹಿಳೆಯರು ಇಲ್ಲಿ ದಾಖಲಾಗುತ್ತಾರೆ. ಪ್ರಸ್ತುತ 100ಕ್ಕೂ ಅಧಿಕ ಬಾಣಂತಿಯರು ಹಾಗೂ ಅವರ ನವಜಾತ ಶಿಶುಗಳು ಆರೈಕೆ ಪಡೆಯುತ್ತಿದೆ. ಇತರ ಕಾಯಿಲೆಗಳ ಚಿಕಿತ್ಸೆಗೆ ಬಂದವರು ಸೇರಿ 250ಕ್ಕೂ ಹೆಚ್ಚು ಮಹಿಳೆಯರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆ ಹೆರಿಗೆಗೆ ದಾಖಲಾದ ಗರ್ಭಿಣಿಯರು ಇದ್ದಾರೆ. ಆದರೆ ಏನೂ ಮಾಡುವುದು ಮನುಷ್ಯರ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿರುವ ನೀರು ಸರಬರಾಜು ನಿಂತು ಹೋಗಿದೆ. ಕಾರಣ ಏನೆಂದರೆ ಲೇಡಿಗೋಶನ್ ಆಸ್ಪತ್ರೆಯ ಓವರ್ ಹೆಡ್ ಟ್ಯಾಂಕ್ ಗೆ ನೀರು ಲಿಫ್ಟ್ ಮಾಡುವ  ಪಂಪ್ ಹಾಳಾಗಿದೆ. ಹಾಗಾದರೆ ಇಷ್ಟೊಂದು ದೊಡ್ಡ ಆಸ್ಪತ್ರೆಗೆ ಸ್ಟಾಂಡ್ ಬೈ ಪಂಪಿನ ವ್ಯವಸ್ಥೆ ಇಲ್ಲವೇ ಎಂದು ನೀವು ಯೋಚಿಸಬಹುದು. ಪರ್ಯಾಯ ಪಂಪ್ ಸೆಟ್ ನ ವ್ಯವಸ್ಥೆಯೂ ಇದೆ. ಆದರೆ ಅದು ಕೂಡ ಈ ಮುನ್ನವೇ ಕೆಟ್ಟು ಹೋಗಿದೆ. ಅದನ್ನು ಇನ್ನೂ ದುರಸ್ತಿ ಮಾಡಿಲ್ಲ. ಈಗ ಇನ್ನೊಂದು ಪಂಪ್ ಸೆಟ್ ಕೂಡ ಕೆಟ್ಟು ಹೋಗಿದೆ. ಇದಕ್ಕೆಲ್ಲ ಲೇಡಿಗೋಶನ್ ಆಸ್ಪತ್ರೆ ಆಡಳಿತ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯ ವೇ ಕಾರಣವಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ.

ಇದೊಂದು ಅಚಾನಕ್ ಆಗಿರುವ ಸಮಸ್ಯೆ. ಇದರ ಬಗ್ಗೆ ರಾಜಕೀಯ ಬೇಡ. ಹೊಸ ಪಂಪ್ ಅಳವಡಿಸಲಾಗುವುದು ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದ್ದಾರೆ.

ಪಂಪ್ ಸೆಟ್ ಕೆಟ್ಟು ಹೋಗಿದೆ. ವೀಕೆಂಡ್ ಲಾಕ್ ಡೌನ್ ನಿಂದ ಅಂಗಡಿಗಳು ಮುಚ್ಚಿರುವುದರಿಂದ ಪಂಪ್ ಸೆಟ್ ನ ಬಿಡಿಭಾಗ ಸಿಗಲಿಲ್ಲ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು