7:31 AM Thursday19 - September 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ: ಸರ್ವಧರ್ಮ ಸಮನ್ವಯತೆಯಲ್ಲಿ ಸಂಭ್ರಮ- ಸಡಗರದ ಈದ್ ಮಿಲಾದ್ ಆಚರಣೆ ನಂಜನಗೂಡು: ಮುನಿರತ್ನ ವಿರುದ್ಧ ಜನ ಸಂಗ್ರಾಮ ಪರಿಷತ್ ಪ್ರತಿಭಟನೆ: ಶಾಸಕ ಸ್ಥಾನದಿಂದ ವಜಾಗೊಳಿಸಲು… ಜೈಪುರದಲ್ಲಿ ಇಂಡಿಯನ್ ಯೂತ್ ಪಾಲಿ೯ಮೆಂಟ್ 27ನೇ ಅಧಿವೇಶನ: ಸ್ಪೀಕರ್ ಖಾದರ್ ಉದ್ಘಾಟನೆ ನಮ್ಮ‌ ಶಾಲೆ‌ ನಮ್ಮ‌ ಜವಾಬ್ದಾರಿ ಕಾರ್ಯಕ್ರಮ ಸರಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕೆ… ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಭಾರೀ ಫೈಟ್: ಮಹಿಳಾ ಅಭ್ಯರ್ಥಿಯಿಂದ ಪ್ರಬಲ ಪೈಪೋಟಿ ಮಹಿಳಾ ಆಯೋಗದ ಅಧ್ಯಕ್ಷೆ ಬಂದ್ರೂ ಅಧಿಕಾರಿಗಳು ನಾಪತ್ತೆ: ರಾಯಲ್ಪಾಡು ಪ್ರಾಥಮಿಕ ಆರೋಗ್ಯ ಕೇಂದ್ರ,… ಅಥಣಿ: ಶೌಚಕ್ಕೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ದಾರುಣ… ನಂಜನಗೂಡು: ಭಗೀರಥ ಹಾಗೂ ಕನಕ ಸಮುದಾಯ ಭವನಕ್ಕೆ ಶಾಸಕರಿಂದ ಭೂಮಿ ಪೂಜೆ ಮಂಗಳೂರು: ಸಾಕು ನಾಯಿಯ ತ್ಯಾಜ್ಯ ಸಂಗ್ರಹಿಸುವ ವಾಹನಕ್ಕೆ ನೀಡಿದ ಪಾಪಿಗಳು; ವೀಡಿಯೊ ವೈರಲ್… ವೈದ್ಯರ ಮೇಲೆ ಹಲ್ಲೆ ಪ್ರಕರಣ: ಚಿಕ್ಕಮಗಳೂರು ನಗರ ಠಾಣೆ ಎದುರು ಆರೋಗ್ಯ ಸಿಬ್ಬಂದಿಗಳ…

ಇತ್ತೀಚಿನ ಸುದ್ದಿ

ಲೇಡಿಗೋಶನ್ ಆಸ್ಪತ್ರೆಯಲ್ಲಿ ಗುಟುಕು ನೀರಿಲ್ಲ!: ಬಾಣಂತಿ-ಮಕ್ಕಳ ಪರದಾಟ; ಅಚಾನಕ್ ಸಮಸ್ಯೆ ಎನ್ನುತ್ತಾರೆ ಶಾಸಕರು

08/08/2021, 20:14

ಮಂಗಳೂರು(reporterkarnataka.com): ಶತಮಾನದ ಇತಿಹಾಸವಿರುವ ಜೆಲ್ಲೆಯ ಹೆರಿಗೆ ಆಸ್ಪತ್ರೆಯಾದ ಮಂಗಳೂರು ಲೇಡಿಗೋಶನ್ ಆಸ್ಪತ್ರೆ ನೀರಿನ ಸಮಸ್ಯೆಯಿಂದ ತತ್ತರಿಸಿ ಹೋಗಿದೆ. ನೀರಿಲ್ಲದೆ 100ಕ್ಕೂ ಹೆಚ್ಚು ಬಾಣಂತಿಯರು ಹಾಗೂ ನವಜಾತ ಶಿಶುಗಳು ತೊಂದರೆಗೀಡಾಗಿದ್ದಾರೆ.

ಲೇಡಿಗೋಶನ್ ಆಸ್ಪತ್ರೆಗೆ ಜಿಲ್ಲೆಯ ವಿವಿಧ ಕಡೆಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ಹೆರಿಗೆಗಾಗಿ ಆಗಮಿಸುತ್ತಾರೆ. ಇತರ ಕಾಯಿಲೆಗಳ ಚಿಕಿತ್ಸೆಗೂ ಮಹಿಳೆಯರು ಇಲ್ಲಿ ದಾಖಲಾಗುತ್ತಾರೆ. ಪ್ರಸ್ತುತ 100ಕ್ಕೂ ಅಧಿಕ ಬಾಣಂತಿಯರು ಹಾಗೂ ಅವರ ನವಜಾತ ಶಿಶುಗಳು ಆರೈಕೆ ಪಡೆಯುತ್ತಿದೆ. ಇತರ ಕಾಯಿಲೆಗಳ ಚಿಕಿತ್ಸೆಗೆ ಬಂದವರು ಸೇರಿ 250ಕ್ಕೂ ಹೆಚ್ಚು ಮಹಿಳೆಯರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆ ಹೆರಿಗೆಗೆ ದಾಖಲಾದ ಗರ್ಭಿಣಿಯರು ಇದ್ದಾರೆ. ಆದರೆ ಏನೂ ಮಾಡುವುದು ಮನುಷ್ಯರ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿರುವ ನೀರು ಸರಬರಾಜು ನಿಂತು ಹೋಗಿದೆ. ಕಾರಣ ಏನೆಂದರೆ ಲೇಡಿಗೋಶನ್ ಆಸ್ಪತ್ರೆಯ ಓವರ್ ಹೆಡ್ ಟ್ಯಾಂಕ್ ಗೆ ನೀರು ಲಿಫ್ಟ್ ಮಾಡುವ  ಪಂಪ್ ಹಾಳಾಗಿದೆ. ಹಾಗಾದರೆ ಇಷ್ಟೊಂದು ದೊಡ್ಡ ಆಸ್ಪತ್ರೆಗೆ ಸ್ಟಾಂಡ್ ಬೈ ಪಂಪಿನ ವ್ಯವಸ್ಥೆ ಇಲ್ಲವೇ ಎಂದು ನೀವು ಯೋಚಿಸಬಹುದು. ಪರ್ಯಾಯ ಪಂಪ್ ಸೆಟ್ ನ ವ್ಯವಸ್ಥೆಯೂ ಇದೆ. ಆದರೆ ಅದು ಕೂಡ ಈ ಮುನ್ನವೇ ಕೆಟ್ಟು ಹೋಗಿದೆ. ಅದನ್ನು ಇನ್ನೂ ದುರಸ್ತಿ ಮಾಡಿಲ್ಲ. ಈಗ ಇನ್ನೊಂದು ಪಂಪ್ ಸೆಟ್ ಕೂಡ ಕೆಟ್ಟು ಹೋಗಿದೆ. ಇದಕ್ಕೆಲ್ಲ ಲೇಡಿಗೋಶನ್ ಆಸ್ಪತ್ರೆ ಆಡಳಿತ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯ ವೇ ಕಾರಣವಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ.

ಇದೊಂದು ಅಚಾನಕ್ ಆಗಿರುವ ಸಮಸ್ಯೆ. ಇದರ ಬಗ್ಗೆ ರಾಜಕೀಯ ಬೇಡ. ಹೊಸ ಪಂಪ್ ಅಳವಡಿಸಲಾಗುವುದು ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದ್ದಾರೆ.

ಪಂಪ್ ಸೆಟ್ ಕೆಟ್ಟು ಹೋಗಿದೆ. ವೀಕೆಂಡ್ ಲಾಕ್ ಡೌನ್ ನಿಂದ ಅಂಗಡಿಗಳು ಮುಚ್ಚಿರುವುದರಿಂದ ಪಂಪ್ ಸೆಟ್ ನ ಬಿಡಿಭಾಗ ಸಿಗಲಿಲ್ಲ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು