2:27 AM Wednesday4 - March 2026
ಬ್ರೇಕಿಂಗ್ ನ್ಯೂಸ್
ದನದ ಅವಶೇಷ ಪತ್ತೆ: ಕೊಪ್ಪ-ತೀರ್ಥಹಳ್ಳಿ ರಾಷ್ಟಿಯ ಹೆದ್ದಾರಿ ತಡೆದು ಭಜರಂಗ ದಳ ಕಾರ್ಯಕರ್ತರ… ಡಿಕೆಶಿ ಮೇಲೆ ಕಣ್ಗಾವಲು | ಎಚ್ ಡಿಕೆ, ಆರ್. ಅಶೋಕ್ ಹೇಳಿಕೆ ‘’ತಾ… ಚೆನ್ನೈ ವಿಶೇಷ ಸಮಾವೇಶದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್: ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಕುರಿತು… ಚೆನ್ನಪಟ್ಟಣ | ಕೊಡಗಿನ ಸಾಕಾನೆಗಳ ಯಶಸ್ವಿ ಕಾರ್ಯಾಚರಣೆ: ನಿರಂತರ ಉಪಟಳ ನೀಡುತ್ತಿದ್ದ ಮಕ್ನಾ… ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ… ನಾಪೋಕ್ಲು: ಹಿಂದೂ ಸಂಗಮ ಸಮಾವೇಶ ಪ್ರಚಾರ ವೇಳೆ ಮಾತಿನ ಚಕಮಕಿ; ಓರ್ವನಿಗೆ ಗಾಯ ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು… “ನಾನು ಭ್ರಷ್ಟನಲ್ಲ”: ದಿಲ್ಲಿ ಅಬಕಾರಿ ಪ್ರಕರಣದಲ್ಲಿ ಖುಲಾಸೆಗೊಂಡ ಅರವಿಂದ್ ಕೇಜ್ರಿವಾಲ್ ಕಣ್ಣೀರು

ಇತ್ತೀಚಿನ ಸುದ್ದಿ

ಖ್ಯಾತ ಹಿಂದುಸ್ಥಾನಿ ಸಂಗೀತ ವಿದುಷಿ ವಿಜಯಾ ಕಿಶೋರ್ ಗೆ ಸ್ವರ ಶ್ರದ್ಧಾಂಜಲಿ

09/12/2024, 19:44

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmail.com

ಧಾರವಾಡದ ವೈಷ್ಣವಿ ಪಂಚಮುಖಿ ಅವರು ತಮ್ಮ ಸುಶ್ರಾವ್ಯ ಗಾಯನದಿಂದ ಸಂಗೀತಾ ಪ್ರಿಯರ ಮನ ಸೂರೆಗೊಂಡರು.
ಅವರು ಬಳ್ಳಾರಿ ನಗರದಲ್ಲಿ ಏರ್ಪಡಿಸಿದ ದಿ. ವಿಜಯಾ ಕಿಶೋರ್, ಖ್ಯಾತ ಹಿಂದುಸ್ಥಾನಿ ಸಂಗೀತ ವಿದೂಷಿ, ಅವರ ಮೂರನೇ ಪುಣ್ಯತಿಥಿ ಅಂಗವಾಗಿ ಆಯೋಜಿಸಿದ ‘ಸ್ವರ ಶ್ರದ್ಧಾಂಜಲಿ’ ಕಾರ್ಯಕ್ರಮದಲ್ಲಿ ಭಾಗವಸಿದ್ದರು.

ಬಾಗೇಶ್ರೀ ರಾಗದಲ್ಲಿ ‘ಮೊರೇ ಮನಾ ಚೀಸನ್ನು ವಿಲಂಬಿತ ಏಕ್ ತಾಳದಲ್ಲಿ ಆರಂಭಿಸಿ ದೃತ್ ತೀತಾಳಡಲ್ಲಿ ಕೌನ್ ಕರತ್ ತೊರೆ ಮಿಲನ ಪಿಯಾರವಾ ಪ್ರಸ್ತುತ ಪಡಿಸಿದರು. ನಂತರ ಒಂದು ತರಾನಾ ಹಾಡಿ ಸ್ವರಗಳ ಮೇಲೆ ಹಾಗೂ ತಾನುಗಳ ಮೇಲೆ ತಮ್ಮ ಹಿಡಿತವನ್ನು ಪ್ರದರ್ಶಿಸಿದರು.
ಸುಗಮ ಸಂಗೀತದಲ್ಲಿ ಜನಪ್ರಿಯ ದಾಸರ ಪದಗಳು ಹಾಗೂ ಒಂದು ಅಭಂಗ್ ಪ್ರಸ್ತುತ ಪಡಿಸಿ ಶ್ರೂತ್ರುಗಳ ಮೆಚ್ಚಿಗೆ ಪಡೆದರು.
ಅವರಿಗೆ ತಬಲಾದಲ್ಲಿ ಅವರ ಪತಿ ಜಯತೀರ್ಥ ಪಂಚಮುಖಿ ಸಾಥ್ ನೀಡಿದರೆ ಹಾರ್ಮೋನಿಯಂ ಸಾಥ್ ದೊಡ್ಡಬಸವ, ತಾಳದಲ್ಲಿ ಅವರ ಮಗ ಸುಮನ್ಯು ನೀಡಿದರು.
ಇದಕ್ಕೂ ಮೊದಲು ವಿಜಯಾ ಕಿಶೋರ್ ಅವರ ಶಿಷ್ಯರು ಗಳಾದ ಕುಮಾರ ಶಶಾಂಕ್, ಕುಮಾರ ಆಭಯ ಹಾಗೂ ಕುಮಾರ ಶಮಂತ್ ರಾಗ ಕೇದಾರದಲ್ಲಿ ಛೋಟಾ ಖ್ಯಾಲ್ ಹಾಗೂ ದಾಸರ ಪದ ಮತ್ತು ವಚನ ಪ್ರಸ್ತುತಪಡಿಸಿದರು.
ಜಯಲಕ್ಷ್ಮಿ, ಸಾನ್ವಿ ಹಾಗೂ ಕುಮಾರ್ ಆಯುಷ್ ರಾಗ ಯಮನದಲ್ಲಿ ಛೋಟಾ ಖಾಲಿ ಹಾಗೂ ದಸ್ಕ್ರಾ ಪದ ಮತ್ತು ವಚನ ಗಾಯನ ಮಾಡಿದರು.
ಸನ್ನಿಧಿ ಶುದ್ಧ ಸಾರ್ನ್ಗ್ ರಾಗದಲ್ಲಿ ಒಂದು ಛೋಟಾ ಖ್ಯಾಲ್ ಹಾಗೂ ದಾಸರ ಪದ ಮತ್ತು ವಚನ ಹಾಡಿದರು.
ಹಿರಿಯ ಶಿಷ್ಯೆ ಸಂಧ್ಯಾ ಕೊಳಚಲಂ ಅವರು ಸುಗಮ ಸಂಗೀತದಲ್ಲಿ ಭಾವಗೀತೆ, ದಸರ ಪದ, ವಚನ ಪ್ರಸ್ತುತ ಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು