10:28 AM Saturday5 - July 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ

ಇತ್ತೀಚಿನ ಸುದ್ದಿ

ಖ್ಯಾತ ಹಿಂದುಸ್ಥಾನಿ ಸಂಗೀತ ವಿದುಷಿ ವಿಜಯಾ ಕಿಶೋರ್ ಗೆ ಸ್ವರ ಶ್ರದ್ಧಾಂಜಲಿ

09/12/2024, 19:44

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmail.com

ಧಾರವಾಡದ ವೈಷ್ಣವಿ ಪಂಚಮುಖಿ ಅವರು ತಮ್ಮ ಸುಶ್ರಾವ್ಯ ಗಾಯನದಿಂದ ಸಂಗೀತಾ ಪ್ರಿಯರ ಮನ ಸೂರೆಗೊಂಡರು.
ಅವರು ಬಳ್ಳಾರಿ ನಗರದಲ್ಲಿ ಏರ್ಪಡಿಸಿದ ದಿ. ವಿಜಯಾ ಕಿಶೋರ್, ಖ್ಯಾತ ಹಿಂದುಸ್ಥಾನಿ ಸಂಗೀತ ವಿದೂಷಿ, ಅವರ ಮೂರನೇ ಪುಣ್ಯತಿಥಿ ಅಂಗವಾಗಿ ಆಯೋಜಿಸಿದ ‘ಸ್ವರ ಶ್ರದ್ಧಾಂಜಲಿ’ ಕಾರ್ಯಕ್ರಮದಲ್ಲಿ ಭಾಗವಸಿದ್ದರು.

ಬಾಗೇಶ್ರೀ ರಾಗದಲ್ಲಿ ‘ಮೊರೇ ಮನಾ ಚೀಸನ್ನು ವಿಲಂಬಿತ ಏಕ್ ತಾಳದಲ್ಲಿ ಆರಂಭಿಸಿ ದೃತ್ ತೀತಾಳಡಲ್ಲಿ ಕೌನ್ ಕರತ್ ತೊರೆ ಮಿಲನ ಪಿಯಾರವಾ ಪ್ರಸ್ತುತ ಪಡಿಸಿದರು. ನಂತರ ಒಂದು ತರಾನಾ ಹಾಡಿ ಸ್ವರಗಳ ಮೇಲೆ ಹಾಗೂ ತಾನುಗಳ ಮೇಲೆ ತಮ್ಮ ಹಿಡಿತವನ್ನು ಪ್ರದರ್ಶಿಸಿದರು.
ಸುಗಮ ಸಂಗೀತದಲ್ಲಿ ಜನಪ್ರಿಯ ದಾಸರ ಪದಗಳು ಹಾಗೂ ಒಂದು ಅಭಂಗ್ ಪ್ರಸ್ತುತ ಪಡಿಸಿ ಶ್ರೂತ್ರುಗಳ ಮೆಚ್ಚಿಗೆ ಪಡೆದರು.
ಅವರಿಗೆ ತಬಲಾದಲ್ಲಿ ಅವರ ಪತಿ ಜಯತೀರ್ಥ ಪಂಚಮುಖಿ ಸಾಥ್ ನೀಡಿದರೆ ಹಾರ್ಮೋನಿಯಂ ಸಾಥ್ ದೊಡ್ಡಬಸವ, ತಾಳದಲ್ಲಿ ಅವರ ಮಗ ಸುಮನ್ಯು ನೀಡಿದರು.
ಇದಕ್ಕೂ ಮೊದಲು ವಿಜಯಾ ಕಿಶೋರ್ ಅವರ ಶಿಷ್ಯರು ಗಳಾದ ಕುಮಾರ ಶಶಾಂಕ್, ಕುಮಾರ ಆಭಯ ಹಾಗೂ ಕುಮಾರ ಶಮಂತ್ ರಾಗ ಕೇದಾರದಲ್ಲಿ ಛೋಟಾ ಖ್ಯಾಲ್ ಹಾಗೂ ದಾಸರ ಪದ ಮತ್ತು ವಚನ ಪ್ರಸ್ತುತಪಡಿಸಿದರು.
ಜಯಲಕ್ಷ್ಮಿ, ಸಾನ್ವಿ ಹಾಗೂ ಕುಮಾರ್ ಆಯುಷ್ ರಾಗ ಯಮನದಲ್ಲಿ ಛೋಟಾ ಖಾಲಿ ಹಾಗೂ ದಸ್ಕ್ರಾ ಪದ ಮತ್ತು ವಚನ ಗಾಯನ ಮಾಡಿದರು.
ಸನ್ನಿಧಿ ಶುದ್ಧ ಸಾರ್ನ್ಗ್ ರಾಗದಲ್ಲಿ ಒಂದು ಛೋಟಾ ಖ್ಯಾಲ್ ಹಾಗೂ ದಾಸರ ಪದ ಮತ್ತು ವಚನ ಹಾಡಿದರು.
ಹಿರಿಯ ಶಿಷ್ಯೆ ಸಂಧ್ಯಾ ಕೊಳಚಲಂ ಅವರು ಸುಗಮ ಸಂಗೀತದಲ್ಲಿ ಭಾವಗೀತೆ, ದಸರ ಪದ, ವಚನ ಪ್ರಸ್ತುತ ಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು