ಇತ್ತೀಚಿನ ಸುದ್ದಿ
ಕುಡುಪು: 1 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ. ವೈ ಭರತ್ ಶೆಟ್ಟಿ ಚಾಲನೆ
11/12/2022, 21:41

ಮಂಗಳೂರು(reporterkarnataka.com): ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಕುಡುಪು ಶಕ್ತಿ ಕೇಂದ್ರದ ಪರಿಸರದಲ್ಲಿ ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಂಗವಾಗಿ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಭಾನುವಾರ ಪಂಜಿರೈಲ್ ರಸ್ತೆ ಹಾಗೂ ಪಾಲ್ದಾನೆಯ ಚರಂಡಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಲಕ್ಷ್ಮಣ್ ಶೆಟ್ಟಿಗಾರ್, ಪಚ್ಚನಾಡಿ ಕಾರ್ಪೊರೇಟರ್ ಸಂಗೀತಾ ಆರ್. ನಾಯಕ್, ಶಕ್ತಿಕೇಂದ್ರ ಪ್ರಮುಖರಾದ ಶಿವಪ್ರಕಾಶ್ ಕುಡುಪು, ಹಿರಿಯ ನಾಗರಿಕ ಪ್ರಕೋಷ್ಠದ ಸದಸ್ಯರಾದ ರಮೇಶ್ ಕರ್ಕೇರ ಕುಡುಪು, ಬೂತ್ ಅಧ್ಯಕ್ಷರುಗಳಾದ ಶ್ರೀ ದತ್ತ, ದೇವಿ ಪ್ರಕಾಶ್, ಬೂತ್ ಸಮಿತಿ ಸದಸ್ಯರಾದ ಯಶಪಾಲ್, ಯುವ ಮೋರ್ಚಾ ಸದಸ್ಯರಾದ ರಾಕೇಶ್, ಮಂಗಳೂರು ದಕ್ಷಿಣ ಮಂಡಲ ಕಾರ್ಯದರ್ಶಿ ಅಜಯ್ ಮಂಗಳಾನಗರ, ಕುಡುಪು ಬಿಜೆಪಿ ಪ್ರಮುಖರಾದ ಸುಜಾನ್ ದಾಸ್ ಕುಡುಪು, ದಿನೇಶ್ ಪಂಜಿರೈಲ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.