6:33 PM Friday6 - February 2026
ಬ್ರೇಕಿಂಗ್ ನ್ಯೂಸ್
ರಾಜ್ಯ ಆಹಾರ ಆಯೋಗದ ಅಧ್ಯಕ್ಷರ ತಂಡದಿಂದ ವಿವಿಧೆಡೆ ದಿಢೀರ್ ಭೇಟಿ: ಪರಿಶೀಲನೆ *ಕರಾವಳಿವರೆಗೆ ವಂದೇ ಭಾರತ್ ವಿಸ್ತರಿಸುವಂತೆ ರೈಲ್ವೆ ಸಚಿವರಿಗೆ ಸಂಸದ ಶ್ರೀನಿವಾಸ ಪೂಜಾರಿ ಮನವಿ* ಅನೈತಿಕ ಸಂಬಂಧ ಕೊಲೆಗೆ ಕಾರಣ?: ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7… ಎಸಿ ಕೋರ್ಟ್ ಕೇಸ್: ಎರಡೂವರೆ ವರ್ಷದಲ್ಲಿ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದ್ದೇವೆ: ಸಚಿವ ಕೃಷ್ಣ ಬೈರೇಗೌಡರು… ತೀರ್ಥಹಳ್ಳಿ ಸಮೀಪದ ಮೇಗರವಳ್ಳಿಯಲ್ಲಿ ಭೀಕರ ಅಪಘಾತ: ಗಾಯಾಳು ಮಹಿಳೆ ಸಾವು Madikeri | ಕುಶಾಲನಗರ ಬಳಿ ಬೈಕ್ ಡಿಕ್ಕಿ: ಪಾದಚಾರಿ ಯುವಕ ದಾರುಣ ಸಾವು ಪೊಲೀಸರಿಗೆ ತಲೆನೋವಾದ ಕೇರಳದ ‘ಮಲ್ಲು’ ಗ್ಯಾಂಗ್: ಚಿನ್ನದ ಉದ್ಯಮಿಗಳೇ ಇವರ ಟಾರ್ಗೆಟ್ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ಕೇಂದ್ರ ವಿತ್ತ ಸಚಿವೆಗೆ ಕೇರಳ ಸಿಎಂ… ವರನಿಗೆ ಚಾಕು ಇರಿದ ಕೇಸ್‌ಗೆ ಬಿಗ್ ಟ್ವಿಸ್ಟ್ : ಸ್ಕೆಚ್ ಹಾಕಿದ್ದು ಅವರಲ್ಲ,… ಕಂಬನಿ ನಡುವೆ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ ರಾಯ್‌ ಅಂತಿಮವಿಧಿ: ಬನ್ನೇರುಘಟ್ಟದ ಕಾಸಾಗ್ರೌಂಡ್…

ಇತ್ತೀಚಿನ ಸುದ್ದಿ

ಕೂಡ್ಲಿಗಿ: ಲೋಕ ಕಲ್ಯಾಣಕ್ಕಾಗಿ 150 ಕಿಮೀ ದೂರದ ಆಂಧ್ರದಿಂದ ಕೊಟ್ಟೂರಿಗೆ‌ ಕಾಲ್ನಡಿಗೆಯಲ್ಲಿ ಆಗಮಿಸಿದ ಭಕ್ತ ದೊಡ್ಡನಗೌಡ

24/12/2023, 11:11

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಡಿ. 25ರಂದು ಕೊಟ್ಟೂರಲ್ಲಿ ಜರುಗಲಿರುವ, ಶ್ರೀಗುರು ಕೊಟ್ಟೂರೇಶ್ವರ ಕಾರ್ತೀಕೋತ್ಸವಕ್ಕಾಗಿ ನೆರೆ ರಾಜ್ಯ ಆಂಧ್ರ ಪ್ರದೇಶದಿಂದ ಕರ್ನಾಟಕದ ಕೊಟ್ಟೂರು ಕ್ಷೇತ್ರಕ್ಕೆ, ಭಕ್ತನೋರ್ವ ಸುಮಾರು 150 ಕಿಮೀ ಅಂತರದಿಂದ ಕಾಲ್ನಡಿಗೆ ಮೂಲಕ ಶ್ರೀಕೊಟ್ಟೂರೇಶ್ವರ ಸ್ವಾಮಿ ದರ್ಶನಕ್ಕಾಗಿ ತೆರಳಿದ್ದಾನೆ.
ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಆಲೂರು ತಾಲೂಕು ಆಲಅಡವಿ ಮಂಡಲದ ಸಿರಿಗಾಪುರ ಗ್ರಾಮದ 28 ವರ್ಷದ ಯುವ ರೈತ ದೊಡ್ಡನಗೌಡ ಅವರು ಲೋಕ ಕಲ್ಯಾಣಕ್ಕಾಗಿ ಹಾಗೂ ಸಕಲರಿಗೂ ನೆಮ್ಮದಿ ನೀಡೆಂದು ಬೇಡಿಕೊಳ್ಳಲು, 150ಕಿ ಮೀ ದೂರದಿಂದ ಕಾಲ್ನಡಿಗೆ ಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಮೂಲಕ ವಿಜಯನಗರ ಜಿಲ್ಲೆಯ ಕೊಟ್ಟೂರು ಶ್ರೀಕೊಟ್ಟೂರೇಶ್ವರ ದೇವರ ಕಾರ್ತೀಕೋತ್ಸವಕ್ಕಾಗಿ, 150 ಕಿಮೀ ಕಾಲ್ನಡಿಗೆ ಯಾತ್ರೆ ಕೈಗೊಂಡಿದ್ದಾರೆ ದೊಡ್ಧನ ಗೌಡ. ಇದು ಸತತ 2ನೇ ವರ್ಷದ ಪಾದಯಾತ್ರೆಯಾಗಿದ್ದು, ಆಂದ್ರಪ್ರದೇಶದ ಕರ್ನೂಲು ಜಿಲ್ಲೆಯಿಂದ ಕರ್ನಾಟಕದ ವಿಜಯನಗರ ಜಿಲ್ಲೆ ಕೊಟ್ಟೂರುಗೆ ಒಟ್ಟು 150 ಕಿಲೋ ಮೀಟರ್ ಪಾದಯಾತ್ರೆ ಮಾಡಿದ್ದಾರಡ ಯುವ ರೈತ 28 ವರ್ಷದ ದೊಡ್ಡನಗೌಡ, ಡಿ23ರಂದು ಸಂಜೆ ಕೂಡ್ಲಿಗಿ ಪಟ್ಟಣ ಪ್ರವೇಶಿಸಿದ ಆಂಧ್ರ ಮೂಲದ ಶ್ರೀಕೊಟ್ಟೂರೇಶ್ವರ ಸ್ವಾಮಿಯ ಭಕ್ತ ದೊಡ್ಡನಗೌಡ. ಸೂರ್ಯಾಸ್ಥ ಆದ ಕಾರಣ ಅವರು ಪಟ್ಟಣದ ಹೊರವಲಯದ ಶ್ರೀ ಗಣೇಶನ ಗುಡಿಯಲ್ಲಿ ತಂಗಿದ್ದಾರೆ. 24ರ ಭಾನುಬಾರ ಬೆಳ್ಳಂಬೆಳಿಗ್ಗೆ ಮಡಿ ಮುಡಿಯೊಂದಿಗೆ, ತಮ್ಮ ಬಳಿಯಲ್ಲಿರುವ ಶ್ರೀಗುರು ಕೊಟ್ಟೂರೇಶ್ವರರ ಧ್ವಜಕ್ಕೆ ಪೂಜೆಗೈದು. ಲಘು ಉಪಹಾರ ಮತ್ತು ನೀರು ಸೇವಿಸುತ್ತಾರೆ, ಕೊಟ್ಟೂರು ಕಡೆ ಪಾದಯಾತ್ರೆ ಮುಂದುವರೆಸಿದ್ದಾರೆ ಭಕ್ತ ದೊಡ್ಡನಗೌಡ, ಶ್ರೀಕೊಟ್ಟೂರೇಶ್ವರ ದೇವರ ಭಾವಚಿತ್ರ ಇರುವ ಧ್ವಜವನ್ನಿಡಿದು ಪಾದಯಾತ್ರೆ ಮಾಡುತ್ತಾರೆ. ಡಿ 21ರಂದು ಆರಂಭಗೊಂಡ ಕಾಲ್ನಡಿಗೆಯಾತ್ರೆಯನ್ನು, ಅವರು ಉಪವಾಸ ವ್ರತದೊಂದಿಗೆ ಮಾಡುತ್ತಿರುವುದೇ ವಿಶೇಷವಾಗಿದೆ. ಆಹಾರವನ್ನೇ ಸೇವಿಸದೇ ಕೇವಲ ಫಲಾರ (ಖಾರ ಮಂಡಕ್ಕಿ ಮಿರ್ಚಿ) ಹಾಗೂ ನೀರನ್ನು ಮಾತ್ರ ಸೇವಿಸುತ್ತಾರೆ ದೊಡ್ಡನಗೌಡ. ತಮ್ಮ ಸ್ವ ಗ್ರಾಮದಿಂದ ಹೊರಟ ಯುವ ರೈತ ದೊಡ್ಡಗೌಡ ಪ್ರತಿ ದಿನಕ್ಕೆ, 30-35ಕಿಮೀ ಕಾಲ್ನಡಿಗೆ ಯಾತ್ರೆ ಮೂಲಕ ಮಾರ್ಗ ಕ್ರಮಿಸುತ್ತಾರೆ. ಕೊಟ್ಟೂರಲ್ಲಿ ಡಿ25ರಂದು ಜರುಗಲಿರುವ, ಶ್ರೀಕೊಟ್ಟೂರೇಶ್ವರ ಕಾರ್ತೀಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀಗುರು ಕೊಟ್ಟೂರೇಶ್ವರರ ಭಕ್ತ ದೊಡ್ಡನಗೌಡ ಇವರು ಹುಟ್ಟು ಉಗ್ಗುವಿಕೆಯಿಂದ ಬಳ ಲುತಿದ್ದು, ದೊಡ್ಡನ ಗೌಡ ಮಾತನಾಡಿದ್ದಾನೆ. ಲೋಕ ಕಲ್ಯಾಣಕ್ಕಾಗಿ ಹಾಗೂ ಸರ್ವರಿಗೂ ನೆಮ್ಮದಿ ನೀಡೆಂದು ತನ್ನ ಮನೆದೇವರಾದ, ಕೊಟ್ಟೂರು ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯಲ್ಲಿ ಬೇಡುವುದಾಗಿ. ಅದಕ್ಕಾಗಿ ಕಾಲ್ನಡಿಗೆ ಮೂಲಕ ಕೊಟ್ಟೂರಿಗೆ ತೆರಳುತ್ತಿರುವುದಾಗಿ ದೊಡ್ಡನಗೌಡ ನುಡಿದಿದ್ದಾರೆ. ಉಪವಾಸ ವ್ರತದೊಂದಿಗೆ ಸತತ ಐದು ದಿನಗಳ ಕಾಲ ಏಕಾಂಗಿಯಾಗಿ, ಆಂಧ್ರ ಪ್ರದೇಶದಿಂದ ಆರಂಭಿಸಿದ ಕಾಲ್ನಡಿಗೆಯಾತ್ರೆ ದಿನದ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ, ದಿನ ಒಂದಕ್ಕೆ 30-40 ಕಿ ಮೀ ಕ್ರಮಿಸುವುದಾಗಿ ಅವರು ತಿಳಿಸಿದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೆ ಎಡ ಬಿಡದೆ ನಡೆಯುವ ದೊಡ್ಡನಗೌಡ, ಪಾದರಕ್ಷೆಯಿಲ್ಲದೇ ಬರೀ ಕಾಲಲ್ಲಿ 150 ಕಿಮೀ ಕಾಲ್ನಡಿಗೆಯಾತ್ರೆ ಕೈಗೊಂಡಿದ್ದಾರೆ. ಇವರ ಈ ಭಕ್ತಿಯ ಪರಾಕಾಷ್ಠೆಗೆ ಆಧ್ಯಾತ್ಮ ಚಿಂತಕರು ಹಾಗೂ ಆಸ್ಥಿಕರು, ಪ್ರಶಸಂನೆ ವ್ಯಕ್ತಪಡಿಸಿದ್ದಾರೆ. ಆಂಧ್ರ ಮೂಲದ ಯುವ ರೈತ ಶ್ರೀಗುರು ಕೊಟ್ಟೂರೇಶ್ವರರ ಭಕ್ತರಾದ, ದೊಡ್ಡನಗೌಡರ ಸಂಪರ್ಕ ಸಂಖ್ಯೆ 93468 21823 ಇದ್ದು. ಇವರು ಸದ್ಯ ಡಿ24ರಂದು ಬೆಳಿಗ್ಗೆ ಕೂಡ್ಲಿಗಿ ಪಟ್ಟಣದ ಶ್ರೀಗಣೇಶ ಗುಡಿಯಿಂದ ಕೊಟ್ಟೂರು ಕಡೆ ಕಾಲ್ನಡಿಗೆ ಯಾತ್ರೆ ಬೆಳಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು