11:44 PM Wednesday17 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ಕೆಪಿಸಿಸಿ ಅಧ್ಯಕ್ಷರಿಂದ ಏಟು ತಿಂದಿದ್ದು ಕಾಂಗ್ರೆಸ್ ಅಭಿಮಾನಿಯಲ್ಲ, ಜನತಾ ದಳದ ಕಾರ್ಯಕರ್ತ !!: ಏನು ವಿಚಿತ್ರ ನೋಡಿ! 

12/07/2021, 11:05

ಮಂಡ್ಯ(reporterkarnataka news): ಅವರ ಹೆಸರು ಉಮೇಶ್ ಮದ್ದೂರು. ಜೆಡಿಎಸ್ ಕಾರ್ಯಕರ್ತರು. ತೊರೆಬೊಮ್ಮನ ಹಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರೂ ಹೌದು.

ಉಮೇಶ್ ಬಗ್ಗೆ ಯಾಕಿಷ್ಟು ವಿವರ ಅಂತ ಅಂದುಕೊಂಡ್ರಾ…? ಕಾರಣ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೈಯಿಂದ ಏಟು ತಿಂದವರು ಇದೇ ಉಮೇಶ್ ಮದ್ದೂರು.

ಹಾಗಾದರೆ ಜೆಡಿಎಸ್ ಕಾರ್ಯಕರ್ತರಾದ ಉಮೇಶ್ ಅವರು ಕಾಂಗ್ರೆಸ್ ಅಧ್ಯಕ್ಷರ ಜತೆ ಆ ಸಣ್ಣ ಮೆರವಣಿಗೆಯಲ್ಲಿ ಯಾಕೆ ಸೇರ್ಕೊಂಡರು? ಯಾಕೆ ಹೊಡೆಸಿಕೊಂಡ್ರು? ಎನ್ನುವ ಕುತೂಹಲ ನಿಮಗಿದೆಯೇ? ಹಾಗಾದರೆ ಉಮೇಶ್ ಮದ್ದೂರು ಅವರ ಬಾಯಿಯಲ್ಲೇ ಏನಾಯಿತು ಅನ್ನುವುದನ್ನು

ಕೇಳೋಣ ಬನ್ನಿ….

ನಾನು ನಮ್ಮ ಒಕ್ಕಲಿಗರ ನಾಯಕ ಬರುತ್ತಿದ್ದಾರೆ ಎಂಬ ಅಭಿಮಾನದಿಂದ ಹೋಗಿದ್ದೆ. ಫೋಟೋ ತೆಗೆದುಕೊಳ್ಳಬೇಕೆಂದು ಹತ್ತಿರ ಹೋದೆ. ಹೆಗಲ ಮೇಲೆ ಕೈಹಾಕುವಷ್ಟು ಸಣ್ಣತನ ನನ್ನಲ್ಲಿ ಇರಲಿಲ್ಲ. ನಾನೊಬ್ಬ ಪ್ರಜ್ಞಾವಂತ ವ್ಯಕ್ತಿ ಎನ್ನುತ್ತಾರೆ ಉಮೇಶ್ ಮದ್ದೂರು.

ಸಾಕಷ್ಟು ನೊಂದುಕೊಂಡಿರುವ ಉಮೇಶ್ ಮತ್ತೆ ಮಾತು ಮುಂದುವರಿಸುತ್ತಾರೆ. ಶಿವಕುಮಾರ್ ಅವರು ನನಗೆ ಸಂಬಂಧಿಕರೂ ಆಗಬೇಕು. ಬೇರೆ ಯಾರಾದರೂ ನನ್ನ ಮೇಲೆ ಕೈ ಮಾಡುತ್ತಿದ್ದರೆ ನಾನು ಅಲ್ಲೇ ಪ್ರತಿಭಟನೆ ಮಾಡುತ್ತಿದ್ದೆ. ಅವರ ಸ್ಥಾನಮಾನಕ್ಕೆ ಗೌರವ ಕೊಟ್ಟು ಸುಮ್ಮನಾಗಿದ್ದೇನೆ. ಶಿವಕುಮಾರ್ ಅವರು ಇನ್ನಾದರೂ ಇಂತಹ ವರ್ತನೆ ಬಿಡಬೇಕು ಎಂದು ಬುದ್ದಿವಾದದ ಮಾತನ್ನು ಬಹಳ ನಯವಾಗಿ ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು